6:53 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಸಾಲು ಸಾಲು ದೀಪಗಳ ಮಾಲೆ, ಆಕಾಶಬುಟ್ಟಿ: ದೀಪಾವಳಿ ಏನಿದರ ಅರ್ಥ?: ನಕರಾತ್ಮದಿಂದ ಸಕರಾತ್ಮವೇ?

03/11/2021, 07:50

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ, ಅರ್ಥಾತ್ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ತರಲಿ ಎಂದು ಸಂಭ್ರಮಿಸುವ ಒಂದು ವಿಶೇಷ ಪರ್ವ ದೀಪಾವಳಿ. 

ನಿಶೆಯನ್ನು ಹೊಡೆದೋಡಿಸುವುದು ಎಂಬ ಅರ್ಥವೂ ಇದೆ. ನಮ್ಮ ಮನದ ಋಣಾತ್ಮಕ ಭಾವಗಳನ್ನು ತೊರೆದು ಸಕಾರಾತ್ಮಕನ್ನು ಬೆಳಗಿಸಲು ದೀಪಗಳನ್ನು ಬೆಳಗುತ್ತೇವೆ. ದೀಪಾವಳಿ ಎಂದರೆ ತಕ್ಷಣ ನೆನಪಿಗೆ ಬರುವುದು ಸಾಲು ಸಾಲು ದೀಪಗಳ ಸಾಲು, ಆಕಾಶಬುಟ್ಟಿ, ಪ್ರತಿನಿತ್ಯ ಮನೆಯಲ್ಲಿ ಬೆಳಗುವ ದೀಪ ಜೀವನದ ಆಶೋತ್ತರಗಳ ದ್ಯೋತಕ. 

ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭ ಸಮಾರಂಭ ಆರಂಭವಾಗುವುದು ದೀಪ ಬೆಳಗುವ ಮೂಲಕ. ಇಲ್ಲಿ ಬೆಳಕನ್ನು ಜೀವನ ವೃದ್ಧಿಯ ದ್ಯೋತಕವಾಗಿ ಕಾಣುತ್ತೇವೆ. ದೀಪದ ಬೆಳಕು ಯಾವಾಗಲೂ ಊರ್ಧ್ವ ಮುಖಿಯಾಗಿರುತ್ತದೆ. ಅಂದರೆ ನಾವು ದೀಪದಂತೆ ಉರಿದು ಇತರರ ಬಾಳಿಗೆ ಬೆಳಕು ನೀಡಬೇಕೆಂಬುದೇ ಆಶಯ.

ಕಾರ್ತಿಕ ಮಾಸದಲ್ಲಿ ಆಚರಿಸುವ ಈ ಹಬ್ಬದ ಜೊತೆಗೆ ಎಲ್ಲಾ ದೇವಾಲಯಗಳಲ್ಲಿಯೂ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ತಿಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಭಾರತೀಯರಾದ ನಮಗೆ ದೀಪ ಎನ್ನುವುದು ಸೂರ್ಯನ ಪುಟ್ಟ ಪ್ರತಿರೂಪದಂತೆ.

ಜ್ಞಾನದ ಸಂಕೇತ ವೈರತ್ವದ ಮೇಲೆ ವಿಜಯ ಗಳಿಸಿದ ಸಂಕೇತ, ಮುಖ್ಯವಾಗಿ ನಮ್ಮೊಳಗಿನ ಎಲ್ಲಾ ದುರ್ಗುಣಗಳನ್ನು ಹೊಡೆದೋಡಿಸಿ ಬೆಳಕನ್ನು ಬೆಳಗಿಸುವ ಹಬ್ಬ.

 ಶ್ರೀರಾಮಚಂದ್ರನ ಪಟ್ಟಾಭಿಷೇಕ ನರಕಾಸುರನ ಸಂಹಾರ ಇದೆಲ್ಲವೂ ನಡೆದದ್ದು ಇದೇ ದಿನದಂದು.

ಒಟ್ಟಿನಲ್ಲಿ ದೀಪಾವಳಿಯೆಂದರೆ ಕರಾಳ ಶಕ್ತಿಗಳನ್ನು ಸಂಹರಿಸಿ ಎಲ್ಲರ ಬದುಕಿನಲ್ಲಿ ಬೆಳಕು ತಂದ ಪರ್ವದಿನ. ಈ ದೀಪಾವಳಿ ನಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

” ಲೋಕ ಸಮಸ್ತಾ  ಸುಖಿನೋ ಭವಂತು””

✍️

ಇತ್ತೀಚಿನ ಸುದ್ದಿ

ಜಾಹೀರಾತು