ಇತ್ತೀಚಿನ ಸುದ್ದಿ
ಸಂಘನಿಕೇತನ ಗಣೇಶನಿಗೆ ಅಮೃತ ಮಹೋತ್ಸವ ಸಂಭ್ರಮ: ಮಂಗಳ ವಾದ್ಯದೊಂದಿಗೆ ದೇವರ ಮೃತಿಕಾ ವಿಗ್ರಹ ಆಗಮನ
30/08/2022, 20:50

ಚಿತ್ರ: ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com): ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ ( 75 ವರ್ಷ ) ಈ ಪ್ರಯುಕ್ತ ಶ್ರೀ ಮಹಾಗಣಪತಿ ದೇವರ ಮೃತಿಕಾ ವಿಗ್ರಹವನ್ನು ವಿಜೃಂಭಣೆಯಿಂದ ತರಲಾಯಿತು . ದಿನಾಂಕ 31 ರಿಂದ ಸೆ.4ರ ವರೆಗೆ ಗಣೇಶೋತ್ಸವ ನಡೆಯಲಿದೆ. ಸಾರ್ವಜನಿಕ ಗಣೇಶ್ಜೋತ್ಸವದ ಉದ್ಘಾಟನೆ ಶ್ರೀ ಮುಕುಂದ್ ಮಾನನೀಯ
(ಸಹಸರ ಕಾರ್ಯವಾಹ ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಇವರ ದಿವ್ಯ ಹಸ್ತಗಳಿಂದ ನೆರವೇರಲಿದೆ . ವಿವಿಧ ಧಾರ್ಮಿಕ , ಸಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಸದ್ಭಕ್ತ ರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬೇಕಾಗಿ ಸಮಿತಿಯು ವಿನಂತಿಸಿಕೊಂಡಿದೆ . ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಎಂ . ಸತೀಶ್ ಪ್ರಭು , ಸುರೇಶ ಕಾಮತ್ , ಉಪಾಧ್ಯಕ್ಷರಾದ ಜೆ . ಕೆ ರಾವ್ , ಆನಂದ ಪಾಂಗಳ , ಕೆ ಪಿ ಟೈಲರ್ , ಅಭಿಷೇಕ್ ಭಂಡಾರಿ, ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ ,
ರಘುವೀರ್ ಕಾಮತ್ , ಎಸ್. ಆರ್. ಕುಡ್ವ , ಗಣೇಶ್ ಪ್ರಸಾದ್ , ಜಯಪ್ರಕಾಶ್ ಮಂಗಳಾದೇವಿ, ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.