5:28 PM Friday11 - April 2025
ಬ್ರೇಕಿಂಗ್ ನ್ಯೂಸ್
ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್…

ಇತ್ತೀಚಿನ ಸುದ್ದಿ

ತಾಳ್ಮೆ, ಸಹನೆ ಇದ್ದರೆ ಮಾತ್ರ ನೇತಾರನಾಗಲು ಸಾಧ್ಯ: ಹೆಗಲಿಗೆ ಕೈಹಾಕಿದ ಅಭಿಮಾನಿಯ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ! 

10/07/2021, 13:15

ಮಂಡ್ಯ(reporterkarnataka news): ಸಾರ್ವಜನಿಕ ಜೀವನದಲ್ಲಿ ನಾಯಕರಿಗೆ ತಾಳ್ಮೆ, ಸಹನೆ ಎನ್ನುವುದು ಬಹಳ ಮುಖ್ಯ. ತಾಳ್ಮೆ ಇಲ್ಲದವರು ನಾಯಕನಾಗಲು ನಾಲಾಯಕು.  

ನಾಯಕ ಎಂದು ಕರೆಸಿಕೊಳ್ಳುವವರು ಅಭಿಮಾನಿಯೊಬ್ಬ ಹೆಗಲ ಮೇಲೆ ಕೈಹಾಕಿದಷ್ಟಕ್ಕೆ ತಲೆಗೆ ಹೊಡೆದು ಬಿಡುವುದೇ. ಇಂತಹ ಘಟನೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತನ್ನ ಅಭಿಯಾನಿಯ ತಲೆಗೆ ಫಟಾರ್ ಅಂತ ಹೊಡೆದು ಬಿಟ್ಟಿದ್ದಾರೆ. ಜತೆಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಶಿವಕುಮಾರ್ ಅವರು ಮಾಜಿ ಸಂಸದ ಮಾದೇ ಗೌಡ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದರು. ಡಿಕೆಶಿ ಅವರು ಮಾಮೂಲಿಯಾಗಿ ಯಾವಾಗಲೂ ಗರಂ ಆಗಿಯೇ ಇರುತ್ತಾರೆ. ಕೆ.ಎಂ.ದೊಡ್ಡಿಯಲ್ಲಿ ಮಾಮೂಲಿಗಿಂತಲೂ ಸ್ವಲ್ಪ ಜಾಸ್ತಿಯೇ ಗರಂ ಆಗಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಾರೆ. ಈ ಸಂದರ್ಭದಲ್ಲಿ ಶಿವಕುಮಾರ್ ಅವರ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಯೊಬ್ಬ ಅವರ ಹೆಗಲ ಮೇಲೆ ಕೈ ಹಾಕಲು ಯತ್ನಿಸಿದನಂತೆ. ಇದು ಅರಿವಿಗೆ ಬರುತ್ತಿದ್ದಂತೆ ಶಿವಕುಮಾರ್ ಅವರು ಅಭಿಮಾನಿಗಳು ತಲೆ ಮೇಲೆ ಹೊಡೆದೇ ಬಿಟ್ಟರು. ಜತೆಗೆ ‘ಕಾಮನ್ ಸೆನ್ಸ್ ನಿಂಗೆ ಇಲ್ವೇ… ಫ್ರಿಡಂ ಕೊಟ್ರೆ ಹೆಗಲ ಮೇಲೆ ಕೈ ಹಾಕುತ್ತೀಯ?’  ಎಂದು ಅಭಿಮಾನಿಯನ್ನು ದಬಾಯಿಸಿ ಬಿಟ್ರು. ಶಿವಕುಮಾರ್ ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸದ ಅಭಿಮಾನಿ ಪೆಚ್ಚಾಗಿ ಸ್ವಲ್ಪ ಮುಂದಕ್ಕೆ ಸರಿದು ಬಿಟ್ಟ.

ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಶಿವಕುಮಾರ್ ಅವರು ನಿರೀಕ್ಷಿಸಿದ್ದರೆ, ಈ ರೀತಿ ಪಟಲಾಂ ಕಟ್ಟಿಕೊಂಡು ರೈತ ನಾಯಕ, ಅತ್ಯಂತ ಸರಳ ವ್ಯಕ್ತಿಯಾದ ಮಾದೇಗೌಡ ಅವರನ್ನು ಕಾಣಲು ಬರುವ ಅಗತ್ಯವಿರಲಿಲ್ಲ ಎಂದು ಡಿಕೆಶಿ ವರ್ತನೆಯಿಂದ ನೊಂದ ನಾಗರಿಕರು ಅಭಿಪ್ರಾಯಪಡುತ್ತಾರೆ.

ಕೆನಡಾದಲ್ಲಿ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೇವ್ ಹಾಗೂ ನೆದರ್‌ಲ್ಯಾಂಡ್ ನಲ್ಲಿ ಪ್ರಧಾನಿ ಮಾರ್ಕ್ ರುಟಿ ಅವರ ಹೆಗಲಿಗೆ ಕೈ ಹಾಕಿ ಸಾರ್ವಜನಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಾರೆ. ಅವರೆಂದೂ ತಮ್ಮ ಮರ್ಯಾದೆಗೆ ಚ್ಯುತಿಯಾಯಿತು ಅಂದುಕೊಳ್ಳುವುದಿಲ್ಲ. ಆದರೆ ನಮ್ಮ ದೇಶದಲ್ಲಿ ನಾವೇ ಬೆಳೆಸಿ ಆಯ್ಕೆ ಮಾಡಿ ಕಳುಹಿಸಿದ ರಾಜಕಾರಣಿಗಳಿಗೆ ಅಭಿಮಾನಿಯೊಬ್ಬ ಹೆಗಲ ಮೇಲೆ ಕೈ ಹಾಕಿದರೆ ಗೌರವಕ್ಕೆ ಚ್ಯುತಿ ಬರುತ್ತದೆ. ಶಿವಕುಮಾರ್ ಅವರೇ, ಇಂತಹ ಅಭಿಮಾನಿಗಳ ಮತಗಳಿಂದಲೇ  ನೀವು ಶಾಸಕರು, ಮಂತ್ರಿಯಾಗಿ ಈಗ ಕೆಪಿಸಿಸಿ ಅಧ್ಯಕ್ಷರಾಗಿರುವುದು ಎನ್ನುವುದು ನೆನಪಿರಲಿ.

ಇತ್ತೀಚಿನ ಸುದ್ದಿ

ಜಾಹೀರಾತು