7:02 AM Saturday13 - December 2025
ಬ್ರೇಕಿಂಗ್ ನ್ಯೂಸ್
ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ ಆರೆಸ್ಸೆಸ್ ಅಂದ್ರೆ ಉರಿಯುವ ಕಾಂಗ್ರೆಸ್ ನಾಯಕರಿಗೆ ಅವರ ಸರ್ಕಾರದಿಂದಲೇ ಉತ್ತರ: ಕೇಂದ್ರ ಸಚಿವ… ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ

ಇತ್ತೀಚಿನ ಸುದ್ದಿ

Vijayapura | ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರ: ಸಮಯಕ್ಕೆ ಬಾರದ ವೈದ್ಯರು!; ಆ್ಯಂಬ್ಯುಲೆನ್ಸ್, ನಗು ಮಗು ಇಲ್ಲ!!

26/04/2025, 11:56

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com

ವಿಜಯಪುರ ಜಿಲ್ಲೆಯ ತಾಳಿಕೋಟಿಯ ಆರೋಗ್ಯ ಸಮುದಾಯ ಕೇಂದ್ರದ ಆಡಳಿತದ ಪರಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಹೇಳುವವರಿಲ್ಲ, ಕೇಳುವವರಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಳಿಕೋಟಿಯ ಆರೋಗ್ಯ ಸಮುದಾಯ ಕೇಂದ್ರದ ಸದ್ಯದ ಪರಸ್ಥಿತಿ ಏನಾಗಿದೆ ಅಂದ್ರೆ ಡಾಕ್ಟರಗಳು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೆ ಬರುವುದೇ ಇಲ್ಲ. 11 ಗಂಟೆಗೆ ಬಂದು 1 ಗಂಟೆಗೆ ಹೋದವರು ಕಾಣೆ ಆಗಿಬಿಡುತ್ತಾರೆ ಎಂದು.ಸಾರ್ವಜನಿಕರು ದೂರಿದ್ದಾರೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಡಳಿತದ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ನೌಕರಿಗೆ ಹಾಜರಾಗುತ್ತಾರೋ ಇಲ್ಲೋ ಎಂಬವುದನ್ನು ವೀಕ್ಷಿಸುವುದಿಲ್ಲ. ನಿರ್ಲಕ್ಷದಿಂದ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ. ಈ ಸರ್ಕಾರಿ ದವಾಖಾನೆಗೆ ಆಂಬುಲೆನ್ಸ್. ನಗು ಮಗು ವಾಹನ ಕೂಡ ಲಭ್ಯವಿರುದಿಲ್ಲ. ಬಾಣತಿಯರು ಆಟೋ, ಕಾರುಗಳನ್ನು ಬಾಡಿಗೆ ಮಾಡಿಕೊಂಡು ತಮ್ಮ ಸ್ಥಳಕ್ಕೆ ಹೋಗಬೇಕು. ಈ ಆರೋಗ್ಯ ಕೇಂದ್ರದ ಸದ್ಯದ ಪರಸ್ಥಿತಿ ಚಿಂತಾಜನಕವಾಗಿದೆ. ಈ ಬೇಸಿಗೆ ದಿನಕ್ಕೆ ಬಹಳ ಹೃದಯಘಾತಕ್ಕೆ ಸಂಬಂಧಿಸಿದ ರೋಗಿಗಳು ಬಂದ್ರೆ ಅವರಿಗೆ ಯಾವುದೇ ತರಹದ ಚಿಕಿತ್ಸೆ ಲಭಿಸುವ ಔಷಧಿ ವ್ಯವಸ್ಥೆ ಇಲ್ಲ. ಆಕ್ಸಿಜನ್ ಒಂದು ಟೈಮ್ ಇರುತ್ತೆ. ಕೆಲವೊಂದು ಟೈಮ್ ಇರುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಬೇಕಾದ ವಸ್ತುಗಳು ಕೊಡಾ ಇಲ್ಲ. ಕೈ ಕಾಲು ಮುರಿದರೆ ಎಕ್ಸ್ ರೇ ಮಾಡಲು ಮಷಿನ್ ಇದ್ರೂ ಕೊಡಾ ಬಹಳ ದಿನದಿಂದ ಕೆಟ್ಟು ಹೋಗಿದೆ. ಅದನ್ನು ಸಾರ್ವಜನಿಕರೇ ರಿಪೇರಿ ಮಾಡಿಸುವಂತ ಸಂದರ್ಭ ಉಂಟಾಗಿದೆ. ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಕಳಿಸುವ ವಿಧಾನ ಈ ತಾಳಿಕೋಟಿಯ ಅರೋಗ್ಯ ಸಮುದಾಯ ಕೇಂದ್ರದಲ್ಲಿ ಇನ್ನು ಜೀವಂತವಿದೆ ಎಂದು ಆಸ್ಪತ್ರೆಗೆ ಬಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು