5:08 PM Thursday12 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ: ಆಗಸ್ಟ್ ತಿಂಗಳ ಟಾಪರ್ ಆಗಿ  ಶ್ರೀನಿಧಿ ಹಾಗೂ ಅಶ್ಮಿತ್ ಎ.ಜೆ. ಮಂಗಳೂರು ಆಯ್ಕೆ

04/09/2022, 20:59

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ಟಾಪರ್ ಆಗಿ ಶ್ರೀನಿಧಿ ಹಾಗೂ ಅಶ್ಮಿತ್ ಎ.ಜೆ. ಮಂಗಳೂರು ಆಯ್ಕೆಗೊಂಡಿದ್ದಾರೆ.

ಉಡುಪಿಯ ಶ್ರೀನಿಧಿ ಅವರು ಜಯರಾಮ ಭಟ್ ಹಾಗೂ ಸುಜಾತಾ ಜೆ. ಭಟ್ ದಂಪತಿಯ ಪುತ್ರಿ. ಶಿವಪ್ರಸಾದ್ ಇವರ ಪತಿ. 3 ವರ್ಷದ ಮಗಳಿದ್ದಾಳೆ.

22 ವರ್ಷಗಳಿಂದ ಇವರು ಹವ್ಯಾಸಿ ಯಕ್ಷಗಾನ ಕಲಾವಿದೆ. ಸಾಸ್ತಾನ ಮಂಜುನಾಥ್ ಕುಲಾಲ್ ಐರೋಡಿ ಅವರು ಶ್ರೀನಿಧಿ ಅವರ ಯಕ್ಷಗಾನ ಗುರುಗಳು.

ಶ್ರೀನಿಧಿ ಅವರು 1ನೇ ತರಗತಿತಯಿಂದ ಭರತನಾಟ್ಯ ಅಭ್ಯಾಸ ಆರಂಭಿಸಿದ್ದರು. ವಿದುಷಿ ಯಶರಾಮ ಕೃಷ್ಣರ ಹೆಜ್ಜೆ ಗೆಜ್ಜೆ ನೃತ್ಯ ತಂಡದ ವಿದ್ಯಾರ್ಥಿನಿ ಇವರು. 5ನೇ ತರಗತಿಯಿಂದ ಯಕ್ಷಗಾನ ಕಲಿಕೆ ಶುರು ಮಾಡಿದ್ದರು. ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಹಿಳಾ ಸಂಘ ಪೆರ್ಣಂಕಿಲ ಇವರ ರಂಗ ವೇದಿಕೆ. ಇವರು ನಿರ್ವಹಿಸಿದ ಮೊದಲ ಪಾತ್ರ ಜಾಂಬವತಿ. ನಂತರ ಮುಖ್ಯ ಪಾತ್ರಗಳಲ್ಲಿ ಸುಧನ್ವ , ಅರ್ಜುನ , ಪ್ರಭಾವತಿ , ಪದ್ಮಗಂಧಿನಿ , ಪ್ರಮೀಳೆ , ಅಸ್ತಿ , ಈಶ್ವರ ,ಮಾರ್ತಾಂಡತೇಜ , ಕಮಲಧ್ವಜ , ಭ್ರಮರಕುಂತಳೆ , ಮೋಹಿನಿ , ತಾರಾವಳಿ , ರುಕ್ಮಿಣಿ ಹೀಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ.

ಶ್ರೀನಿಧಿ ಅವರು ಹಿರಿಯಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಹೈಸ್ಕೂಲ್  ಶಿಕ್ಷಣವನ್ನು ಹಿರಿಯಡ್ಕ  

ಸರಕಾರಿ ಶಾಲೆಯಲ್ಲಿ ಪೂರೈಸಿದರು. ಪದವಿ ಶಿಕ್ಷಣವನ್ನು ಉಡುಪಿಯ ಜಿ . ಶಂಕರ್  ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿದರು.

ಇದೀಗ ಕಾಪು ದೇಸಿಕ್ರೂ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕಳೆದ 8 ವರ್ಷ ದಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಟೇಟ್ ಲೆವೆಲ್ ಸ್ಪೋರ್ಟ್ಸ್ ಪ್ಲೇಯರ್ ರನ್ನಿಂಗ್ , ಎನ್ ಸಿಸಿ ಕೆಡೆಟ್ ಆಗಿ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್ 100ನೇ ವರ್ಷದ ಸಂಭ್ರಮಕ್ಕೆ ನಡೆಸಿದ 8 ನಿಮಿಷದ ಯಕ್ಷಗಾನ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಅವರದ್ದು. ಕರಂಬಳ್ಳಿಯಲ್ಲಿ 10 ವರ್ಷದ ಸಂಭ್ರಮಕ್ಕೆ ನಡೆಸಿದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ವೈಯಕ್ತಿಕ ಕಮಲಧ್ವಜ ಪಾತ್ರಕ್ಕೆ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಹಂತಕ್ಕೆ ಸೆಲೆಕ್ಟ್ ಆಗಿದ್ದರು. ಕಾರಣಾಂತರಗಳಿಂದ ಸ್ಪರ್ಧೆ ಸ್ಥಗಿತಗೊಂಡಿತು. ಶಾಲಾ ಹಾಗೂ ಕಾಲೇಜು ನಲ್ಲಿ ಪ್ರತಿಭಾ ಕಾರಂಜಿ ಹಾಗೂ ಇಂಟರ್ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚಿಗೆ ನಡೆದ ಯಕ್ಷವೇಷ ಫೋಟೋ ಸ್ಪರ್ಧೆ, “ಯಕ್ಷ ಪ್ರಶ್ನೆ ಕಿರುಚಿತ್ರ ” ತಂಡ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಪ್ರಸ್ತುತ ಬಾರಕೂರಿನ ಶ್ರೀ ಗಜಮುಖ ಹರಿಹರ ಯಕ್ಷಗಾನ ಸಂಘದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ವಾಯ್ಸ್ ಆಫ್ ಆರಾಧನಾ ತಂಡದ ಸಕ್ರೀಯ ಸದಸ್ಯರು.

ಇನ್ನು ಅಶ್ಮಿತ್ ಎ.ಜೆ. ಮಂಗಳೂರು 9ರ ಹರೆಯದ ಪುಟ್ಟ ಹುಡುಗ. ಸಂತ ಅಲೋಶಿಯಸ್  ಗೊಂಝಗಾ ಸ್ಕೂಲ್ ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಹಾಡು, ತಬಲ, ಕೀಬೋರ್ಡ್, ಚೆಂಡೆ ಮದ್ದಳೆ ಮತ್ತು ಡ್ರಾಯಿಂಗ್ ಈತನ ನೆಚ್ಚಿನ ಹವ್ಯಾಸ.

ಗಾಯನ ಸ್ಪರ್ಧೆಯಲ್ಲಿ ಹೆಚ್ಚಿನದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಹಲವಾರು ವೇದಿಕೆಯಲ್ಲಿ ಮತ್ತು ಚಾನೆಲ್ ಗಳಲ್ಲಿ ಹಾಡಿರುತ್ತಾನೆ. ಡಾ. ಎಸ್ ಪಿಬಿ ಅಂದ್ರೆ ಈತನಿಗೆ ತುಂಬಾ ಇಷ್ಟ.  ಶಂಕರ ನಾದ ಶರೀರಾಪಾರ ಹಾಡು, ಕೊರಗಜ್ಜನ ಹಾಡು ಮತ್ತು ಗರಗರನೆ ಸಾಂಗ್ ಜನಮೆಚ್ಚಿದ ಹಾಡುಗಳು. ವಾಯ್ಸ್ ಆಫ್ ಆರಾಧನಾ ದ ಸಕ್ರೀಯ ಸದಸ್ಯನಾಗಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು