ಇತ್ತೀಚಿನ ಸುದ್ದಿ
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ
11/03/2026, 19:11
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com
ಒಳ ಮೀಸಲಾತಿ ಜಾರಿ ಹೋರಾಟ ದಲ್ಲಿ ಭರತ್ ಎಂಬ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಹೋರಾಟದ ಟೆಂಟ್ ಮುಂದೆ ಸಮುದಾಯದ ಮುಖಂಡರು
ಕ್ರಾಂತಿಕಾರಿ ಹಾಡುವ ಹಾಡುವ ವೇಳೆಯಲ್ಲಿ ಏಕಾಏಕಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾದರು. ಶರ್ಟ್ ಬಿಚ್ಚಿ ಪೆಟ್ರೋಲ್ ಸುರಿದುಕೊಂಡ ಕಾರಣ ಅಲ್ಲಿಯೇ ಇದ್ದ ಪೊಲೀಸರು ತಕ್ಷಣ ಗಮನಿಸಿ ಬೆಂಕಿ ಪೊಟ್ಟಣ ಪಡೆದು ಅನಾಹುತ ತಪ್ಪಿಸಿ, ಅಂಬುಲೆನ್ಸ್ ನಲ್ಲಿ ಕರೆದುಕೊಂಡು ರಿಮ್ಸ್ ಆಸ್ಪತ್ರೆಗೆ ಹೋದರು.












