7:12 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ತುಳುನಾಡಿನ ಪೆಲತರಿಗೆ ಬಂತು ಬಂಗಾರದ ಬೆಲೆ: ಆನ್ ಲೈನ್ ನಲ್ಲಿ ಬರಲಿದೆ ನಿಮ್ಮ ಮನೆ ಬಾಗಿಲಿಗೆ !!

29/06/2021, 07:56

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಮಂಗಳೂರು(reporterkarnataka news): ತುಳುನಾಡಿನ ಜನರು ಇಷ್ಟಪಟ್ಟರೂ ಸಾರ್ವಜನಿಕವಾಗಿ ಮೂಗು ಮುರಿಯುವ ಹಲಸಿನ ಹಣ್ಣಿನ ಬೀಜಕ್ಕೆ ಬಂದಿದೆ ಬಂಗಾರದ ಬೆಲೆ. ಧರ್ಮಕ್ಕೆ ಕೊಟ್ಟರೂ ಬೇಡವೆನ್ನುವ ಹಲಸಿನ ಹಣ್ಣಿನ ಬೀಜಗಳು ಬಾರಿ ಬೆಲೆಯೊಂದಿಗೆ ಬಿಕಾರಿಯಾಗಲು ಸಿದ್ಧವಾಗಿದೆ.

ಅಗ್ರಿ ಡಾಟ್ ಎನ್ನುವ ಕಂಪನಿಯೊಂದು ಆನ್ ಲೈನ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ಮೂಲಕ ಹಲಸಿನ ಬೀಜ ಮಾರಾಟಕ್ಕೆ ರೆಡಿಯಾಗಿದೆ. 800 ಗ್ರಾಂ ಹಲಸಿನ ಬೀಜಕ್ಕೆ 550 ರೂಪಾಯಿ ನಿಗದಿಪಡಿಸಲಾಗಿದೆ. 

ಉಷ್ಣ ವಲಯದಲ್ಲಿ ಬೆಳೆಸಲಾಗುವ ಹಲಸಿನ ಕಾಯಿ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೂಡ ಸಾಕಷ್ಟು ಹಲಸಿನ ಹಣ್ಣು ಬೆಳೆಯುತ್ತದೆ. ತೆಂಗು, ಕಂಗು, ಬಾಳೆ ತರಹ ಇದನ್ನು ನೀರು ಹಾಕಿ ಆರೈಕೆ ಮಾಡಬೇಕಾಗಿಲ್ಲ. ಪ್ರಕೃತ್ತಿದತ್ತವಾಗಿ ಬೆಳೆದ ಹಲಸಿನ ಮರದಲ್ಲಿ ಸಾಕಷ್ಟು ಫಸಲು ಸಿಗುತ್ತದೆ.

ತುಳುನಾಡಿನ ಕರಾವಳಿಯಲ್ಲಿ ಒಂದು ಕಾಲದಲ್ಲಿ ಇದು ಬಡವರ ಬಂಧು. ಹಲಸಿನ ಹಣ್ಣಿನ ಗಟ್ಟಿ, ಗಾರಿಗೆ, ಹಪ್ಪಳ ಮೊದಲಾದ ತಿಂಡಿಗಳನ್ನು ಮಾಡುತ್ತಿದ್ದರು. ಹಲಸಿನ ಕಾಯಿಯನ್ನು ಪದಾರ್ಥಕ್ಕೆ ಬಳಸುತ್ತಿದ್ದರು. ಹಾಗೆ ಹಲಸಿನ ಕಾಯಿಯನ್ನು ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿ ಇಡುತ್ತಿದ್ದರು. ಆದರೆ ಇಂದು ಈ ಹಣ್ಣಿನ ಬಗ್ಗೆ ತಾತ್ಸಾರ ಭಾವನೆಯೇ ಜಾಸ್ತಿ. ಸಿಹಿಯಾದ, ಪರಿಮಳಯುಕ್ತ, ಸ್ವಾದಿಷ್ಟವಾದ ಹಲಸಿನ ಹಣ್ಣನ ಉಪೇಕ್ಷೆಯೇ ಜಾಸ್ತಿ. ಹಣ್ಣನ್ನೇ ತಿನ್ನಲು ಹಿಂದೇಟು ಹಾಕುವ ಜನರು ಬೀಜವನ್ನು ತಿನ್ನಲು ಸಾಧ್ಯವೇ? ಅದಲ್ಲದೆ ಹಲಸಿನ ಬೀಜಕ್ಕೆ ಗ್ಯಾಸ್ ಎಂಬ ಅಪವಾದ, ಅವಮಾನವೂ ಅಂಟಿಕೊಂಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಕ್ಕಳಿಗೆ ಹಲಸಿನ ಬೀಜ ತಿನ್ನಿಸಿದರಾಯಿತು ಪಟಾಕಿ ಖರ್ಚು ಉಳಿಯುತ್ತದೆ ಎಂಬ ತಮಾಷೆಯ ಮಾತು ಕೂಡ ಇದೆ. ನೆರೆಯ ಕೇರಳದ ಕಾಸರಗೋಡಿನಲ್ಲಿ ಮಲಯಾಳದಲ್ಲಿ ‘ಚಕ್ಕ ಕುರು ಚದಿಪನಾನು, ಸೂಕ್ಷಿಕೊ ಪೆನ್ನುಂಗಳಾಂದು'(ಹಲಸಿನ ಬೀಜ ಹಠಮಾರಿ, ಹೆಂಗಸರೇ ಎಚ್ಚರಿಕೆ) ಎಂಬ ನಾಣ್ನುಡಿಯೇ ಪ್ರಚಲಿತದಲ್ಲಿದೆ. ಹಲಸಿನ ಹಣ್ಣಿನ ಬೀಜವನ್ನು ತಿಂದರೆ ಅದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುವ ಮೂಲಕ ಮರ್ಯಾದೆ ತೆಗೆಯುತ್ತದೆ. ಹೆಂಗಸರೇ ಎಚ್ಚರಿಕೆ ವಹಿಸಿ ಎನ್ನುವುದು ಇದರ ಅರ್ಥವಾಗಿದೆ.

ಇದೀಗ ಫ್ಲಿಪ್ ಕಾರ್ಟ್‌ನಂತಹ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಹಲವು ಕಂಪನಿಗಳು ಬಾದಾಮಿ, ಪಿಸ್ತಾ, ಗೋಡಂಬಿ ಮುಂತಾದ ಡ್ರೈಫ್ರುಟ್ಸ್ ಪ್ಯಾಕ್ ಮಾಡಿದ ರೀತಿಯಲ್ಲಿ ಸುಂದರವಾಗಿ ಪ್ಯಾಕ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು