9:29 AM Monday20 - April 2026
ಬ್ರೇಕಿಂಗ್ ನ್ಯೂಸ್
ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಸನದಲ್ಲಿ ಮೂರು ದಿನಗಳ ಆಪರೇಷನ್‌ ಯಶಸ್ವಿ: ನರಹಂತಕ ಕಾಡಾನೆ ಸೆರೆ ಬಳ್ಳಾರಿ | ಪ್ಯಾರಚೂಟ್ ತರಬೇತಿ ವೇಳೆ ತಾಂತ್ರಿಕ ದೋಷ: 50 ಅಡಿ ಎತ್ತರದಿಂದ… ತೀರ್ಥಹಳ್ಳಿಯಲ್ಲಿ ಕುಡಿಯುವ ನೀರಿನ ಬಾವಿಗೆ ವಿಷ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

Vijayanagara | ಯೂರಿಯಾ ಕೃತಕ ಅಭಾವ ಸೃಷ್ಟಿಗೆ ಯತ್ನ: ಅಕ್ರಮ ದಾಸ್ತಾನು ಮಳಿಗೆಗಳ ಮೇಲೆ ರೈತರ ದಾಳಿ, ಪ್ರತಿಭಟನೆ

24/07/2025, 17:59

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿರುವ ಕೆಲವು ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಸಾಕಷ್ಟು ದಾಸ್ತಾನಿದ್ದರೂ ಕೂಡ. ಖರೀದಿಗೆ ಬಂದಿದ್ದ ರೈತರಿಗೆ ದಾಸ್ತಾನಿಲ್ಲ ಎಂದು ಹಿಂದಿರುಗುವಂತೆ ಸೂಚಿಸುತ್ತಿದ್ದ ಮೂರು ಅಂಗಡಿಗಳ ಅಕ್ರಮ ದಾಸ್ತಾನು ಮಳಿಗೆಗಳ ಮೇಲೆ ರೈತ ಮುಖಂಡರು ದಾಳಿ ನಡೆಸಿದ್ದಾರೆ.


ಇದರೊಂದಿಗೆ ಗೊಬ್ಬರ ಮಾರಾಟಗಾರರಿಂದ ಅಕ್ರಮವಾಗಿ ದಾಸ್ತಾನು ಮಾಡಿದ್ದನ್ನು ಬಯಲಿಗೆಳೆದಿದ್ದಾರೆ. ನಂತರ ಅನಿವಾರ್ಯವಾಗಿ ಮಾರಾಟಗಾರರು , ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿರುವ ಘಟನೆ ಜರುಗಿದೆ. ಪ್ರಕರಣ ಕುರಿತು ಕರ್ನಾಟ ರಾಜ್ಯ ರೈತ ಸಂಘದ ಕೊಟ್ಟೂರು ತಾಲೂಕು ಪ್ರಧ‍ಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನರವರು ಮಾಹಿತಿ ನೀಡಿದ್ದಾರೆ. ರೈತ ಸಂಘದ ಪದಾಧಿಕಾರಿಗಳು ರೈತರು ಪ್ರಕರಣ ಬಯಲಿಗೆಳೆದಿದ್ದು , ಈ ಸಂದರ್ಭದಲ್ಲಿ ಪಿಎಸ್ಐ ಗೀತಾಂಜಲಿ ಶಿಂಧೆರವರ ನೇತೃತ್ವದಲ್ಲಿ ಪೊಲೀಸರು ರೈತರ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ಕೊಟ್ಟೂರು ಪಟ್ಟಣದ ಮೂರು ಗೊಬ್ಬರ ಮಾರಾಟಗಾರರು , ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಠಿಗೆ ಯತ್ನಿಸಿದರೆನ್ನಲಾಗಿದೆ. ವಿಷಯ ಮನವರಿಕೆ ಮಾಡಿಕೊಂಡ ರೈತ ಮುಖಂಡರು , ಅಂಗಡಿಗಳಿಗೆ ರೈತ ಮುಖಂಡರು ಪೊಲೀಸರ ನೆರೆವಿನೊಂದಿಗೆ ಮುತ್ತಿಗೆ ಹಾಕಿದ್ದಾರೆ. ಅವರು ಖುದ್ದು ಗೋದಾಮುಗಳನ್ನು ಪರಿಶೀಲಿಸಲಾಗಿ , ಸಾಕಷ್ಟು ಯೂರಿಯಾ ಗೊಬ್ಬರ ದಾಸ್ತಾನಿದ್ದು ಗೊಬ್ಬರವನ್ನು ಪತ್ತೆ ಹಚ್ಚಿದ್ದಾರೆ. ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮುಂದಾಗಿದ್ದಾರೆ , ಕೆಲ ಹೊತ್ತಿನ ನಂತರ ಗೊಬ್ಬರ ಅಂಗಡಿಯವರು ತಮ್ಮ ತಪ್ಪಿನರಿವಾಗಿ ರೈತ ಮುಖಂಡರಲ್ಲಿ, ರೈತರಲ್ಲಿ ಘಟನೆಗೆ ಕ್ಷಮೆಯಾಚಿಸಿದ್ದು ದೂರು ದಾಖಲಿಸದಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ಮುಖಂಡರು ಪ್ರಕರಣ ದಾಖಲಿಸುವಂತೆ ಅಧಿಕಾರಿಗೆ ಪಟ್ಟು ಹಿಡಿದಾಗ , ಅಧಿಕಾರಿಗಳು ಹೋರಾಟಗಾರರ ಮನ ಒಲಿಸಿದ್ದಾರೆ ಮತ್ತು ಗೊಬ್ಬರ ಮಾರಾಟಗಾರರಿಂದ , ನೆರೆದಿದ್ದ ರೈತರಿಗೆ ಗೊಬ್ಬರವನ್ನು ಮಾರಾಟಮಾಡಿಸಿದ್ದಾರೆ. ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಜಾರ್ಯದರ್ಶಿ , ಗುಡಿಯಾರ ಮಲ್ಲಿಕಾರ್ಜುನ ರವರು ಪತ್ರಕರ್ತರಿಗೆ ಅಧೀಕೃತ ಮಾಹಿತಿ ನೀಡಿದ್ದಾರೆ.
ಗೊಬ್ಬರ ಮಾರಾಟಗಾರರು ತಮ್ಮಲ್ಲಿ ಗೊಬ್ಬರ ಸಾಕಷ್ಟು ಇದ್ದರೂ ಕೂಡ , ಇಲ್ಲಾ ಎಂದು ರೈತರಿಗೆ ಹೇಳಿ ಹಿಂದಿರುಗುವಂತೆ ಸೂಚಿಸಿದ್ದಾರೆ. ಈ ಮೂಲಕ ರೈತರಿಗೆ ಗೊಬ್ಬರ ಮಾರಾಟಮಾಡದೇ ಅಭಾವ ಸೃಷ್ಟಿಸಿ ವಂಚಿಸುವ ಹಾಗೂ ಆ ಗೊಬ್ಬರವನ್ನು ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತನು ಮಾಡಿಟ್ಟು. ಗೊಬ್ಬರವನ್ನು ಕಾಳ ಸಂತೆಯಲ್ಲಿ , ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದಾರೆಂದು ಹೋರಾಟಗಾರರು ಆರೋಪಿಸಿದ್ದಾರೆ. ಈ ಕುತಂತ್ರ ನಡೆಸಿದ್ದ ಗೊಬ್ಬರ ಅಂಗಡಿ ಮಾಲೀಕರ ವಿರುದ್ದ , ರೈತರು ತಮ್ಮ ಮುಖಂಡರ ನೇತೃತ್ವದಲ್ಲಿ ಘೋಷಣೆಗಳನ್ನು ಕೂಗಿ. ಅಕ್ರಮ ಗೊಬ್ಬರ ದಾಸ್ತಾನು ಮಾಡಿದ್ದವರ ವಿರುದ್ಧ ದಿಕ್ಕಾರ ಘೋಷಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹರಾಳು ದೊಡ್ಡಬಸಪ್ಪ , ಬಂಗಿ ಹೊನ್ನೂರು ಸಾಬ್ , ಬಳಿಗನೂರು ಬಾಲಗಂಗಾಧರ , ಮತ್ತು ರೈತ ಸಂಘದ ಮುಖಂಡರು ಮತ್ತು ಸಿಪಿಐ ಎಮ್ಎಲ್ ಲಿಬುರೇಷನ್ ಪಕ್ಷದ , ಮುಖಂಡರು ರೈತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು