3:33 PM Saturday2 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಖಗೋಳ ಶಾಸ್ತ್ರಜ್ಞ ಪ್ರೊ. ಜಯಂತ್ ಆಚಾರ್ಯ ಇನ್ನಿಲ್ಲ

14/05/2021, 12:48

ಮಂಗಳೂರು(reporterkarnataka news):

ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜಯಂತ್ ಆಚಾರ್ಯ (67) ಹೃದಯಾಘಾತ ದಿಂದ ಮಂಗಳೂರಿನ ಕುಲಶೇಖರ ಸಮೀಪದ ಸರಿಪಳ್ಳದಲ್ಲಿರುವ ಮನೆಯಲ್ಲಿ ನಿಧನರಾದರು.    

ಪ್ರೊ.ಜಯಂತ್  ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನ ಅನೇಕರಿಗೆ ಖಗೋಲಶಾಸ್ತ್ರದ ಅಭಿರುಚಿ ಹುಟ್ಟಿಸಿದ್ದರು.

ಗ್ರಹಣ ಆಗಲೀ, ಧೂಮಕೇತು ಬರಲಿ ಆಕಾಶದ ವಿಸ್ಮಯಗಳತ್ತ ತಮ್ಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದರ ಪರಿಚಯ ಮಾಡಿಸುತ್ತಿದ್ದವರು. ಅದಕ್ಕೆಂದೇ ನಗರದಿಂದ ತುಸುದೂರ ಸರಿಪಲ್ಲ ಎಂಬಲ್ಲಿ ಮನೆ ಮಾಡಿಕೊಂಡು ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. ಮಂಗಳೂರು ಹವ್ಯಾಸಿ ಖಗೋಲವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶಿಲರಾಗಿದ್ದವರು. 

ಸಂಗೀತ, ಯಕ್ಷಗಾನ, ನಾಟಕ, ಚಾರಣ ಮೊದಲಾದ ಹಲವಾರು ಆಸಕ್ತಿಗಳನ್ನು ಹೊಂದಿದ್ದವರು.  ಕಿರಿಯರ ಜೊತೆ ಸದಾ ಸ್ನೇಹಭಾವದಿಂದ ಇರುತ್ತಿದ್ದ ಸರಳ ಸಜ್ಜನ. Sunday science school ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿದವರು.

ಬಗಲಿಗೊಂದು ಚೀಲ, ಕೈಯಲ್ಲೊಂದು single fold ಛತ್ರಿ, ಚೌಕ ಫ್ರೇಮಿನ ಕನ್ನಡಕ, ಸದಾ ನಗುಮುಖದ ಶಾಂತ ವ್ಯಕ್ತಿತ್ವದ ಇವರು 

 ತಾಯಿ, ಪತ್ನಿ, ಎರಡು ಪುತ್ರಿಯರು, ಅಳಿಯ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು