9:12 AM Tuesday26 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಎಸ್ ಟಿ ಮೀಸಲಾತಿಗೆ ಸರಕಾರದ ಮೀನಮೇಷ: ತಳವಾರ ಸಮುದಾಯ ಆಕ್ರೋಶ; ಕಲಬುರ್ಗಿ ಚಲೋ ಎಚ್ಚರಿಕೆ

23/02/2022, 18:13

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ತಳವಾರ್ ಹಾಗೂ ಪರಿವಾರ ಸಮುದಾಯಗಳು ಎಸ್ ಟಿ ಮೀಸಲಾತಿಗಾಗಿ ಸುಮಾರು 40

ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿದೆ. ಆದರೆ ಸರಕಾರ ಮಾತ್ರ ತಳವಾರ ಹಾಗೂ ಪರಿವಾರ ಸಮುದಾಯದವರ ಜೊತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ ಎಂದು ಸಮಾಜದ ಮುಖಂಡು ಆರೋಪಿಸಿದ್ದಾರೆ.

ಎಸ್ ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರ ಎರಡು ವರ್ಷಗಳ ಹಿಂದೆಯೇ ಗ್ರೀನ್ ಸಿಗ್ನಲ್ ನೀಡಿದ್ದರು ರಾಜ್ಯ ಸರ್ಕಾರ್ ಮಾತ್ರ ಪ್ರತಿಷ್ಠೆ ಮೆರೆಯುತ್ತಿದೆ ಎಂದು ತಳವಾರ್ ಸಮಾಜದ ಮುಖಂಡರು ದೂರಿದ್ದಾರೆ.

ಸಿಂಧಗಿ ಉಪ ಚುನಾವಣೆಯಲ್ಲಿ ಸರಕಾರ ಎಸ್ ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಭರವಸೆ ನೀಡಿತ್ತು. ನೆಪ ಮಾತ್ರಕ್ಕೆ ಎನ್ನುವಂತೆ ದಿನಾಂಕ 29 ಜನವರಿ 2022 ರಂದು ತಳವಾರ ಹಾಗೂ ಪರಿವಾರ ಎಸ್ಟಿ ಮೀಸಲಾತಿ ಗೆ ಅಧಿಕೃತವಾಗಿ ಸೇರಿಸುವಂತೆ ಘೋಷಣೆ ಮಾಡಿದರು ಸಹ ಕೆಲ ರಾಜಕಾರಣಿಗಳ ಕೈ ವಾಡದಿಂದ ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ

ಹೀಗೆ ಸರ್ಕಾರ ಬಡವರ ತುಟಿಗೆ ತುಪ್ಪ ಸವರೋದನ್ನ ಬಿಟ್ಟು ನ್ಯಾಯುತವಾಗಿ ನಮಗೆ ಸಿಗಬೇಕಾದ ಹಕ್ಕು ನಮಗೆ ಕೊಡಿ. ಇಲ್ಲವಾದಲ್ಲಿ ಬರುವ  ಮಾರ್ಚ್ 15 ರಂದು ಗುಲ್ಬರ್ಗ ಚಲೋ ರ್ಯಾಲಿಯಣ್ಣ ಹಮ್ಮಿಕೊಂಡಿದ್ದು ಸರಕಾರಕ್ಕೆ ಹಾಗೂ ಪಡದೆಯ ಅಂಚಿನಲ್ಲಿ ಸಮುದಾಯದ ವಿರುದ್ದ ಪಿತೂರಿ ಹುಡುತ್ತಿರುವ ರಾಜಕಾರಣಿಗಳ ಹೆಸರು ಬಹಿರಂಗಿಸಿ ರಾಜ್ಯದೆಂತ ತಳವಾರ್ ಸಮುದಾಯದ ಹೋರಾಟ ಮಾಡಲಾಗುವುದು

ಎಂದು ಮುಖಾಂಡರು ಹಾಗೂ ವಕೀಲಾರದ ಅಶೋಕ ಗುಳಗಾವಿ ಮಾಧ್ಯಮದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ರವಾನಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು