3:41 AM Monday24 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆನ್ಲೈನ್ ಕಾರ್ಯಾಗಾರ

04/10/2021, 17:47

ಮಂಗಳೂರು(reporterkarnataka.com): ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೆಸೆಂಟ್‌ ಸಂಧ್ಯಾ ಕಾಲೇಜು, ಮಂಗಳೂರು ಹಾಗೂ ಗೋವಿಂದದಾಸ ಕಾಲೇಜು, ಸುರತ್ಕಲ್‌ನ ವಾಣಿಜ್ಯ ಸ್ನಾತಕೋತ್ತರ ವಿಭಾಗಗಳು ಭಾರತದಲ್ಲಿನ ಮ್ಯೂಚುವಲ್ ಫಂಡ್ಸ್‌ ಸಂಘ (AMFI) ದ ಸಹಯೋಗದೊಂದಿಗೆ ಕಾರ್ಯತಂತ್ರ ಯೋಜನೆಯ ಮೂಲಕ ಆರ್ಥಿಕ ಸಬಲೀಕರಣ” ಎಂಬ ವಿಷಯದ ವೆಬಿನಾರ್  ಆನ್‌ಲೈನ್ ನಲ್ಲಿ ಇತ್ತೀಚಿಗೆ ಜರುಗಿತು. 

ಬೆಸೆಂಟ್ ಸಂಧ್ಯಾ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ತಾರಾ ಶೆಟ್ಟಿ ಆಯೋಜಕರಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಎಎಂಎಫ್ ಐನ ಹಿರಿಯ ಸಲಹೆಗಾರ ಸೂರ್ಯಕಾಂತ್ ಶರ್ಮಾ (ಭಾರತೀಯ ಭದ್ರತಾ ಏನಿಮಯ ಮಂಡಳಿ (ಸೆಬಿ) ಯ ನಿವೃತ್ತ ಉಪಪ್ರಧಾನ ವ್ಯವಸ್ಥಾಪಕರು) ಭಾಗವಹಿಸಿದ್ದರು. 

ಸೂರ್ಯ ಕಾಂತ  ಶರ್ಮಾ ಪ್ರಾರಂಭದಲ್ಲಿ ವ್ಯಕ್ತಿಗತ ಆರ್ಥಿಕ ಭದ್ರತೆಯ ಬಗ್ಗೆ ವಿವರಿಸಿದರು. ಹೂಡಿಕೆದಾರರು ಸಂಪತ್ತನ್ನು ಕ್ರೋಢೀಕರಿಸುವ ಮೊದಲು ಯೋಚಿಸಿ, ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಜೀವವಿಮೆಯಲ್ಲಿ ಹಾಗೂ ಸಾಧಾರಣವಾಗಿ ವೈದ್ಯಕೀಯ ವಿಮೆಯಲ್ಲಿ ಹಾಗೂ ತುರ್ತು ಪರಿಸ್ಥಿತಿಗೆಂದು ಉಳಿತಾಯ ಮಾಡಿಕೊಂಡು ನಂತರ ಹೂಡಿಕೆ ಮಾಡಿದರೆ ಉತ್ತಮ ಎಂದು ಹೇಳಿದರು.

ಹೂಡಿಕೆದಾರರು ಉಳಿತಾಯವನ್ನು ಪ್ರತಿ ವರ್ಷ ಶೇಕಡಾ 10ರಷ್ಟು ಹೆಚ್ಚಿಸಬೇಕಾಗುತ್ತದೆ. ಹೂಡಿಕೆದಾರರು ಸಂಪತ್ತನ್ನು ಕೂಡಿಡುವವರಾಗದೇ ಸಂಪತ್ತಿನ ಸೃಷ್ಟಿಕರ್ತನಾಗಬೇಕು ಎಂದು ತಿಳಿಸಿದರು. ವಿವಿಧ ಹೂಡಿಕೆಗಳ ಮೇಲಿನ ಪ್ರತಿಫಲಗಳು, ಪಿ.ಪಿ.ಎಫ್ (PPP), ಎನ್.ಪಿ.ಎಸ್ (NPS) ಸುಕನ್ಯ ಸಮೃದ್ಧಿ ಯೋಜನೆ, ಭದ್ರತಾ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸವಿವರವಾಗಿ ವಿವರಿಸಿ,  ಇವುಗಳು ಮಧ್ಯಮ ವರ್ಗದ ಹಾಗೂ ಮಾಸಿಕ ಸಂಬಳ ಪಡೆಯುವ ಜನಸಾಮಾನ್ಯರಿಗೆ ಉತ್ತಮವಾದ ಉಳಿತಾಯ ಯೋಜನೆಗಳು ಎಂದು ಹೇಳಿದರು.

ಈ ಆನ್‌ಲೈನ್‌ ವೆಬಿನಾರ್‌ನಲ್ಲಿ ಭಾರತದಾದ್ಯಂತ 348 ಜನರು ಸಕ್ರಿಯವಾಗಿ ಭಾಗವಹಿಸಿದ್ದರು.

ಬೆಸೆಂಟ್‌ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಭಟ್ ಎ,  ಸ್ವಾಗತಿಸಿ,  ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಾತ್ವಿಕಾ ಶೆಟ್ಟಿ  ನಿರೂಪಿಸಿದರು. 

ಗೋವಿಂದದಾಸ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಜನ್ ಆಚಾರ್ಯ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು