7:54 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಉಕ್ರೇನ್‌ನಿಂದ ವಾಪಸ್ಸಾದ ಕೋಲಾರದ ಮೋನಿಷಾ ಪ್ರಿಯಾ: ಕೇಂದ್ರ ಸರಕಾರ, ರಾಯಭಾರ ಕಚೇರಿ ಸಿಬ್ಬಂದಿಗೆ ಧನ್ಯವಾದ 

07/03/2022, 21:55

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್ ಕುಮಾರ್ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು , ಬಂಕರ್‌ಗಳು , ಮೆಟ್ರೋ ನಿಲ್ದಾಣಗಳಲ್ಲಿ ನಾವು ತಂಗಿದ್ದೆವು , ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಯಿತು. ನಾವಿದ್ದ ಹಾಸ್ಟೆಲ್‌ಗೂ ಭಾರತದ ಧ್ವಜ ಕಟ್ಟಿದ್ದು , ಧ್ವಜ ಹಿಡಿದೇ ಗಡಿ ತಲುಪಿದ್ದು ನಮಗೆ ನೆರವಾಯಿತು ಎಂದರು . ಉಕ್ರೇನ್‌ನೊಳಗೆ ನಮ್ಮ ಭಾರತದ ವಿಮಾನಗಳು ಬರುವ ಹಾಗಿರಲಿಲ್ಲ. ಯುದ್ಧ ಭೀತಿ ಹಾಗೂ ವಿಮಾನ ನಿಲ್ದಾಣಗಳು ಧ್ವಂಸಗೊಂಡಿದ್ದವು.

ಕಷ್ಟಪಟ್ಟು ಗಡಿ ತಲುಪುವಂತೆ ನಮ್ಮ ರಾಯಭಾರ ಕಚೇರಿ ನಿರ್ದೇಶನ ನೀಡಿತ್ತು . ರೈಲುಗಳಲ್ಲಿ ಬರುವಾಗಲೂ ಅಲ್ಲಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದರಿಂದ ಪ್ರಾರ್ಥನೆ ಮಾಡಿಕೊಂಡು ಬಂದು ಗಡಿ ತಲುಪಿದೆವು ಎಂದರು .

ಗಡಿಯಿಂದ ನಮ್ಮ ಭಾರತೀಯ ರಾಯಭಾರ ಸಿಬ್ಬಂದಿ ನಮ್ಮನ್ನು ಅತ್ಯಂತ ಉತ್ತಮ ರೀತಿಯಲ್ಲಿ ನೋಡಿಕೊಂಡರು ನಾವಿಂದು ಬದುಕಿ ಬಂದಿದ್ದೇವೆ ಎಂಬುದೇ ಅತಿಹೆಚ್ಚ ಸಂತಸ , ಭಾರತ ಸರ್ಕಾರ , ರಾಜಭಾರ ಕಚೇರಿಗೆ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು . 

ಕೋಲಾರದ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್‌ಕುಮಾರ್‌ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು