2:06 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ: ಶಾಸಕ ಟಿ.ರಘುಮೂರ್ತಿ ಸಂಕಲ್ಪ

24/01/2022, 09:28

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ವೀರ ಸ್ವಾತಂತ್ರ್ಯ ಹೋರಾಟಗಾರನ ವೀರಸೌಧ ಸ್ಮಾರಕಕ್ಕೆ ಕಾಯಕಲ್ಪ ನೀಡಲು ಶಾಸಕ ಟಿ.ರಘುಮೂರ್ತಿ ಮುಂದಾಗಿದ್ದಾರೆ.

ಹೌದು ಚಳ್ಳಕೆರೆ ನಗರದ ಬ್ರೀಟೀಷರ ಕಾಲದಲ್ಲಿ ನಿರ್ಮಿಸಿದ್ದ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಬ್ರೀಟಿಷ್ ಸರಕಾರ ರೈತರಿಂದ ವಸೂಲಿ ಮಾಡಿದ್ದ ಕಂದಾಯವನ್ನು ಮರಳಿ ರೈತರಿಗೆ ತಲುಪಿಸುವ ಯೋಜನೆ ರೂಪಿದ್ದರು. ಅದರಂತೆ ಅರ್ಥಂಸುಬ್ಬಯ್ಯಶೆಟ್ಟಿ ಹೋರಾಟಗಾರೊಂದಿಗೆ ಬ್ರಿಟಿಸ್  ಆಳ್ವಿಕೆಯ ಕಾಲದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅನೇಕ ಜನರು ಪಾಲ್ಗೊಂಡಿದ್ದರು. 

ಬ್ರಿಟೀಸ್ ಅಧಿಕಾರಿಗಳು ಹೋರಾಟಗಾರ ಮೇಲೆ ಗೋಲಿ ಬಾರ್ ಹಾಗೂ ಗುಂಡಿನ  ದಾಳಿ ಮಾಡಲು ಮುಂದದಾಗ ಚಳುವಳಿಯಲ್ಲಿ ಭಾಗವಹಿಸಿದ್ದ ಅನೇಕ ಜನರು ಗುಂಡಿನ ಸದ್ದಿಗೆ ಲಾಟಿ ಏಟಿಗೆ ಭಯಬೀತರಾಗಿ ಕಾಲ್ಕಿತ್ತರು. ಆದರೆ ಅರ್ಥಂಸುಬ್ಬಯ್ಯಶೆಟ್ಟಿ ಮತ್ತಿಬ್ಬರು ಜಾಗ ಬಿಡದೆ ಬ್ರಿಟೀಷರ ಗುಂಡಿನ ದಾಳಿಗೆ ಸಿಲುಕಿದರು.

ಅರ್ಥಂಸುಬ್ಬಯ್ಯಶೆಟ್ಟಿ ಸ್ಥಳದಲ್ಲೇ ಮೃತ ಪಟ್ಟರೆ ಇನ್ನಿಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಚಿಲ್ಲಾ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರು  ಎನ್ನಲಾಗಿದೆ. ಇವರ ನೆನಪಿಗಾಗಿ 25 ನೇ ಸ್ವಾತಂತ್ರ್ಯೋತ್ಸವದ ವರ್ಷದ ಅಂಗವಾಗಿ 1972 ರಲ್ಲಿ ಹಳೆ ತಾಲೂಕು ಕಚೇರಿ ಮುಂಭಾಗದಲ್ಲಿ ಕೇಂದ್ರ ಸರಕಾರ 10 ಅಡಿ ಎತ್ತರದ ಸ್ಮಾರಕವನ್ನು 1973 ರಲ್ಲಿ ಅನಾವರಣಗೊಳಿಸಿ, ಅರ್ಥಂ ಸುಬ್ಬಯ್ಯಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಎಂಬ ಸ್ಮಾರಕ ಕಂಬವನ್ನು ನೆಟ್ಟು ಕೈತೊಳೆದುಕೊಂಡಿತ್ತು. 

ಅರ್ಥಂ ಸುಬ್ಬಯ್ಯಶೆಟ್ಟಿ ಮಗ ರಾಮಕೃಷ್ಣಶೆಟ್ಟಿ ಸ್ಮಾರಕದ ಸುತ್ತ ಕಟ್ಟೆ ನಿರ್ಮಿಸಿ ಗ್ರಿಲ್ ಅಳವಡಿಸಿ ಪ್ರತಿ ತಿಂಗಳು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಕುಟುಂಬಸ್ಥರು ಪೂಜೆ ಸಲ್ಲಿಸುತ್ತಾರೆ, ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ  ಸ್ವಾತಂತ್ರ್ಯ ಯೋಧರ ಸ್ಮಾರಕಕ್ಕೆ ಪೂಜೆ ಸಲ್ಲಿಸದೆ ನಿರ್ಲಕ್ಷ ತೋರುತ್ತಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು.

ಶಾಸಕ ಟಿ.ರಘುಮೂರ್ತಿ ಬ್ರಿಟಿಸ್ ಕಾಲದ ಶಿಥಿಲವಾದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸುಮಾರು 12.5 ಕೋಟಿ ವೆಚ್ಚದ ಅನುದಾನದಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಮಿನಿ ವಿಧಾನ ಸೌದಕಟ್ಟಡವನ್ನು ನಿರ್ಮಿಸಿರುವ ಕಾರಣ ಮುಖ್ಯ ರಸ್ತೆಯಿಂದ ಮಿನಿವಿಧಾನಸೌದದವರೆಗೆ   ದ್ವಿಪಥ

 ರಸ್ತೆ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಮರಕವನ್ನು ಇರುವ ಸ್ಥಳದಲ್ಲಿ ಮಾರುದ್ದ ಸ್ಥಳಾಂತರಿಸಿ ಸ್ಮಾರಕದ ಸುತ್ತ ಉಧ್ಯಾನವನ, ಸಾರ್ವಜನಿಕರು ಕುಳಿತು ಕೊಂಡು ವಿಶ್ರಾಂತಿ ಪಡೆಯಲು ಹಾಸನಗಳ ವ್ಯವಸ್ಥೆ ಕಲ್ಲಿಸುವ ಮೂಲಕ  ಸ್ವತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ವೀರಮರಣ ಹೊಂದಿದ ಅರ್ಥಂ ಸುಬ್ಬಯ್ಯಶೆಟ್ಟಿ ವೀರಸ್ವಾತಂತ್ರ ಹೋರಾಟಗಾರನ ಸ್ಮಾರಕಕ್ಕೆ ಹೊಸ ರೂಪ ನೀಡಲು ಶಾಸಕ ಟಿ. ರಘುಮೂರ್ತಿ ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು