4:42 PM Thursday21 - May 2026
ಬ್ರೇಕಿಂಗ್ ನ್ಯೂಸ್
ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ… ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ ಹೆಚ್ಚುವರಿಯಾಗಿ 20 ಕೋಟಿ: ಮಂಗಳೂರಿನಲ್ಲಿ ಸಚಿವ ಖಂಡ್ರೆ ಚಿಕ್ಕಮಗಳೂರು | ದೇವನಗುಲ್ ಕಾಡಿನೊಳಗೆ ಅನಾಥ ಸ್ಥಿತಿಯಲ್ಲಿ ವೃದ್ಧನ ಶವ ಪತ್ತೆ ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಉಣ್ಣಕ್ಕಿ ಜಾತ್ರೆಯ ಪೂಜೆ ಸಂದರ್ಭದಲ್ಲಿ ಈ ಹುತ್ತ ಗಡಗಡನೆ ನಡುಗುತ್ತದೆಯಂತೆ!: ವಿಸ್ಮಯ ನೋಡಲು ಭಕ್ತಸಾಗರವೇ ಹರಿದು ಬರುತ್ತದೆ!!

27/11/2023, 12:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail com

ಉಣ್ಣಕ್ಕಿ ಜಾತ್ರೆಯ ಪೂಜೆಯಲ್ಲಿ ಕ್ಷಣಾರ್ಧದಲ್ಲಿ ಹುತ್ತ ನಡುಗುವ ವಿಸ್ಮಯ ಮೂಡಿಗೆರೆ ತಾಲೂಕಿನ ಬಗ್ಗಸಗೋಡು ಬಾನಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಪೂಜೆಯ ವೇಳೆ ಹುತ್ತ ಅಲುಗಾಡುತ್ತದೆ ಎಂದು ಭಕ್ತರು ಹೇಳುತ್ತಾರೆ. 10 ಅಡಿ ಉದ್ದದ ಈ ಹುತ್ತ ಅಲುಗಾಡುವುದನ್ನು ನೋಡಲು ಭಕ್ತಸಾಗರವೇ ಸೇರುತ್ತದೆ.


ಮಹಾ ಮಂಗಳಾರತಿ ಆಗುತ್ತಿದ್ದಂತೆ ಕೆಲ ಸೆಕೆಂಡ್ ಹುತ್ತ ಗಡ ಗಡನೆ ಅಲುಗಾಡುತ್ತದೆ. ಈ ಬಾರಿಯೂ ಈ ವಿಸ್ಮಯವನ್ನು ಮಲೆನಾಡಿನ ಭಕ್ತರು ಕಣ್ತುಂಬಿಕೊಂಡಿದ್ದಾರೆ ಎನ್ನಲಾಗಿದೆ. ನೈಸರ್ಗಿಕವಾಗಿ ಮಣ್ಣಿನಿಂದಲೇ 10 ಅಡಿ ಉದ್ದದ ಹುತ್ತ ನಿರ್ಮಾಣವಾಗಿದೆ. ಕಳೆದ ರಾತ್ರಿ ಹುಣ್ಣಿಮೆಯ ದಿನ ಪೂಜೆ ನಡೆಯಿತು. ಹುತ್ತಕ್ಕೆ ಮಂಡಕ್ಕಿ ಎರಚಿ ಭಕ್ತರು ಹರಕೆ ತೀರಿಸಿದರು. ಈ ಹುತ್ತದ ಮಣ್ಣು ಹಲವು ಕಾಯಿಲೆಗಳಿಗೆ ರಾಮಬಾಣ ಅನ್ನೋದು ಭಕ್ತರ ನಂಬಿಕೆ.

ಇತ್ತೀಚಿನ ಸುದ್ದಿ

ಜಾಹೀರಾತು