7:27 PM Thursday13 - November 2025
ಬ್ರೇಕಿಂಗ್ ನ್ಯೂಸ್
Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ…

ಇತ್ತೀಚಿನ ಸುದ್ದಿ

ತುಂಗಭದ್ರಾ ಹಿನ್ನೀರಿನಿಂದ ಚಿಕ್ಕಕೆರೆಯ ಏರಿಯ ಮೇಲೆ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆಗೆ ವಿರೋಧ: ಪ್ರತಿಭಟನೆ 

17/02/2022, 13:49

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ಚಿಕ್ಕ ಕೆರೆಯ ಏರಿಯ ಮೇಲೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಪೈಪ್ ಲೈನ್ ಅಳವಡಿಕೆ ವಿರೋಧಿಸಿ ಪಟ್ಟಣ ಪಂಚಾಯತ್ ಸದಸ್ಯರು ಹಾಗೂ ರೈತರು ಬುಧವಾರ ಪ್ರತಿಭಟನೆ ನಡೆಸಿದರು. 

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕೆರೆ ಏರಿ ರಾಜ್ಯ ಹೆದ್ದಾರಿ 45 ಆಗಿದೆ. ಆದರೆ ಕೆರೆಯ ಏರಿ ಕಿರಿದಾಗಿದೆ. ಇದರ ಮೇಲೆ ಪೈಪ್ ಲೈನ್ ಅಳವಡಿಸುವುದುರಿಂದ ಅಪಾಯ ಹೆಚ್ಚಾಗಿದೆ. ಪಪಂ ಕುಡಿಯುವ ನೀರು ಪೂರೈಸುವ ಪೈಪ್ ಲೈನ್‍ನ್ನು ಕೆರೆ ಏರಿಯ ಮೇಲೆ ಅಳವಡಿಸಿತ್ತು. ಸೋರುವಿಕೆ ಸಮಸ್ಯೆಯಿಂದ ಪೈಪ್ ಲೈನ್ ಪದೇ ಪದೇ ಹಾಳಾಗಿ ಹೆದ್ದಾರಿ ಹಾಳಾಗುತ್ತಿತ್ತು. ಹೀಗಾಗಿ ಪಪಂ ಕುಡಿಯುವ ನೀರು ಪೂರೈಸುವ ಪೈಪ್‍ಗಳನ್ನು ಕೆರೆಯ ಪಕ್ಕದಲ್ಲಿ ಕೊಂಡೊಯ್ಯಲಾಗಿದೆ. ಇದೀಗ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ  45 ಗ್ರಾಮಗಳಿಗೆ ನೀರು ಪೂರೈಸುವ ಬೃಹತ್ ಪೈಪ್‍ಗಳನ್ನು ಇದೇ ಕೆರೆ ಏರಿ ಅಳವಡಿಸಲು ಮುಂದಾಗಿದೆ.

ಪಟ್ಟಣ ಪಂಚಾಯತ್ ಸದಸ್ಯ ಜಿ.ಆರ್.ರವಿಕುಮಾರ್ ಮಾತನಾಡಿ, ನಾಯಕನಹಟ್ಟಿ-ಗಂಗಯ್ಯನಹಟ್ಟಿ ನಡುವೆ ಕೆರೆಯ ಮೇಲೆ ಪೈಪ್ ಅಳವಡಿಕೆಗೆ ಸಣ್ಣ ನೀರಾವರಿ ಇಲಾಖೆ 31.08.2021 ರಂದು ಅನುಮತಿ ನೀಡಿದೆ. ನೆಲದಿಂದ 1.2 ಮೀಟರ್ ಆಳದಲ್ಲಿ ಪೈಪ್‍ಗಳನ್ನು ಅಳವಡಿಸಲು ಅನುಮತಿ ನೀಡಿದೆ. ಇದರಿಂದ ಸಣ್ಣ ಕೆರೆ ಏರಿಗೆ ಅಪಾಯವಿದೆ. ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ ಐತಿಹಾಸಿಕ ಕೆರೆಗೆ ಅಪಾಯ ಉಂಟುಮಾಡುವ ಕಾಮಗಾರಿ ಇದಾಗಿದೆ. ಪೈಪ್ ಲೈನ್‍ನ್ನು ಕೆರೆಯಲ್ಲಿ ಅಥವ ಕೆರೆಯ ಏರಿಯ ಹೊರ ಬದಿಯಲ್ಲಿ ಅಳವಡಿಸಬಹುದಾಗಿದೆ. ಇದರಿಂದ ಕೆರೆಗೆ ಯಾವುದೇ ಅಪಾಯವಿಲ್ಲ. ಯಾವುದೇ ಕಾರಣಕ್ಕೂ ಕೆರೆ ಏರಿ ಮೇಲೆ ಪೈಪ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಪಿಡಬ್ಲೂಡಿ, ಪಪಂ, ಕುಡಿಯುವ ನೀರು ಪೂರೈಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಚರ್ಚೆ ನಡೆಸಿ ತೀರ್ಮಾನಿಸುವುದಾಗಿ ಪ್ರತಿಭಟನಕಾರರಿಗೆ ತಿಳಿಸಿದರು. ಹೀಗಾಗಿ ಕಾಮಗಾರಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಕೌನ್ಸಿಲರ್ ತಿಪ್ಪೇಸ್ವಾಮಿ, ಮಾಜಿ ಕೌನ್ಸಿಲರ್ ಬಸಣ್ಣ, ಮುಖಂಡರಾದ ಶ್ರೀಕಾಂತ, ಪಂಚಾಕ್ಷರಯ್ಯ ಮತ್ತಿತರರಿದ್ದರು.    

ಸಣ್ಣ ನೀರಾವರಿ ಇಲಾಖೆ ಎಇಇ, ಗುರು ಬಸವರಾಜಯ್ಯ, ಕೆರೆ ಏರಿಗೆ ಹಾನಿಯಾಗುವಂತೆ ಪೈಪ್ ಲೈನ್ ಹಾಕಲು ಅವಕಾಶವಿಲ್ಲ. ಜತೆಗೆ ಈಗ ಹಾಕಲಾಗುತ್ತಿರುವ ಪೈಪ್‍ಗಳು ಪಿವಿಸಿ ಪೈಪ್‍ಗಳಲ್ಲ. ಡಿಐ (ಡಕ್ಟೈಲ್ ಐರನ್) ಎಂದು ಕರೆಯಲಾಗುವ ಈ ಪೈಪ್ ಗಳು ತುಕ್ಕು ಹಿಡಿಯದ ಹಾಗೂ ಸೋರಿಕೆಯಿಲ್ಲದ ಹೆಚ್ಚಿನ ಒತ್ತಡವನ್ನು ತಡೆಯಬಲ್ಲವಾಗಿವೆ. ಸಾರ್ವಜನಿಕ ವಿರೋಧವನ್ನು ಪರಿಗಣಿಸಿ ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲಿ ಪಿಡಬ್ಲೂಡಿ, ಪಪಂ ಹಾಗೂ ನೀರು ಪೂರೈಕೆ ಇಲಾಖೆ ಅಧಿಕಾರಿಗಳ ಜತೆಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. 

ಫೋಟೋಡಿ16-ಸಿಎಲ್‍ಕೆ3  ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕೆರೆ ಏರಿ ಮೇಲೆ ಪೈಪ್ ಲೈನ್ ಕಾಮಗಾರಿ ತಡೆ ಪ್ರದೇಶಕ್ಕೆ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು