3:24 PM Friday19 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಸಾಲು ಸಾಲು ದೀಪಗಳ ಮಾಲೆ, ಆಕಾಶಬುಟ್ಟಿ: ದೀಪಾವಳಿ ಏನಿದರ ಅರ್ಥ?: ನಕರಾತ್ಮದಿಂದ ಸಕರಾತ್ಮವೇ?

03/11/2021, 07:50

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ, ಅರ್ಥಾತ್ ನಮ್ಮ ಜೀವನದ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ತರಲಿ ಎಂದು ಸಂಭ್ರಮಿಸುವ ಒಂದು ವಿಶೇಷ ಪರ್ವ ದೀಪಾವಳಿ. 

ನಿಶೆಯನ್ನು ಹೊಡೆದೋಡಿಸುವುದು ಎಂಬ ಅರ್ಥವೂ ಇದೆ. ನಮ್ಮ ಮನದ ಋಣಾತ್ಮಕ ಭಾವಗಳನ್ನು ತೊರೆದು ಸಕಾರಾತ್ಮಕನ್ನು ಬೆಳಗಿಸಲು ದೀಪಗಳನ್ನು ಬೆಳಗುತ್ತೇವೆ. ದೀಪಾವಳಿ ಎಂದರೆ ತಕ್ಷಣ ನೆನಪಿಗೆ ಬರುವುದು ಸಾಲು ಸಾಲು ದೀಪಗಳ ಸಾಲು, ಆಕಾಶಬುಟ್ಟಿ, ಪ್ರತಿನಿತ್ಯ ಮನೆಯಲ್ಲಿ ಬೆಳಗುವ ದೀಪ ಜೀವನದ ಆಶೋತ್ತರಗಳ ದ್ಯೋತಕ. 

ನಮ್ಮ ಸಂಸ್ಕೃತಿಯಲ್ಲಿ ಯಾವುದೇ ಶುಭ ಸಮಾರಂಭ ಆರಂಭವಾಗುವುದು ದೀಪ ಬೆಳಗುವ ಮೂಲಕ. ಇಲ್ಲಿ ಬೆಳಕನ್ನು ಜೀವನ ವೃದ್ಧಿಯ ದ್ಯೋತಕವಾಗಿ ಕಾಣುತ್ತೇವೆ. ದೀಪದ ಬೆಳಕು ಯಾವಾಗಲೂ ಊರ್ಧ್ವ ಮುಖಿಯಾಗಿರುತ್ತದೆ. ಅಂದರೆ ನಾವು ದೀಪದಂತೆ ಉರಿದು ಇತರರ ಬಾಳಿಗೆ ಬೆಳಕು ನೀಡಬೇಕೆಂಬುದೇ ಆಶಯ.

ಕಾರ್ತಿಕ ಮಾಸದಲ್ಲಿ ಆಚರಿಸುವ ಈ ಹಬ್ಬದ ಜೊತೆಗೆ ಎಲ್ಲಾ ದೇವಾಲಯಗಳಲ್ಲಿಯೂ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ತಿಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆ.

ಭಾರತೀಯರಾದ ನಮಗೆ ದೀಪ ಎನ್ನುವುದು ಸೂರ್ಯನ ಪುಟ್ಟ ಪ್ರತಿರೂಪದಂತೆ.

ಜ್ಞಾನದ ಸಂಕೇತ ವೈರತ್ವದ ಮೇಲೆ ವಿಜಯ ಗಳಿಸಿದ ಸಂಕೇತ, ಮುಖ್ಯವಾಗಿ ನಮ್ಮೊಳಗಿನ ಎಲ್ಲಾ ದುರ್ಗುಣಗಳನ್ನು ಹೊಡೆದೋಡಿಸಿ ಬೆಳಕನ್ನು ಬೆಳಗಿಸುವ ಹಬ್ಬ.

 ಶ್ರೀರಾಮಚಂದ್ರನ ಪಟ್ಟಾಭಿಷೇಕ ನರಕಾಸುರನ ಸಂಹಾರ ಇದೆಲ್ಲವೂ ನಡೆದದ್ದು ಇದೇ ದಿನದಂದು.

ಒಟ್ಟಿನಲ್ಲಿ ದೀಪಾವಳಿಯೆಂದರೆ ಕರಾಳ ಶಕ್ತಿಗಳನ್ನು ಸಂಹರಿಸಿ ಎಲ್ಲರ ಬದುಕಿನಲ್ಲಿ ಬೆಳಕು ತಂದ ಪರ್ವದಿನ. ಈ ದೀಪಾವಳಿ ನಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.

” ಲೋಕ ಸಮಸ್ತಾ  ಸುಖಿನೋ ಭವಂತು””

✍️

ಇತ್ತೀಚಿನ ಸುದ್ದಿ

ಜಾಹೀರಾತು