5:39 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ರಕ್ತಹೀನತೆ: ಇದಕ್ಕೆ ಕಾರಣ ಏನು?; ರಕ್ತಹೀನತೆಯಿಂದ ಹೇಗೆ ಪಾರಾಗಬಹುದು?

22/01/2022, 08:03

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಗತ್ಯಕ್ಕಿಂತ ಪ್ರಮಾಣಕ್ಕಿಂತ ಕಡಿಮೆ ಆಗುವುದನ್ನು ರಕ್ತಹೀನತೆ ಎನ್ನುತ್ತಾರೆ. ಆರೋಗ್ಯವಂತರಲ್ಲಿ ಇದರ ಪ್ರಮಾಣ ಮಹಿಳೆಯರಲ್ಲಿ <12gm/dl ಹಾಗು ಪುರುಷರಲ್ಲಿ <13gm/ ಕಂಡು ಬರುತ್ತದೆ.
ಇದು ಇತ್ತೀಚಿನ ದಿನಮಾನದಲ್ಲಿ ಅತೀ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಸಮಸ್ಯೆ ಆಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ಕಾಣಬಹುದಾದೆ. ನಮ್ಮ ದೇಶದಲ್ಲಿ ಕಬ್ಬಿಣ ಅಂಶದ ಕೊರತೆಯಿಂದಾಗಿ ಬರುವ ರಕ್ತಹೀನತೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್, ಕ್ಯಾನ್ಸರ್, ಕೆಲವೊಂದು ಔಷಧಿಯ ಸೇವನೆಯಿಂದ, ಮಹಿಳೆಯರಲ್ಲಿ ಋತುಸ್ರಾವ, ಗರ್ಭಿಣಿಯರಲ್ಲಿ, ಬಾಣಂತಿಯರಲ್ಲಿ, ಹದಿಹರೆಯದ ಹೆಣ್ಣುಮಕ್ಕಳಲ್ಲಿ, ಜಂತುಹುಳುವಿನ ಸಮಸ್ಯೆಯಿಂದ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ರಕ್ತ ಹೀನತೆ ಕಂಡುಬರಬಹುದು.

ರಕ್ತಹೀನತೆಯಿಂದಾಗಿ ತಲೆಸುತ್ತವುದು, ಕೂದಲು ಉದುರುವುದು, ಉಬ್ಬಿದ ಉಗುರುಗಳು, ಉಸಿರಾಡಲು ತೊಂದರೆ, ಪದೇ ಪದೇ ಕಂಡುಬರುವ ಬಾಯಿಹುಣ್ಣು, ಆಯಾಸ, ಹೃದಯದ ಬಡಿತದಲ್ಲಿ ಏರಿಳಿತ, ಮುಟ್ಟಿನ ತೊಂದರೆಯೊಂದಿಗೆ , ಕೆಲವರಲ್ಲಿ ಆಹಾರೇತರ ವಸ್ತುಗಳಾದ ಮಂಜುಗಡ್ಡೆ, ಮಣ್ಣು, ಸೀಮೆಸುಣ್ಣದ ಸೇವನೆಯನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ಹಿಮೋಗ್ಲೋಬಿನ್ ಪ್ರಮಾಣವನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.

ರಕ್ತಹೀನತೆ ಸಮಸ್ಯೆಯಿಂದ ಮುಕ್ತರಾಗಬೇಕಾದರೆ ಮೊದಲು ಮೂಲ ಕಾರಣವನ್ನು ತಿಳಿದುಕೊಂಡು, ನಂತರ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯ ಕಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಆಹಾರಗಳಾದ ಹಸಿರು ತರಕಾರಿ, ಬೀಟ್ರೂಟ್, ಕ್ಯಾರಟ್, ಸೇಬು ಹಣ್ಣು, ದಾಳಿಂಬೆ ಹಣ್ಣು, ಬ್ರೋಕಲಿ, ಒಣ ದ್ರಾಕ್ಷಿ ಖರ್ಜುರ, ನುಗ್ಗೆಸೊಪ್ಪು,ಮಾಂಸಹಾರಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರಂಭಿಕ ಘಟ್ಟದಲ್ಲೇ ಪರಿಣಾಮಕಾರಿಯಾಗಿರುವುದು.

ರಕ್ತಹೀನತೆ ಎನ್ನುವುದು ಒಂದು ಖಾಯಿಲೆಯಲ್ಲ, ಕೆಲವೊಮ್ಮೆ ಇದು ಇತರ ರೋಗದ ಲಕ್ಷಣವಾಗಿರಬಹುದು. ಆದ್ದರಿಂದ ಇದನ್ನು ಕಡೆಗಣಿಸದೆ ಸೂಕ್ತ ಚಿಕಿತ್ಸೆಯನ್ನು ಆರಂಭಿಕ ಘಟ್ಟದಲ್ಲೇ ಪಡೆದುಕೊಳ್ಳುವುದರಿಂದ ಆರೋಗ್ಯದ  ಸುಸ್ಥಿತಿಯನ್ನು ಕಾಪಾಡಿಕೊಳ್ಳಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

drbhavyashetty10@gmail.com

ಇತ್ತೀಚಿನ ಸುದ್ದಿ

ಜಾಹೀರಾತು