3:23 AM Saturday16 - May 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ | ಆಗಸ್ಟ್ 2ರಂದು ‘ಸ್ಟೀಲ್ ಸಿಟಿ ರನ್ 2026’ 5ನೇ ಆವೃತ್ತಿ:… ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ…

ಇತ್ತೀಚಿನ ಸುದ್ದಿ

ಎಸ್ ಟಿ ಮೀಸಲಾತಿಗೆ ಸರಕಾರದ ಮೀನಮೇಷ: ತಳವಾರ ಸಮುದಾಯ ಆಕ್ರೋಶ; ಕಲಬುರ್ಗಿ ಚಲೋ ಎಚ್ಚರಿಕೆ

23/02/2022, 18:13

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ತಳವಾರ್ ಹಾಗೂ ಪರಿವಾರ ಸಮುದಾಯಗಳು ಎಸ್ ಟಿ ಮೀಸಲಾತಿಗಾಗಿ ಸುಮಾರು 40

ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿದೆ. ಆದರೆ ಸರಕಾರ ಮಾತ್ರ ತಳವಾರ ಹಾಗೂ ಪರಿವಾರ ಸಮುದಾಯದವರ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಸಮಾಜದ ಮುಖಂಡು ಆರೋಪಿಸಿದ್ದಾರೆ.

ಎಸ್ ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆಯೇ ಗ್ರೀನ್ ಸಿಗ್ನಲ್ ನೀಡಿದ್ದರು ರಾಜ್ಯ ಸರ್ಕಾರ್ ಮಾತ್ರ ಪ್ರತಿಷ್ಠೆ ಮೆರೆಯುತ್ತಿದೆ ಎಂದು ತಳವಾರ್ ಸಮಾಜದ ಮುಖಂಡರು ದೂರಿದ್ದಾರೆ.

ಸಿಂಧಗಿ ಉಪ ಚುನಾವಣೆಯಲ್ಲಿ ಸರಕಾರ ಎಸ್ ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಭರವಸೆ ನೀಡಿತ್ತು. ನೆಪ ಮಾತ್ರಕ್ಕೆ ಎನ್ನುವಂತೆ ದಿನಾಂಕ 29 ಜನವರಿ 2022 ರಂದು ತಳವಾರ ಹಾಗೂ ಪರಿವಾರ ಎಸ್ಟಿ ಮೀಸಲಾತಿ ಗೆ ಅಧಿಕೃತವಾಗಿ ಸೇರಿಸುವಂತೆ ಘೋಷಣೆ ಮಾಡಿದರು ಸಹ ಕೆಲ ರಾಜಕಾರಣಿಗಳ ಕೈ ವಾಡದಿಂದ ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ

ಹೀಗೆ ಸರ್ಕಾರ ಬಡವರ ತುಟಿಗೆ ತುಪ್ಪ ಸವರೋದನ್ನ ಬಿಟ್ಟು ನ್ಯಾಯುತವಾಗಿ ನಮಗೆ ಸಿಗಬೇಕಾದ ಹಕ್ಕು ನಮಗೆ ಕೊಡಿ. ಇಲ್ಲವಾದಲ್ಲಿ ಬರುವ  ಮಾರ್ಚ್ 15 ರಂದು ಗುಲ್ಬರ್ಗ ಚಲೋ ರ್ಯಾಲಿಯಣ್ಣ ಹಮ್ಮಿಕೊಂಡಿದ್ದು ಸರಕಾರಕ್ಕೆ ಹಾಗೂ ಪಡದೆಯ ಅಂಚಿನಲ್ಲಿ ಸಮುದಾಯದ ವಿರುದ್ದ ಪಿತೂರಿ ಹುಡುತ್ತಿರುವ ರಾಜಕಾರಣಿಗಳ ಹೆಸರು ಬಹಿರಂಗಿಸಿ ರಾಜ್ಯದೆಂತ ತಳವಾರ್ ಸಮುದಾಯದ ಹೋರಾಟ ಮಾಡಲಾಗುವುದು

ಎಂದು ಮುಖಾಂಡರು ಹಾಗೂ ವಕೀಲಾರದ ಅಶೋಕ ಗುಳಗಾವಿ ಮಾಧ್ಯಮದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ರವಾನಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು