10:49 PM Wednesday20 - August 2025
ಬ್ರೇಕಿಂಗ್ ನ್ಯೂಸ್
ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಇತ್ತೀಚಿನ ಸುದ್ದಿ

ವೈದ್ಯೋ ನಾರಾಯಣೋ ಹರಿಃ: ಇದಕ್ಕೆ ತಕ್ಕ ಹೆಸರು ಮಂಗಳಾ ಆಸ್ಪತ್ರೆಯ ಸಂಸ್ಥಾಪಕ ಡಾ. ಗಣಪತಿ

01/07/2021, 11:57

ಏಪ್ರಿಲ್ 28, 2021ರ ಬುಧವಾರ ರಾತ್ರಿ 11ರ ಸಮಯ. ಸುಮಾರು ದಿನಗಳಿಂದ ಜ್ವರ ಮೈಕೈನೋವು ಎಂದು ಚಡಪಡಿಸುತ್ತಿದ್ದ ನನ್ನ ಪತ್ನಿ ಹಾಗೂ ಮಗ ಇಬ್ಬರಿಗೂ ಅಂದು ತಡೆಯಲಾರದ ವೇದನೆ. ಇದು ಕೋವಿಡ್ ಎಂದು ಆಗಲೇ ತಿಳಿದಿದ್ದ ನಮಗೆ ಗಾಬರಿ. ಮನೆಯಲ್ಲಿ ಚಿಕ್ಕಮಕ್ಕಳು.  ಸಣ್ಣ ಊರುಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ, ದೂರದ ಮಂಗಳೂರು/ ಮಣಿಪಾಲವೇ ಗತಿ. ಆಗ ನಮಗೆ ಸಹಾಯಕ್ಕೆ ಬಂದವರು ಮಂಗಳೂರಿನ ಪ್ರಸಿದ್ಧ, ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ನ ಸಂಸ್ಥಾಪಕರಾದ ಡಾ। ಗಣಪತಿ. ವಿಷಯ ತಿಳಿದ ಕೂಡಲೇ ತಮ್ಮ ಸಂಸ್ಥೆಯ ಅಂಬುಲೆನ್ಸ್ ಅನ್ನು ಕಾರ್ಕಳದಲ್ಲಿರುವ ನಮ್ಮ ಮನೆಗೆ ಕಳುಹಿಸಿ ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯರ ತಂಡದ ಸಹಾಯದೊಂದಿಗೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟರು. ತೀವ್ರ ನಿಗಾ ವಹಿಸಿದ ಪರಿಣಾಮ, ಕೇವಲ ಎರಡೇ ದಿನಗಳಲ್ಲಿ ಸೋಂಕು ಕಡಿಮೆಯಾಯಿತು. ನನ್ನಂತಹ  ಸಾವಿರಾರು ಫಲಾನುಭವಿಗಳ ಭಾವನೆಗಳ ಸಂಕೇತವಾಗಿರುವ ಈ ನಮನಗಳು ಡಾ. ಗಣಪತಿ ಹಾಗೂ ಅವರ ಎಲ್ಲ ಸಿಬ್ಬಂದಿ ವರ್ಗಕ್ಕೆ  ಹಾಗೂ ಸಮಸ್ತ ವೈದ್ಯ ಲೋಕಕ್ಕೆ ಸಮರ್ಪಿತ. 

ವೈದ್ಯೋ ನಾರಾಯಣೋ ಹರಿಃ 

ಇತ್ತೀಚಿನ ಸುದ್ದಿ

ಜಾಹೀರಾತು