11:53 AM Thursday27 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಸೇವೆ ಮಾಡುವ ಅವಕಾಶದಿಂದ ವಂಚಿತನಾದ ನೋವು ಇದೆ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

25/07/2024, 15:08

ಶಿವು ರಾಠೋಡ ನಾಲತವಾಡ ವಿಜಯಪುರ

info.reporterkarnataka@gmail.com

ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ನನ್ನನ್ನು ಸೋಲಿಸಿದರು. ನಾನಾರಿಗೂ ಮೋಸ ಮಾಡಿಲ್ಲದಿರುವುದೇ ನನ್ನ ಸಾಧನೆ. ಮೂರು ಬಾರಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವ ಅವಕಾಶವನ್ನು ಕೊಟ್ಟಿದ್ದಿರಿ. ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ತಿಳಿದವರು ನನ್ನನ್ನು ಸೋಲಿಸಿದರು, ನನಗೆ ಅಧಿಕಾರದ ಆಶೆಯ ಹುಚ್ಚಿಲ್ಲ, ನಾನು ಸೋತಾಗ ಐದು ವರ್ಷಗಳ ನಿಮ್ಮ ಸೇವೆ ಮಾಡುವ ಅವಕಾಶದಿಂದ ವಂಚಿತನಾದೆ ಎಂಬ ನೋವು ಒಂದು ಕ್ಷಣ ಕಾಡಿತು ಎಂದು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.


ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಸ್ಥಳೀಯ ರತ್ನ ಸಂಗಮ ಮಂಗಲ ಕಾರ್ಯಾಲಯದಲ್ಲಿ ಚಂದ್ರಶೇಖರ ಗಂಗನಗೌಡ್ರ ಗೆಳೆಯರ ಬಳಗದಡಿ ಹಮ್ಮಿಕೊಂಡಿದ್ದ ತಮ್ಮ 55ನೇ ಹುಟ್ಟುಹಬ್ಬ ಹಾಗೂ ಸಮಾಜ ಸೇವಕ ಚಂದ್ರಶೇಖರ ಗಂಗನಗೌಡ ಅವರ 45ನೇ ಹುಟ್ಡುಹಬ್ಬ ಆಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಎರಡು ಅಣೆಕಟ್ಟಿನ ನಡುವಿನ ಬಂಗಾರದ ಭೂಮಿಯಿದ್ದು, ಬಂಗಾರದ ಬೆಳೆ ಬೆಳೆ ಬೆಳೆಯಬೇಕು. ಭೂಮಿ ಇದ್ದವನೇ ಸಿರಿವಂತ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇದಕ್ಕೂ ಮೊದಲು ವೀರೇಶ್ವರ ಶರಣರ ಮಹಾಮನೆಯಲ್ಲಿ ಶರಣರಿಗೆ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸಿದರು, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಶರಣ ವೀರೇಶ್ವರರ, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣಿ ಮಾಡಿ ಶರಣರ ಮಠದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬಂದರು. ಕೆಂಚಪ್ಪ ಬಿರಾದಾರ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಮುನ್ನಾಧಣಿ ನಾಡಗೌಡ್ರ, ಗಿರೀಶ್ ಪಾಟೀಲ ಮಾತನಾಡಿದರು.
ರಾಜು ಹಾದಿಮನಿ ಕಾರ್ಯಕ್ತಮ ನಿರೂಪಿಸಿ ವಂದಿಸಿದರು. ಬಿಜೆಪಿ ಮುಖಂಡ ಬಿ.ಎಂ.ತಾಳಿಕೋಟಿ ವಕೀಲರು ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು