8:15 AM Friday19 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ನವ ಮಂಗಳೂರು ಬಂದರಿಗೆ ಸೆವೆನ್ ಸೀಸ್ ವಾಯೇಜರ್ ಕ್ರೂಸ್ ಹಡಗು ಆಗಮನ: ಸಾಂಪ್ರದಾಯಿಕ ಸ್ವಾಗತ

27/12/2024, 21:48

ಮಂಗಳೂರು(reporterkarnataka.com):ಸುಮಾರು 650 ಮಂದಿ ಪ್ರವಾಸಿಗರನ್ನು ಹೊತ್ತಸೆವೆನ್ ಸೀಸ್ ವಾಯೇಜರ್ ಕ್ರೂಸ್ ಹಡಗು ಶುಕ್ರವಾರ ನವ ಮಂಗಳೂರು ಬಂದರಿಗೆ ಆಗಮಿಸಿತು.
ಪ್ರಸಕ್ತ ಋತುವಿನ ಎರಡನೇ ಕ್ರೂಸ್ ಹಡಗು ಇದಾಗಿದೆ. ನವ ಮಂಗಳೂರು ಬಂದರು ಪ್ರಾಧಿಕಾರವು ಐಷಾರಾಮಿ ಬಹಮಿಯನ್ ಕ್ರೂಸ್ ಹಡಗು ಸೆವೆನ್ ಸೀಸ್ ವಾಯೇಜರ್ ಅನ್ನು ಹೆಮ್ಮೆಯಿಂದ ಸ್ವಾಗತಿಸಿತು.


ಕರಾವಳಿಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಭಾರತೀಯ ಆತಿಥ್ಯದೊಂದಿಗೆ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ನಂತರ ಪ್ರವಾಸಿಗರಿಗೆ ಕಾರ್ಕಳ ಗೋಮಟೇಶ್ವರ ಬಸದಿ, ಸಾವಿರ ಕಂಬದ ಬಸದಿ,ಸೋನ್ಸ್ ಫಾರ್ಮ್, ಕಲಭಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಮತ್ತು ಸ್ಥಳೀಯ ಮಾರುಕಟ್ಟೆಗೆ
ಭೇಟಿ ನೀಡಲು ವ್ಯವಸ್ಥೆ ಮಾಡಲಾಯಿತು.
ಜಾಗತಿಕ ಕ್ರೂಸ್ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದ ಹೆಸರಾಂತ ನಾರ್ವೇಜಿಯನ್ ಕ್ರೂಸ್ ಲೈನ್‌ನ ಭಾಗವಾಗಿರುವ ನೌಕೆಯು ನವ ಮಂಗಳೂರಿ ಬಂದರಿಗೆ ಬೆಳಗ್ಗೆ 6:30ಕ್ಕೆ ಆಗಮಿಸಿ ಸಂಜೆ 5:30 ಕ್ಕೆ ನಿರ್ಗಮಿಸಿತು. 650 ಪ್ರಯಾಣಿಕರು ಮತ್ತು 450 ಸಿಬ್ಬಂದಿ ಹಡಗಿನಲ್ಲಿದ್ದರು. ಸೆವೆನ್ ಸೀಸ್ ವಾಯೇಜರ್ ಐಶ್ವರ್ಯ ಮತ್ತು ವಿಶ್ವ ದರ್ಜೆಯ ಪ್ರಯಾಣವನ್ನು ಒಳಗೊಂಡಿದೆ.
206.5 ಮೀಟರ್ ಉದ್ದದ ಕ್ರೂಸ್ ಹಡಗು, ಫುಜೈರಾದಿಂದ ಕೊಲಂಬೊಗೆ ಮುಂಬೈ, ಗೋವಾ, ನವ ಮಂಗಳೂರು ಮತ್ತು ಕೊಚ್ಚಿನ್ ಮೂಲಕ ತನ್ನ ಪ್ರಯಾಣದ ಭಾಗವಾಗಿ ಅರಬ್ಬಿ ಸಮುದ್ರವನ್ನು ನ್ಯಾವಿಗೇಟ್ ಮಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು