ಇತ್ತೀಚಿನ ಸುದ್ದಿ
ಶಾಕಿಂಗ್ ನ್ಯೂಸ್: ಸರಕಾರಿ ಶಾಲೆಯನ್ನೇ ಗೋದಾಮು ಮಾಡಿದ ವ್ಯಾಪಾರಿ!; ಶಿಕ್ಷಣ ಸಚಿವರೇ ಏನು ಮಾಡುತ್ತಿದ್ದೀರಿ?
06/02/2023, 10:50

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸರಕಾರಿ ಶಾಲಾ ಕಟ್ಟಡಗಳು ಪೋಲಿ ಪೋಕರಿಗಳ ಅಡ್ಡಾ ಆಗಿರೋದನ್ನ ನೀವೆಲ್ಲಾ ನೋಡಿದ್ದಿರಿ, ಕೇಳಿದ್ದೀರಿ. ಆದರೆ ಇಲ್ಲೊಂದು ಶಾಲಾ ಕಟ್ಟಡವನ್ನೇ ವ್ಯಾಪಾರಿಯೊಬ್ಬರು ದವಸ ಧಾನ್ಯ ಇಟ್ಟುಕೊಳ್ಳುವ ಗೊಡೌನ ಮಾಡಿಕೊಂಡಿದ್ದಾರೆ.
ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲಾ ಕಟ್ಟಡ ಹಳೆಯದಾದ ಕಾರಣ ವಿದ್ಯಾರ್ಥಿಗಳಿಗೆ ಬೇರೆ ಕಟ್ಟಡದಲ್ಲಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿ ಕೊಟಡಲಾಗಿದೆ. ಆದರೆ ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಎಂಬಂತೆ, ಅದೆ ಗ್ರಾಮದ ವ್ಯಾಪಾರಿಯೊಬ್ಬ ಕಾಳು, ಕಡಿ ಮಾರಾಟ ಮತ್ತು ಖರೀದಿ ಕೇಂದ್ರ ಮಾಡಿಕೊಂಡಿದ್ದಾರೆ. ಇದೆಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಈ ಕುರಿತು ಗ್ರಾಮಸ್ಥರಾದ ರಫೀಕ್ ಪಟೇಲ್ ಮಾಧ್ಯಮದವರೊಂದಿಗೆ ಮಾತನಾಡಿ ಹಲವು ಬಾರಿ ಶಾಲಾ ಕಟ್ಟಡದಲ್ಲಿರುವ ಗೊಡೌನ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲಾ ಕೂಡಲೇ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.