10:18 AM Friday4 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ*

29/08/2026, 20:03

ಉಡುಪಿ(reporterkarnataka.com): ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ ‘ಅಷ್ಟಮಂಗಲ ಪ್ರಶ್ನೆ’ಯ ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ ಮುನ್ಸೂಚನೆ ಬೆಳಕಿಗೆ ಬಂದಿದೆ.
ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ ಉಡುಪಿ ಕೃಷ್ಣ ಮಠ ಸೇರಿದಂತೆ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಹಾಗೂ ಜಪ ಯಜ್ಞಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

*ಡಿಸೆಂಬರ್ ಒಳಗೆ ಜಗತ್ತಿಗೆ ಆಪತ್ತು? ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಿದ್ದೇನು?*
ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲಾ ಗ್ರಹಗಳು ಬಂದಾಗ ‘ಕಾಳಸರ್ಪ ಯೋಗ’ ಸೃಷ್ಟಿಯಾಗುತ್ತದೆ. ಇದರ ದುಷ್ಪರಿಣಾಮ ಕೇವಲ ವ್ಯಕ್ತಿಗಳಿಗಷ್ಟೇ ಅಲ್ಲದೆ ಇಡೀ ಭೂಮಂಡಲಕ್ಕೆ ತಟ್ಟಲಿದೆ ಎಂದು ಪ್ರಶ್ನಾಚಿಂತನೆಯಲ್ಲಿ ತಿಳಿದು ಬಂದಿದೆ.

*ಪ್ರಾಕೃತಿಕ ವಿಕೋಪಗಳು:*
ಸುನಾಮಿ, ಭೂಕಂಪ, ಅತಿವೃಷ್ಟಿ ಅಥವಾ ಭೀಕರ ಬರಗಾಲದಂತಹ ನೈಸರ್ಗಿಕ ದುರಂತಗಳ ಸಾಧ್ಯತೆ.

*ಮಹಾಮಾರಿಗಳ ಭೀತಿ:* ಕರೋನಾದಂತಹ ಹೊಸ ಮಾದರಿಯ ಸಾಂಕ್ರಾಮಿಕ ರೋಗರುಜಿನಗಳು ಹರಡುವ ಆತಂಕ.
ರಾಜಕೀಯ & ಯುದ್ಧದ ಕಾರ್ಮೋಡ: ಆಡಳಿತ ವ್ಯವಸ್ಥೆಗಳಲ್ಲಿ ಕ್ಷೋಭೆ, ದೇಶ-ವಿದೇಶಗಳಲ್ಲಿ ಆಂತರಿಕ ಗಲಭೆಗಳು ಹಾಗೂ ಉಕ್ರೇನ್ ಯುದ್ಧದಂತಹ ಪರಿಸ್ಥಿತಿಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ.

ಈ ಎಲ್ಲಾ ದುಷ್ಪರಿಣಾಮಗಳು ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿಯೇ ಜಗತ್ತಿನ ಮೇಲೆ ಗೋಚರಿಸಲಿವೆ ಎಂದು ಎಚ್ಚರಿಸಲಾಗಿದೆ.

*ದೋಷ ನಿವಾರಣೆಗೆ 18 ಕೋಟಿ ರಾಮ ಮಂತ್ರ, 1 ಕೋಟಿ ಕೃಷ್ಣ ಮಂತ್ರ ಜಪ!*
ಲೋಕ ಕಲ್ಯಾಣಕ್ಕಾಗಿ ಹಾಗೂ ಸಂಭವನೀಯ ಗಂಡಾಂತರಗಳನ್ನು ತಡೆಯಲು ದೈವಜ್ಞರು ಸೂಚಿಸಿರುವ ಪರಿಹಾರಗಳನ್ನು ಉಡುಪಿ ಶ್ರೀಕೃಷ್ಣ ಮಠದ ದಿವಾಣರಾದ ಉದಯ ಸರಳತ್ತಾಯ ಅವರು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು