9:54 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್‌ ತಿಂಗಳ ವಿಜೇತರಾಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಆಯ್ಕೆ

16/10/2024, 14:50

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಅವರು ಆಯ್ಕೆಯಾಗಿದ್ದಾರೆ.


ಪುತ್ತೂರು ನಿವಾಸಿಗಳಾದ ದೀಪಾ ಮತ್ತು ಭಾಸ್ಕರ್ ದಂಪತಿ ಪುತ್ರಿಯಾದ ನಮಸ್ವಿ ಭಾಸ್ಕರ್ ಅವರು ಅತ್ತಾವರದ ಸರೋಜಿನಿ ಮಧುಸೂಧನ್ ಕುಶೆ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತಿದ್ದಾಳೆ. ಹಾಡು, ನೃತ್ಯ, ಚಿತ್ರ ಬಿಡಿಸುದು, ನಿರೂಪಣೆ ಹಾಗೂ ಸ್ವಂತವಾಗಿ ಹಾಡು ಬರೆಯುದು, ಕಥೆ ಬರೆಯುದರಲ್ಲಿ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆ. ಈಕೆ ಹಾಡು, ನೃತ್ಯ, ಛದ್ಮವೇಷ ಮುಂತಾದುವುಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದಿದ್ದಾಳೆ. ಇತೀಚೆಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಭಕ್ತಿ ಗೀತೆ ಹಾಗೂ ಆಶು ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಂದಾಪುರ ಕಲಾವಿದ ಸಾವಿರ ಸಂಚಿಕೆಯ ಸಂಭ್ರಮದಲ್ಲಿ ಪ್ರತಿಭಾರತ್ನ ಎಂಬ ಬಿರುದು ಕೊಟ್ಟು ಗೌರವಿಸಿರುತ್ತಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯವರು ಕಲಾರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದ್ದಾಳೆ.
ಕುಮಾರ್ ನಿಹಾಲ್ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತ ಮೂಡಬಿದಿರೆಯ ಸುಕೇಶ್ ಮತ್ತು ಮಲ್ಲಿಕಾ ದಂಪತಿಯ ಪುತ್ರ. ಈತನ ಹವ್ಯಾಸಗಳು ಯಕ್ಷಗಾನ , ಕೀಬೋರ್ಡ್, ನಾಟಕ , ಸಂಗೀತ ಹಾಗೂ ಕವನ ಬರೆಯುವುದು. ಕೀಬೋರ್ಡ್ ಗುರುಗಳಾದ ಸಂಸ್ಕೃತ ವಿದ್ವಾನ್ ಗಜಾನನ ಮರಾಟೆ ಅವರಿಂದ ಕಲಿಯುತ್ತಿದ್ದಾನೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತುಳಸಿ ಪೇಜತೈ ಅವರಲ್ಲಿ ಅಭ್ಯಾಸಿಸುತ್ತಿದ್ದಾನೆ. ಸುಗಮ ಸಂಗೀತವನ್ನು ವಿದ್ವಾನ್ ಯಶವಂತ್ ಎಂ.ಜಿ. ಅವರಲ್ಲಿ, ಯಕ್ಷಗಾನವನ್ನು ರಕ್ಷಿತ್ ಪಡ್ರೆ ಅವರಲ್ಲಿ ಕಲಿಯುತ್ತಿದ್ದಾನೆ. ನಾಟಕ ಹಾಗೂ ಕವನ ಬರೆಯುವುದನ್ನು ಮೋಹನ್ ಹೋಸ್ಮರ್ ಅವರು ಕಲಿಸುತ್ತಿದ್ದಾರೆ. ಹಾಗೆಯೇ ಇವರು ಇನ್ಸ್ಟ್ರುಮೆಂಟ್ ನ್ನು ನುಡಿಸುವುದನ್ನು ಕಲಿಯುತ್ತಿದ್ದಾನೆ. ಈತನಿಗೆ ದಶಮ ಸಿದ್ಧಿ ಸಂಭ್ರಮದಲ್ಲಿ ಸಿದ್ಧಿ ಅವಾರ್ಡ್ ದೊರಕಿರುತ್ತದೆ.
*ದೊರೆತ ಪ್ರಶಸ್ತಿಗಳು:*
•ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಸಂಶೋಧನಾ ಕೇಂದ್ರದ ವತಿಯಿಂದ ನಡೆಸಲ್ಪಟ್ಟ ಕನಕ ಕೀರ್ತನ ಗಂಗೋತ್ರಿ, ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಫ್ರೌಢಶಾಲೆಯ ವಿಭಾಗದಿಂದ 2023-24 ನೇ ಸಾಲಿನ ಕನಕ ಪುರಸ್ಕಾರ.
•ಮಹಿಳಾ ಮತ್ತು ಮಕ್ಕಳ ಇಲಾಖೆ ಕರ್ನಾಟಕ ಆಯೋಜಿಸಿದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
•ಬೀಚ್ ಉತ್ಸವ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ
•ಅವಿನ್ ಸ್ವರ ಸಂಗಮ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಚಿಕ್ಕಮಗಳೂರಿನಲ್ಲಿ ನಡೆಯಿತು ಇದರಲ್ಲಿ ಮೊದಲನೇ ಸಮಾಧಾನಕರ ಬಹುಮಾನ ಪಡೆದಿರುತ್ತಾನೆ.
•ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
•ಭಾರತ್ ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ ನಡೆಸಿದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
•ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಫ್ರೌಢ ವಿಭಾಗದ ಭಾವಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಹಾಗೂ ಅನೇಕ ಕಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ.
*ಸನ್ಮಾನ:*
* ದಕ್ಷಿಣ ಕನ್ನಡ ಜಿಲ್ಲಾ ಚಪ್ಟೆಗಾರ್ ಸಂಘದಲ್ಲಿ ಸನ್ಮಾನವನ್ನು ಮಾಡಲಾಗಿದೆ.
* ಶಾಲೆಯಲ್ಲಿ ಸನ್ಮಾನವನ್ನು ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು