9:35 PM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಸರಕಾರ ಕೊಡುವ 3 ಸಾವಿರ ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ 

14/06/2021, 07:30

ಉಡುಪಿ(reporterkarnataka news): ಮೀನುಗಾರಿಕೆ ಇಂದು ಅಳಿವಿನಂಚಿಗೆ ಸರಿದಿದೆ. ಮೀನುಗಾರರ ಸಮಸ್ಯೆಗಳಿಗೆ ಸರಕಾರ ತುರ್ತು ಸ್ಪಂದಿಸಬೇಕಾಗಿದೆ. ಅದೇ ರೀತಿ ಮೀನುಗಾರಿಕೆ ಉಳಿವಿಗೆ ಏಕ ರೂಪದ ಕಾನೂನು ಜಾರಿಗೆ ತರುವ ಅಗತ್ಯವಿದೆ. ತಾನು ಮೀನುಗಾರಿಕೆ ಸಚಿವನಾಗಿದ್ದಾಗ ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆ. ಕೇಂದ್ರ ಕೃಷಿ ಸಚಿವರ ಜತೆ ಈ ಕುರಿತು ಚರ್ಚೆ ಕೂಡ ಮಾಡಿದ್ದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಮೀನುಗಾರಿಕೆಗೆ ಬಳಸುವ ಡಿಸೇಲ್ ಬೆಲೆ ಇದೀಗ ಹೆಚ್ಚಳವಾಗಿದೆ. ಕೊರೊನಾದಿಂದ ರಫ್ತಿನ ಮೇಲೂ ಪರಿಣಾಮ ಬೀರಿದೆ. ನಮ್ಮ ಹೆಚ್ಚಿನ ಮೀನು ಉತ್ಪನ್ನಗಳು ಚೀನಾ ದೇಶಕ್ಕೆ ರಫ್ತಾಗುತ್ತದೆ. ಇದೀಗ ಅಲ್ಲಿಯೂ ಕೂಡ ಸಮಸ್ಯೆ ಏರ್ಪಟ್ಟಿದೆ ಇದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಾಜಿ ಸಚಿವರು ಅಭಿಪ್ರಾಯಪಟ್ಟರು.

ರಾಜ್ಯ ಸರಕಾರ ಕೊಡುವ ಕೇವಲ 3 ಸಾವಿರ ರೂ. ಪರಿಹಾರದಿಂದ ಮೀನುಗಾರಿಕೆ ಉಳಿಸಲು ಸಾಧ್ಯವಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಮೀನುಗಾರಿಕೆಗೆ ಪುನಶ್ಚೇತನ ನೀಡಬೇಕು. ಏಕ ರೂಪದ ಕಾನೂನು ತರದೆ ಹೋದರೆ ಮೀನುಗಾರಿಕೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮೀನುಗಾರಿಕೆ ಇದೇ ರೀತಿ ಮುಂದೆ ಸಾಗಿದರೆ ಮುಂದಿನ 10 ವರ್ಷಗಳಲ್ಲಿ ಮೀನುಗಾರಿಕೆ ಅವನತಿ ಹೊಂದುವ ಸಾಧ್ಯತೆಯ ಕುರಿತು ಭವಿಷ್ಯ ನುಡಿದಿದ್ದೆ. ಆದರೆ ಯಾರೂ ಗಂಭೀರವಾಗಿ ಇದನ್ನು ತೆಗೆದುಕೊಂಡಿರಲಿಲ್ಲ. ಇದೀಗ ದೋಣಿ ಹೊಂದಿರುವವರು, ಅವಲಂಬಿತರು, ಉದ್ದಿಮೆದಾರರು ಭೀತಿಗೊಳಗಾಗಿದ್ದಾರೆ. ಇದೇ ನೀತಿ ಸೂಕ್ತ ನಿರೂಪಣೆಯಿಲ್ಲದೆ ಮೀನುಗಾರಿಕೆ ಮುಂದುವರಿಸಿದರೆ ಅರಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸಂಪೂರ್ಣ ಬರಿದಾಗುವ ಸಾಧ್ಯತೆ ಇದೆ. ಕೇಂದ್ರ ಹಾಗೂ ಎಲ್ಲ ರಾಜ್ಯಗಳು ಸರಕಾರ ಸೇರಿ ಧೃಢವಾದ ಸಂಕಲ್ಪ ಮಾಡಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೀನುಗಾರಿಕೆಯ ಭವಿಷ್ಯ ಚಿಂತಾಜನಕವಾಗಲಿದೆಯೆಂದು ಅವರು ನುಡಿದರು.

ರಾಜ್ಯ ಸರಕಾರ ತಕ್ಷಣಕ್ಕೆ ಡಿಸೇಲ್ ಸಬ್ಸಿಡಿ ಬಿಡುಗಡೆ ಮಾಡಬೇಕು. ಮೀನಗಾರರಿಗೆ ಕೇಂದ್ರ ಸರಕಾರದ ಎಕ್ಸೆಸ್ ತೆರಿಗೆಯಾದ 33 ರೂಪಾಯಿಂದ ವಿನಾಯಿತಿ ನೀಡಬೇಕು. ಮೀನುಗಾರರಿಗೆ ಡಿಸೇಲ್ 50 ರೂಪಾಯಿ ಒಳಗೆ ಸಿಗುವಂತಾಗಬೇಕು. ಅದು ಮೀನುಗಾರರಿಗೆ ತಾತ್ಕಾಲಿಕ ಉಪಶಮನ ನೀಡುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು