3:32 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ನಂಜನಗೂಡು: ನಾಳೆ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಹುಲ್ಲಹಳ್ಳಿಯಲ್ಲಿ ಹಜ್ರತ್ ಸೈದಾನಿ ಬೀ ಮಾ ದರ್ಗಾ ಉರೂಸ್

09/02/2024, 19:30

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಬೆಳಲೆ ಗೇಟ್ ಬಳಿ ಇರುವ ಹಿಂದೂ ಮತ್ತು ಮುಸ್ಲಿಂ ಸಾಮರಸ್ಯ ಹಾಗೂ ಭಾವೈಕ್ಯತೆಯನ್ನು ಸಾರುವ ಹಜ್ರತ್ ಸೈದಾನಿ ಬೀ ಮಾ ದರ್ಗಾ ಶರೀಫ್ ಊರೂಸ್ ಹಾಗೂ ಗಂಧದ ಮಹೋತ್ಸವವನ್ನು ಫೆಬ್ರವರಿ 10ರಂದು ಸಂಜೆ ಸಡಗರ ಮತ್ತು ಸಂಭ್ರಮದಿಂದ ಸಾವಿರಾರು ಭಕ್ತರ ಸಮೂಹದಲ್ಲಿ ನಡೆಯಲಿದೆ ಎಂದು ದರ್ಗದ ಗುರುಗಳಾದ ಶಮ್ಸುದ್ದೀನ್ ಜೂರಿ ಖಾಜೂರು ತಿಳಿಸಿದ್ದಾರೆ.


ಮಾಧ್ಯಮದೊಂದಿಗೆ ಮಾತನಾಡಿದ ಅವರು ಫೆಬ್ರವರಿ 10 ಶನಿವಾರ ಸಂಜೆ 6 ಗಂಟೆಗೆ ಹುಲ್ಲಹಳ್ಳಿ ಜಾಮಿಯ ಮಸೀದಿ ಯಿಂದ ಹೂಗಳಿಂದ ಅಲಂಕರಿಸಲಾದ ಪಲ್ಲಕ್ಕಿ ವಾಹನದಲ್ಲಿ ಸಂದಲ್ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದ ಗಂಧವನ್ನು ಮದ್ದೂರು ತಾಲೂಕಿನ ವಿಠಲಪುರದ ಹಜರತ್ ಶಾ ಮಹಮ್ಮದ್ ಉಸ್ಮಾನ್ ಖಾದ್ರಿ ತಂಡ ದ ವತಿಯಿಂದ ಗಂಧವನ್ನು ದರ್ಗಾ ಕೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಿದರು
ಇದೇ ಸಂದರ್ಭ ದರ್ಗಾದಲ್ಲಿ ವಿವಿಧ ಧರ್ಮ ಗುರುಗಳ ಧಾರ್ಮಿಕ ಸಭೆ, ಸೇರಿದಂತೆ ಗುಂಡ್ಲುಪೇಟೆ ವಿದ್ಯಾರ್ಥಿಗಳಿಂದ ಧಫ್, ಕೇರಳ ತಂಡದವರಿಂದ ಸುಪ್ರಸಿದ್ಧ ಬುರ್ದಾ ಮಜ್ಲಿಸ್ ಹಾಗೂ ಪ್ರಸಿದ್ಧ ಕವ್ವಾಲಿ ತಂಡದವರಿಂದ ಬೆಳಗಿನ ಜಾವದವರಿಗೂ ಕವಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಇದಕ್ಕಾಗಿ ಹುಲ್ಲಹಳ್ಳಿ ಪೊಲೀಸರು ಹಾಗೂ ಧರ್ಮ ಗುರುಗಳು ಸೇರಿದಂತೆ ಗ್ರಾಮದ ಮುಖಂಡರು ದರ್ಗಾದ ಬಳಿ ತೆರಳಿ ಉರುಸ್ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ನಾಳೆ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಸರ್ವಧರ್ಮೀಯರು ಭಾಗವಹಿಸಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು