2:03 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಸಾರ್ವಜನಿಕ ದೀಪಾವಳಿ‌ ಉತ್ಸವ: ಬೆಳಕಿನ ಮರಕ್ಕೆ ಸಾಮೂಹಿಕವಾಗಿ ಹಣತೆ ಹಚ್ಚಿದ ಮಾತೆಯರು

04/11/2024, 18:43

ಬಂಟ್ವಾಳ(reporterkarnataka.com): ಸೀತಾರಾಮ ನಗರದ ಅಶ್ವಥಡಿ ಪೆರಾಜೆ ಅಂಗನವಾಡಿ ಕೇಂದ್ರದಲ್ಲಿ ಮಾತೆಯರು ಬೆಳಕಿನ ಮರಕ್ಕೆ ಸಾಮೂಹಿಕವಾಗಿ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿ ಉತ್ಸವ ಆಚರಿಸಲಾಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಮಧುರಾ ಕಲ್ಲಡ್ಕ ದೀಪಾವಳಿ‌ ಉತ್ಸವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ರಾಜ್ಯವಾಳಿದ ನೆನಪಿನ ಸಂಭ್ರಮದ ಆಚರಣೆಯಾಗಿದೆ. ಬೆಳಕಿನ ಹಬ್ಬ ಮನಸ್ಸಿನ ಕತ್ತಲೆಯನ್ನು‌ ಓಡಿಸಿ ಸುಜ್ಞಾನ ಬೆಳಕು ನೀಡಲಿ.ಸಮಾಜದಲ್ಲಿ‌ ಸಾಮರಸ್ಯ ಜಾಗೃತಗೊಳ್ಳಲಿ ಎಂದು ದೀಪಾವಳಿ ಹಬ್ಬದ ಮಹತ್ವವನ್ನು ತಿಳಿಸಿದರು.
ಅಶೋಕ್ ಕುಮಾರ್ ಬರಿಮಾರು ಪೊಳಲಿ ಶೀನಪ್ಪ ಹೆಗಡೆ ವಿರಚಿತ ತುಳುವಾಲ ಬಲಿಯೇಂದ್ರ ತುಳುಪಾಡ್ದನ ವಾಚನ ಮಾಡಿದರು.
ಅಭಾಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ ತುಳುನಾಡಿನ ಹಬ್ಬಗಳ ಬಗ್ಗೆ ತಿಳಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಂದಿಸಿದರು. ನಾರಾಯಣ ಎಂ.ಪಿ.,ರಾಘವ ಏಣಾಜೆ,ಭಾರತಿ ಪೆರಾಜೆ,ಗಿರಿಜಾ ಅಶ್ವತ್ಥಡಿ, ಶಶಿಕಲಾ ಮಾಧವ,ವಿಟ್ಲ ಮೈತ್ರೇಯಿ ಗುರುಕುಲದ ಜಯಂತಿ ಮಾತಾಜಿ,ಭುಜಂಗ ಮಾಣಿ,ಹೊನ್ನಪ್ಪ ಸಾಲ್ಯಾನ್,ಸದಾಶಿವ‌ ಆಚಾರ್ ಮದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು