5:59 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ

23/10/2021, 16:49

ಅಂದು ,
ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು 
ಬಿಡದ ಹಿರಿಯರು,
ಆದರೆ ಚಿಣ್ಣರಿಗೆ ಬಲು ಆಸೆ 
ಏನಿರಬಹುದು? ಅದರಲ್ಲಿ ತಿಳಿವಾಸೆ
ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು 

ಇಂದು ,
 ಅದೇ ಹಿರಿಯರು ಬನ್ನಿ ವೀಡಿಯೋ ಪಾಠ
ನೋಡಿ ಎಂದರು
ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬಲೆಯಂತೆ
ಕಣ್ಣೆಲ್ಲ ಮಯ ಮಯ 

ಯಾರಿಗೆ ಬೇಕು ?ಈ ವಾಣಿ
ವರ್ಕ್ ಉಂಟು, ನೆಟ್ ಇಲ್ಲ, ವೈಫೈ ಹಾಕಿಲ್ಲ
ಆನ್ಲೈನ್ ಪಾಠದ ಗೋಳು ತಲೆಯೆಲ್ಲಾ ಹಾಳು  .

ಹೌದು 
ಅಂದು ಈ ಚಿಣ್ಣರು ಕಾಯುತ್ತಿದ್ದರು
ಶಾಲೆಗೆ ಯಾವಾಗ ರಜೆ.
ಇಂದು ಬಕಪಕ್ಷಿಯಂತೆ ಕಾಯುವರು
ಶಾಲೆ ಯಾವಾಗ ಎಂದು 
ಸುದ್ದಿ ಬಂತು
 ಶಾಲೆ ಆರಂಭವಾಗುವುದೆಂದು, ಕೇಳಿದ್ದೇ ತಡ ,ಚಿಣ್ಣರು
 ಸಂಚಾರಿವಾಣಿ ಯನ್ನು ಎತ್ತಿ ಹಾಕಿ 
ನಮಸ್ಕಾರ -ಎಂದಿಗೂ ನಿನ್ನ ಸಹವಾಸ ಬೇಡಪ್ಪ ಎನ್ನುತ್ತಾ 
ಖುಷಿ ಖುಷಿಯಿಂದ ಚಿಣ್ಣರೆಲ್ಲ ಒಟ್ಟುಗೂಡಿ
 ಹೆಗಲ ಮೇಲೆ ಚೀಲ ಹಾಕಿ ನಿಷ್ಕಲ್ಮಶ 
ನಗುವಿನೊಂದಿಗೆ ಹೊರಟಿದ್ದಾರೆ.

 ತರಗತಿಯಲ್ಲಿ ಪಾಠ ಕೇಳುವ ಆಸೆಯಿಂದ
 ಟೀಚರನ್ನು ನೋಡುವ ಉತ್ಸಾಹದಿಂದ
 ಗೆಳೆಯರೊಡನೆ ಆಡುವ ಆತುರದಿಂದ 
ನಗುತ್ತಾ ನಗುತ್ತಾ ಹೇಳುತ್ತಾರೆ ,ಅಯ್ಯೋ ದೇವರೇ ,ಎಂದೆಂದಿಗೂ 
ಈ ಮಾರಿ ಕೊರೋನಾ ಬಾರದಿರಲಿ .
ಸದಾಕಾಲ ನಮ್ಮ ನಡೆ ಶಾಲೆ ಕಡೆಗೆ ಇರಲಿ .   

– ಉಮಾ ಮಾಧವಿ
 ನಿವೃತ್ತ ಶಿಕ್ಷಕಿ, ಕೊಳಲಗಿರಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು