9:50 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಉಪಯೋಗಕ್ಕೆ ಬಾರದ ಮಸ್ಕಿ ಕೃಷಿ ಕೇಂದ್ರ: ಕರ್ನಾಟಕ ರೈತ ಸಂಘದಿಂದ ಮುತ್ತಿಗೆ, ಪ್ರತಿಭಟನೆ

22/10/2021, 09:27

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 
ಅಂತರಗಂಗೆ ರಾಯಚೂರು
info.reporterkarnataka@gmail.com

ರೈತರಿಗಾಗಿ ಸರಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅದು ನಿಜವಾದ ರೈತರಿಗೆ ತಲುಪುವುದೇ ಇಲ್ಲ.

ಕೃಷಿ ಕೇಂದ್ರದಲ್ಲಿಯೂ ರೈತರಿಗೆ ಸರಿಯಾದ ರೀತಿಯ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಹೀಗಾದರೆ ದೇಶಕ್ಕೆ ಅನ್ನ ಹಾಕು ರೈತನ ಪಾಡು ಹೇಗೆ ಎಂದು ಮಸ್ಕಿ ರೈತ ಸಂಘದ ಅಧ್ಯಕ್ಷ ವಿಜಯ್ ಬಡಿಗೇರ್ ಆಕ್ರೋಶ ವ್ಯಕ್ತ ಪಡಿಸಿದರು.

ಮಸ್ಕಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕೃಷಿ ಕೇಂದ್ರ ಯಾರು ವಾಸವಿರದ ಜಾಗದಲ್ಲಿದೆ. ಜನರು ಅಲ್ಲಿಂದ ನಡೆದುಕೊಂಡು ಬರಬೇಕು. ಅಲ್ಲದೆ ರೈತರಿಗೆ ಬೇಕಾಗುವ ಕೃಷಿಗೆ ಅಗತ್ಯ ವಸ್ತುಗಳು ಸಿಗುವುದೇ ಇಲ್ಲ. ಟ್ಯಾಕ್ಟರ್, ಬಿತ್ತುವ ಯಂತ್ರೋಪಕರಣಗಳು ಅರ್ಜಿ ಹಾಕಿ ಎರಡು ವರ್ಷಗಳಾದರೂ ಇನ್ನು ಬಂದಿಲ್ಲ. ಹೀಗಾದರೆ ರೈತರ ಪಾಡೇನು. ರೈತರಿಗೆ ಅನುಕೂಲವಾಗದ ಕೃಷಿ ಕೇಂದ್ರ ಇದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು

ಮುತ್ತಿಗೆ ಹಾಕಿದರು. ಕೃಷಿ ಅಧಿಕಾರಿಗಳು ಮನವಿ ಪತ್ರಕ್ಕೆ ಸ್ಪಂದಿಸಿ ರೈತರು ಅನುಕೂಲವಾಗುವ ರೀತಿಯಲ್ಲಿ ಕೊಡಲಾಗುವುದು ಎಂದು ಹೇಳಿದರು.

ಅಮೀನ್ ಪಾಸ್ ದಿದ್ದಿಗಿ ಮಾತನಾಡಿ, ರೈತನ ಬಾಳು ಕಣ್ಣೀರಿನ ಗೋಳು. ರೈತ ಹೊಲದಲ್ಲಿ ಬೆಳೆದ ಬೆಳಗೆ ಬಂದ ಹಣ ದಲ್ಲಾಳಿಗಳು ತಿನ್ನುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಸರಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಸಮರ್ಪಕವಾದ ಬೀಜಗಳನ್ನು, ಸಮರ್ಪಕ ಯಂತ್ರೋಪಕರಣಗಳ ರೈತರಿಗೆ ಒದಗಿಸಿಕೊಡಬೇಕೆಂದು ಅಧಿಕಾರಿಗಳ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ರೈತ ಮುಖಂಡರು ಭಾಗವಹಿಸಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು