8:13 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

05/02/2022, 11:22

ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ  ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು.


ಕಾರಣಗಳು ಏನು?

ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗಿ ಬರುವ ತೊಂದರೆಯಾಗಿದೆ. ಈ ಸೂಕ್ಷ್ಮಣು ಜೀವಿಗಳು ಮೂತ್ರ ನಳಿಕೆಯ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕು ತಗಲುತ್ತದೆ.

ಮಧುಮೇಹ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಸೋಂಕು ಸುಲಭವಾಗಿ ತಗಲುತ್ತದೆ. ಕಿಡ್ನಿ ಸ್ಟೋನ್ 

ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೆಟ್ ಗ್ರಂಥಿಯ ಸಮಸ್ಯೆಯಿಂದಾಗಿ ಉರಿಮೂತ್ರ ಉಂಟಾಗುತ್ತದೆ.

ಲಕ್ಷಣಗಳು ಏನು?

*ಸೊಂಟನೋವು

*ಮೇಲಿಂದ ಮೇಲೆ ಮೂತ್ರ ವಿಸರ್ಜನೆ

*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು *ಉರಿಮೂತ್ರ

*ಮೂತ್ರದ ಬಣ್ಣ ಹಾಗೂ ವಾಸನೆಯಲ್ಲಿ ವ್ಯತ್ಯಾಸ *ಕಿಬ್ಬೊಟ್ಟೆ ನೋವು

*ಚಳಿ, ಜ್ವರ, ವಾಂತಿ

ಪತ್ತೆ ಹಚ್ಚುವ ವಿಧಾನಗಳು ಏನು?

ಯೂರಿನ್ ಅನಾಲಿಸಿಸ್ : ಇದರ ಮೂಲಕ ಸೊಂಕಿನ ತೀವ್ರತೆಯನ್ನು ಪತ್ತೆಹಚ್ಚಬಹುದು.

ಯೂರಿನ್ ಕಲ್ಚರ್ : ಇದರಿಂದ ಯಾವ ಸೂಕ್ಷ್ಮಣು ಜೀವಿಯಿಂದ ತೊಂದರೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು.

ಅಲ್ಟ್ರಾಸೌಂಡ್ : ಒಂದುವೇಳೆ  ಚಿಕಿತ್ಸೆ ನಂತರವೂ ಗುಣಮುಖವಾಗದೆ ಇದ್ದಲ್ಲಿ, ಇದರ ಮೂಲಕ ಮೂತ್ರ ನಾಳ ಅಥವಾ ಕೋಶದಲ್ಲಿಇರುವ ತೊಂದರೆಯನ್ನು ಪತ್ತೆ ಹಚ್ಚಬಹುದು.

ಸಿಸ್ಟೋಸ್ಕೋಪಿ: ಇದರ ಮೂಲಕ ಮೂತ್ರಕೋಶದ ಒಳಭಾಗವನ್ನು ವೀಕ್ಷಿಸಿ ಸೂಕ್ತ ಕಾರಣವನ್ನು ತಿಳಿದುಕೊಳ್ಳಬಹುದು.


ತಡೆಗಟ್ಟುವ ಕ್ರಮ ಹೇಗೆ?

*ಹೆಚ್ಚಿನ ಪ್ರಮಾಣದಲ್ಲಿ  ನೀರನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಬೆಳೆಯದಂತೆ ತಡೆಯಬಹುದು.

*ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

*ಮೂತ್ರವನ್ನು ತಡೆಹಿಡಿಯದೇ ಇರುವುದು

*ಮಧುಮೇಹ ನಿಯಂತ್ರಣ

* ಮಲಬದ್ಧತೆ ಆಗದಂತೆ ಎಚ್ಚರವಹಿಸುವುದು

*ವಿಟಮಿನ್ C ಜಾಸ್ತಿ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಮೂತ್ರದ ಸೋಂಕು ಬಾರದಂತೆ ತಡೆಗಟ್ಟಬಹುದು.

*ಮೂತ್ರಜನಕಾಂಗದ ಸೋಂಕು ಉಂಟಾದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸೋಂಕು ತೀವ್ರತೆಯನ್ನು ನಿಯಂತ್ರಿಸಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ

ಇತ್ತೀಚಿನ ಸುದ್ದಿ

ಜಾಹೀರಾತು