6:10 PM Thursday11 - December 2025
ಬ್ರೇಕಿಂಗ್ ನ್ಯೂಸ್
ಆರೆಸ್ಸೆಸ್ ಅಂದ್ರೆ ಉರಿಯುವ ಕಾಂಗ್ರೆಸ್ ನಾಯಕರಿಗೆ ಅವರ ಸರ್ಕಾರದಿಂದಲೇ ಉತ್ತರ: ಕೇಂದ್ರ ಸಚಿವ… ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ 37,48,700 ವಸತಿ ರಹಿತರು: ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಖಾನ್ ಬೆಂಗಳೂರು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ ಉದ್ಘಾಟನೆ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಮೆಟೀರಿಯಲ್ಸ್ ನೆಟ್‌ವರ್ಕ್ (Q-MINt) ಸ್ಥಾಪಿಸಲು ಪ್ರಧಾನಿಗೆ ಸಿಎಂ ಪತ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನೆಗಳ ಸಮರ್ಪಕ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್… ಸುವರ್ಣಸೌಧ ಮುತ್ತಿಗೆ ಹಾಕಲು ಯತ್ನ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಭಟನಾಕಾರರು ಪೊಲೀಸ್… ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆ

ಇತ್ತೀಚಿನ ಸುದ್ದಿ

ಸೇವೆ ಮಾಡುವ ಅವಕಾಶದಿಂದ ವಂಚಿತನಾದ ನೋವು ಇದೆ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

25/07/2024, 15:08

ಶಿವು ರಾಠೋಡ ನಾಲತವಾಡ ವಿಜಯಪುರ

info.reporterkarnataka@gmail.com

ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ನನ್ನನ್ನು ಸೋಲಿಸಿದರು. ನಾನಾರಿಗೂ ಮೋಸ ಮಾಡಿಲ್ಲದಿರುವುದೇ ನನ್ನ ಸಾಧನೆ. ಮೂರು ಬಾರಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವ ಅವಕಾಶವನ್ನು ಕೊಟ್ಟಿದ್ದಿರಿ. ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ತಿಳಿದವರು ನನ್ನನ್ನು ಸೋಲಿಸಿದರು, ನನಗೆ ಅಧಿಕಾರದ ಆಶೆಯ ಹುಚ್ಚಿಲ್ಲ, ನಾನು ಸೋತಾಗ ಐದು ವರ್ಷಗಳ ನಿಮ್ಮ ಸೇವೆ ಮಾಡುವ ಅವಕಾಶದಿಂದ ವಂಚಿತನಾದೆ ಎಂಬ ನೋವು ಒಂದು ಕ್ಷಣ ಕಾಡಿತು ಎಂದು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.


ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಸ್ಥಳೀಯ ರತ್ನ ಸಂಗಮ ಮಂಗಲ ಕಾರ್ಯಾಲಯದಲ್ಲಿ ಚಂದ್ರಶೇಖರ ಗಂಗನಗೌಡ್ರ ಗೆಳೆಯರ ಬಳಗದಡಿ ಹಮ್ಮಿಕೊಂಡಿದ್ದ ತಮ್ಮ 55ನೇ ಹುಟ್ಟುಹಬ್ಬ ಹಾಗೂ ಸಮಾಜ ಸೇವಕ ಚಂದ್ರಶೇಖರ ಗಂಗನಗೌಡ ಅವರ 45ನೇ ಹುಟ್ಡುಹಬ್ಬ ಆಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಎರಡು ಅಣೆಕಟ್ಟಿನ ನಡುವಿನ ಬಂಗಾರದ ಭೂಮಿಯಿದ್ದು, ಬಂಗಾರದ ಬೆಳೆ ಬೆಳೆ ಬೆಳೆಯಬೇಕು. ಭೂಮಿ ಇದ್ದವನೇ ಸಿರಿವಂತ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇದಕ್ಕೂ ಮೊದಲು ವೀರೇಶ್ವರ ಶರಣರ ಮಹಾಮನೆಯಲ್ಲಿ ಶರಣರಿಗೆ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸಿದರು, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಶರಣ ವೀರೇಶ್ವರರ, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣಿ ಮಾಡಿ ಶರಣರ ಮಠದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬಂದರು. ಕೆಂಚಪ್ಪ ಬಿರಾದಾರ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಮುನ್ನಾಧಣಿ ನಾಡಗೌಡ್ರ, ಗಿರೀಶ್ ಪಾಟೀಲ ಮಾತನಾಡಿದರು.
ರಾಜು ಹಾದಿಮನಿ ಕಾರ್ಯಕ್ತಮ ನಿರೂಪಿಸಿ ವಂದಿಸಿದರು. ಬಿಜೆಪಿ ಮುಖಂಡ ಬಿ.ಎಂ.ತಾಳಿಕೋಟಿ ವಕೀಲರು ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು