4:08 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ನಂತೂರು ಬಳಿ ರಸ್ತೆ ಮಧ್ಯೆ ಸಮಾಧಿ ತರಹ ತಲೆ ಎತ್ತಿರುವ ಡ್ರೈನೇಜ್ ಪಿಟ್: ಸ್ಕೂಟರ್ ಪಲ್ಟಿ; ಸವಾರ ಆಸ್ಪತ್ರೆಗೆ

07/11/2023, 23:45

ಮಂಗಳೂರು(reporterkarnataka.com): ನಗರದ ನಂತೂರು ಜಂಕ್ಷನ್ ಬಳಿ ಇಂದು ರಾತ್ರಿ ಸ್ಕೂಟರೊಂದು ಅವೈಜ್ಞಾನಿಕವಾಗಿ ನಿರ್ಮಿಸಿದ ಡ್ರೈನೇಜ್ ಪಿಟ್ ನಿಂದ ಅಪಘಾತಕ್ಕೀಡಾದ ಪರಿಣಾಮ ಸ್ಕೂಟರ್ ಸವಾರ ಯುವಕನೊಬ್ಬ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆದಾಖಲಿಸಲಾಗಿದೆ.


ಗಾಯಾಳುವನ್ನು ಶಿಫ್ಕಿ(21) ಎಂದು ಗುರುತಿಸಲಾಗಿದೆ. ಸ್ಕೂಟರ್ ಪಲ್ಟಿಯಾದ ಪರಿಣಾಮ ಯುವಕನ ಗಲ್ಲ, ಕೈ ಮತ್ತು ಕಾಲಿಗೆ ಗಾಯಗಳಾಗಿವೆ.
ಮಲ್ಲಿಕಟ್ಟೆ ಕಡೆಯಿಂದ ನಂತೂರು ಕಡೆಗೆ ಸಾಗುವ ಹಾದಿಯಲ್ಲಿ ನಂತೂರು ಬಸ್ ತಂಗುದಾಣದ ಸಮೀಪದಲ್ಲೇ ರಸ್ತೆ ಮಧ್ಯೆ ಈ ಡ್ರೈನೇಜ್ ಪಿಟ್ ಇದೆ. ಇದು ರಸ್ತೆ ಮಟ್ಟದಿಂದ ಎತ್ತರದಲ್ಲಿದ್ದು ದ್ವಿಚಕ್ರ ವಾಹನ ಸವಾರರಿಗೆ ಯಾವಾಗಲೂ ಅಪಾಯಕಾರಿಯಾಗಿದೆ. ಈ ಡ್ರೈನೇಜ್ ಪಿಟ್ ರಸ್ತೆ ಮಧ್ಯದಲ್ಲಿ ಸಮಾಧಿ ತರಹ ಎದ್ದು ಕಾಣುತ್ತದೆ. ಈ ರಸ್ತೆಯಲ್ಲಿ ದಿನಾಲೂ ಸಂಚರಿಸುವವರು ಸ್ವಲ್ಪ ಜಾಗರೂಕತೆ ವಹಿಸಿ ಇದರ ಮೇಲೆ ತಮ್ಮ ವಾಹನಗಳ ಚಕ್ರವನ್ನೇರಿಸುತ್ತಾರೆ. ಆದರೆ ಹೊಸ ಸವಾರರಿಗೆ ಇದು ಹೊಸತಾಗಿರುವುದರಿಂದ ಅಪಾಯಕಾರಿಯಾಗಿದೆ. ಇವತ್ತು ನಡೆದದ್ದು ಕೂಡ ಇದೇ ಅಚಾತುರ್ಯ. ಸ್ಕೂಟರ್ ನಿಂದ ಸವಾರ ಎಸೆಯಲ್ಪಟ್ಟು ಗಲ್ಲ ಮತ್ತು ಕೈಕಾಲಿಗೆ ಗಾಯಗಳಾಗಿವೆ. ಗಾಯಾಳುವನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು