12:39 AM Sunday6 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಜೀ ಕನ್ನಡದ ‘ಮಹಾನಟಿ’ ಗ್ರಾಂಡ್ ಫಿನಾಲೆಗೆ ಮೂಡುಬಿದ್ರೆಯ ಆರಾಧನಾ ಭಟ್: ಶಿಕ್ಷಣ ಕಾಶಿಯ ಮುಡಿಗೆ ಮತ್ತೊಂದು ಗರಿ

07/07/2024, 19:17

ಲತಾ ಎ. ಕಲ್ಲಡ್ಕ ಮಂಗಳೂರು

info.reporterkarnataka@gmail.com

ಅತಿಯಾದ ಉತ್ಸಾಹ, ಯಥೇಚ್ಛ ಹುಮ್ಮಸ್ಸು. ನಟನಾ ಕೌಶಲ್ಯ ಜತೆಗೆ ಮಾತಲ್ಲೇ ಮೋಡಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ನಟಿ ಆರಾಧನಾ ಭಟ್ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಶೋನಲ್ಲಿ ಸೆಮಿಫೈನಲ್ಸ್ ನಿಂದ ಗ್ರಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ಮಜಾಭಾರತದ ಮೂಲಕ ಬಾಲನಟಿಯಾಗಿ ನಟನಾ ರಂಗಕ್ಕೆ ಕಾಲಿಟ್ಟ ಆರಾಧನಾ ಭಟ್ ಅವರು ಅನೇಕ ಚಲನಚಿತ್ರ, ಕಿರುಚಿತ್ರ, ಆಲ್ಬಂ ಸಾಂಗ್ ಗಳಲ್ಲಿ ನಟಿಸಿ ನಾಡಿನುದ್ದಗಲಕ್ಕೂ ಗುರುತಿಸಿಕೊಂಡಿದ್ದಾರೆ.
ಕಿರು ಹರೆಯದಲ್ಲೇ ಡಜನಿಗೂ ಅಧಿಕ ಸಿನಿಮಾ, ರಿಯಾಲಿಟಿ ಶೋ, ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳ ನಿರೂಪಕಿ, ಆರದಿರಲಿ ಬದುಕು ಆರಾಧನಾ ತಂಡದ ಒಡತಿಯಾಗಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಡಜನ್ ಗಟ್ಟಲೆ ಪುರಸ್ಕಾರ ಈ ಮರಿ ತಾರೆಯ ಹಿರಿಮೆ.
ಮೂಡುಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿರುವ ಆರಾಧನಾ ಇದೀಗ ಪದವಿ ತರಗತಿಯ ವಿದ್ಯಾರ್ಥಿನಿ. ನಿಡ್ಡೋಡಿಯ ಪದ್ಮಶ್ರೀ ಹಾಗೂ ಮೈಸೂರಿನ ರಾಜಗಿರಿ ದಂಪತಿಯ ಎರಡನೇ ಮುದ್ದಿನ ಮಗಳು.
ಚಿಕ್ಕ ವಯಸ್ಸಿನಲ್ಲೇ ಆರಾಧನಾಗೆ ನಟನೆಯ ಸೆಳೆತ.
ಇದರ ಹಿಂದೆ ತಾಯಿ ಪದ್ಮಶ್ರೀಯವರ ಛಲ. ಇವೆಲ್ಲದರ ಫಲವಾಗಿ 8ನೇ ತರಗತಿಯಲ್ಲಿ ಓದುತ್ತಿದ್ದಾಗ ಮಜಾಭಾರತ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ. ನಂತರ ನಟನೆಯಲ್ಲಿ ಆರಾಧನಾ ಹಿಂತಿರುಗಿ ನೋಡಿಯೇ ಇಲ್ಲ. ಮಜಾಭಾರತದಲ್ಲಿ ಅದ್ಭುತ ನಟನೆಯ ಮೂಲಕ ಇಡೀ ರಾಜ್ಯದ ಜನತೆಯ ಹೃದಯದಲ್ಲಿ ಅಚ್ಚೊತ್ತಿದ್ದಾರೆ.
ಆರಾಧನಾ ಭಟ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಜೀವನ ವಿಲೀನ’ ಸಿನಿಮಾದಲ್ಲಿ ಅದ್ಭುತ ನಟನೆ ನೀಡಿದ್ದಾರೆ. ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ನಂತರ ‘ಪುಟಾಣಿ ಪವರ್’ ಮಕ್ಕಳ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಕರ್ಣೆ’ ತುಳು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಅದಿತಿ ಪ್ರಭುದೇವ್ ಅವರ ಜತೆ ಕೂಡ ನಟಿಸಿದ್ದಾರೆ.


ಅರಗಿಣಿ ಖ್ಯಾತಿಯ ಆರಾಧನಾ ನಟನೆ, ಗಾಯನ, ನೃತ್ಯ, ನಿರೂಪಣೆ ಜತೆಗೆ ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅಸಹಾಯಕರಿಗೆ, ನಿರಾಶ್ರಿತರಿಗೆ ಹಾಗೂ ದುರ್ಬಲರಿಗೆ ತನ್ನ ‘ಆರದಿರಲಿ ಬದುಕು ಆರಾಧನಾ’ ತಂಡದ ಮೂಲಕ ಆರ್ಥಿಕ ನೆರವು ನೀಡುತ್ತಿದ್ದಾರೆ.
ಆರಾಧನಾಳಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ಪ್ರತಿಭಾ ರತ್ನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಮಾಜಿಕ ಕಳಕಳಿ ಪುರಸ್ಕಾರ, ಸಾಧನಾಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪುಟ್ಟ ಮುಡಿಯನ್ನೇರಿದೆ. ಎಲ್ಲಕ್ಕಿಂತ ಮಿಗಿಲಾಗಿ ಈಕೆ ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಡರ್ ಕೂಡ ಹೌದು. ರಿಪೋರ್ಟರ್ ಕರ್ನಾಟಕ ವತಿಯಿಂದ ಆರಾಧನಾಗೆ ಅಲ್ ದಿ ಬೆಸ್ಟ್.

ಇತ್ತೀಚಿನ ಸುದ್ದಿ

ಜಾಹೀರಾತು