2:43 AM Sunday1 - February 2026
ಬ್ರೇಕಿಂಗ್ ನ್ಯೂಸ್
ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್… ಯಾವ ಹೈಸ್ಪೀಡ್ ರೈಲೂ ಬರಲ್ಲ: ಕೇಂದ್ರ ಬಜೆಟ್ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್… ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ; ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್… ಕೇಂದ್ರ ಬಜೆಟ್ | 2047ರ ವಿಕಸಿತ ಭಾರತಕ್ಕೆ ಸುಧಾರಣಾ ಎಕ್ಸ್‌ಪ್ರೆಸ್ ಎಂದ ಪ್ರಧಾನಿ… ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್…

ಇತ್ತೀಚಿನ ಸುದ್ದಿ

ವೈದ್ಯೋ ನಾರಾಯಣೋ ಹರಿಃ: ಇದಕ್ಕೆ ತಕ್ಕ ಹೆಸರು ಮಂಗಳಾ ಆಸ್ಪತ್ರೆಯ ಸಂಸ್ಥಾಪಕ ಡಾ. ಗಣಪತಿ

01/07/2021, 11:57

ಏಪ್ರಿಲ್ 28, 2021ರ ಬುಧವಾರ ರಾತ್ರಿ 11ರ ಸಮಯ. ಸುಮಾರು ದಿನಗಳಿಂದ ಜ್ವರ ಮೈಕೈನೋವು ಎಂದು ಚಡಪಡಿಸುತ್ತಿದ್ದ ನನ್ನ ಪತ್ನಿ ಹಾಗೂ ಮಗ ಇಬ್ಬರಿಗೂ ಅಂದು ತಡೆಯಲಾರದ ವೇದನೆ. ಇದು ಕೋವಿಡ್ ಎಂದು ಆಗಲೇ ತಿಳಿದಿದ್ದ ನಮಗೆ ಗಾಬರಿ. ಮನೆಯಲ್ಲಿ ಚಿಕ್ಕಮಕ್ಕಳು.  ಸಣ್ಣ ಊರುಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ, ದೂರದ ಮಂಗಳೂರು/ ಮಣಿಪಾಲವೇ ಗತಿ. ಆಗ ನಮಗೆ ಸಹಾಯಕ್ಕೆ ಬಂದವರು ಮಂಗಳೂರಿನ ಪ್ರಸಿದ್ಧ, ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ನ ಸಂಸ್ಥಾಪಕರಾದ ಡಾ। ಗಣಪತಿ. ವಿಷಯ ತಿಳಿದ ಕೂಡಲೇ ತಮ್ಮ ಸಂಸ್ಥೆಯ ಅಂಬುಲೆನ್ಸ್ ಅನ್ನು ಕಾರ್ಕಳದಲ್ಲಿರುವ ನಮ್ಮ ಮನೆಗೆ ಕಳುಹಿಸಿ ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯರ ತಂಡದ ಸಹಾಯದೊಂದಿಗೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟರು. ತೀವ್ರ ನಿಗಾ ವಹಿಸಿದ ಪರಿಣಾಮ, ಕೇವಲ ಎರಡೇ ದಿನಗಳಲ್ಲಿ ಸೋಂಕು ಕಡಿಮೆಯಾಯಿತು. ನನ್ನಂತಹ  ಸಾವಿರಾರು ಫಲಾನುಭವಿಗಳ ಭಾವನೆಗಳ ಸಂಕೇತವಾಗಿರುವ ಈ ನಮನಗಳು ಡಾ. ಗಣಪತಿ ಹಾಗೂ ಅವರ ಎಲ್ಲ ಸಿಬ್ಬಂದಿ ವರ್ಗಕ್ಕೆ  ಹಾಗೂ ಸಮಸ್ತ ವೈದ್ಯ ಲೋಕಕ್ಕೆ ಸಮರ್ಪಿತ. 

ವೈದ್ಯೋ ನಾರಾಯಣೋ ಹರಿಃ 

ಇತ್ತೀಚಿನ ಸುದ್ದಿ

ಜಾಹೀರಾತು