11:37 PM Sunday23 - August 2026
ಬ್ರೇಕಿಂಗ್ ನ್ಯೂಸ್
*ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಇತ್ತೀಚಿನ ಸುದ್ದಿ

Raichuru | ಮಸ್ಕಿ ಶ್ರೀ ಚಿಕ್ಕ ಅಂತರಗಂಗೆ ದುರ್ಗಾದೇವಿ ಜಾತ್ರೆ: ಹರಿದು ಬಂದ ಭಕ್ತ ಸಾಗರ

28/05/2025, 21:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದ ಶ್ರೀ ಚಿಕ್ಕ ಅಂತರಗಂಗೆಯಲ್ಲಿ ನೆಲೆಸಿರುವ ಬಳ್ಳಾರಿ ದುರ್ಗಮ್ಮ ಎಂದು ಪ್ರಸಿದ್ಧಿಯಾಗಿದ್ದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಮಂಗಳವಾರ ನಡೆಯಿತು.


ನಡೆದಾಡುವ ದೇವರು ಬಳ್ಳಾರಿ ದುರ್ಗಮ್ಮ ಹೆಸರುವಾಸಿಯಾಗಿ ತನ್ನದೇ ಆದ ಒಂದು ಇತಿಹಾಸವಿದೆ. ಅಂತಹ ಶ್ರೀ ದುರ್ಗಾದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ನಡೆಯುತ್ತದೆ.
ಏಳು ಊರಿನ ಗೌಡರು ಸೇರಿ ಈ ಜಾತ್ರೆ ಅದ್ದೂರಿಯಿಂದ ಸಡಗರದಿಂದ ಮಾಡುತ್ತಾರೆ. ಭಕ್ತರು ತಮ್ಮ ಹರಕೆಗಳನ್ನು ತೀರಿಸಿಕೊಳ್ಳಲು ದೇವರಿಗೆ ತಮ್ಮ ಮುಡುಪನ್ನು ಅರ್ಪಿಸುವ ದೃಶ್ಯ ಕಂಡು ಬಂತು. ಭಕ್ತಿಯಿಂದ ಬೇಡಿಕೊಳ್ಳುವ ದೃಶ್ಯ ಕಂಡ ಬಂತು.
ಭಜನೆ, ಮಂಗಳಾರತಿ, ರುದ್ರಾಭಿಷೇಕ ವಾದ್ಯಗಳೊಂದಿಗೆ ಭಕ್ತರು ಕಳಸ ಕನ್ನಡಿ ಡೊಳ್ಳು ಕುಣಿತದೊಂದಿಗೆ ಜೈಕಾರದೊಂದಿಗೆ ಹುಚ್ಚಯ್ಯ ಕಾರ್ಯಕ್ರಮ ಜರಗಿತು.
ಸುತ್ತಮುತ್ತಲಿನ ಗ್ರಾಮಗಳಾದ ಗೊಲ್ಲರಟ್ಟಿ, ಮ್ಯಾದಹಾಳು, ಅಂತರಗಂಗೆ, ನಾಗರಬೆಂಚಿ, ಮೆದಿಕಿನಾಳ, ಬೈಲಗುಡ್ಡ ಹಾಗೂ ತಾಂಡ ದೊಡ್ಡಿಗಳಿಂದ ಭಕ್ತರ ಆಗಮಿಸಿ ತಮ್ಮ ತನು ಮನ ಧನದಿಂದ ದುರ್ಗಾದೇವಿ ಪೂಜಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು