11:46 AM Thursday18 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಮುಖಂಡರೊಬ್ಬರ ದರ್ಬಾರ್: ನಿಯಮ ಮೀರಿ ಕಾರಿನ ವಿನ್ಯಾಸ ಮಾರ್ಪಾಡು !!: ಅಧಿಕಾರಿಗಳು ಕ್ರಮ ಕೈಗೊಳ್ಳುವರೇ? ಇಲ್ಲ ಸೆಲ್ಯೂಟ್ ಹೊಡೆಯುವರೇ?

03/06/2022, 09:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

ಬಿಜೆಪಿ ಮುಖಂಡರೊಬ್ಬರು ತನಗೆ ಮನಸ್ಸಿಗೆ ಬಂದಂತೆ ಕಾರಿನ ಮೂಲ ಬಣ್ಣ ಸೇರಿದಂತೆ ಇತರ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಓಡಾಡುವ ಮೂಲಕ ಅಂಧ ದರ್ಬಾರ್ ಪ್ರದರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ .

ಇವತ ಹೆಸರು ಎಚ್ .ಸಿ .ತಿಮ್ಮೇಗೌಡ .ಊರು : ಬೆಂಗಳೂರಿನ ಬ್ಯಾಟರಾಯನಪುರ .

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ . ಜತೆಗೆ ಕೇಸರಿ ಫೌಂಡೇಷನ್ ನ ಸಂಸ್ಥಾಪಕ !!

ಕಾರಿಗೆ ಕಣ್ಣಿಗೆ ರಾಚುವಂಥ ಕೇಸರಿ ಬಣ್ಣ. ಹಿಂಬದಿ ಗಾಜಿನಲ್ಲಿ ಇವರ ಭಾವಚಿತ್ರದ ಜತೆಗೆ ಹುದ್ದೆಗಳ ಹೆಸರು .!!

(ಗಾಜುಗಳು ಮುಕ್ತವಾಗಿರಬೇಕು ಎಂಬ ನಿಯಮ ಇದೆ )ಬದಿಯ ಗಾಜುಗಳಿಗೂ ಬಣ್ಣ ಲೇಪನ .

ಬದಿಯ  ಭಾಗದಲ್ಲಿಯೂ ಈತನ ಭಾವಚಿತ್ರ ಜತೆಗೆ ಸಂಪರ್ಕ ಸಂಖ್ಯೆ .
ಹೀಗೆ ಅವಾಂತರಗಳ ಮೇಲೆ ಅವಾಂತರ.ಸಣ್ಣಪುಟ್ಟವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವ ಪೋಲಿಸರು , ಸಾರಿಗೆ ಇಲಾಖೆ ಅಧಿಕಾರಿಗಳು  ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿ ಯಾಗಿದ್ದು  5 ಬಸ್ಸುಗಳಲ್ಲಿ ಜನರನ್ನು ಶೃಂಗೇರಿ – ಹೊರನಾಡು ಇನ್ನಿತರ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆತಂದಿರುವುದು ವಿಶೇಷ .


ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಕ್ರಮ ಕೈಗೊಳ್ಳುವರೇ ಅಥವಾ ಸೆಲ್ಯೂಟ್ ಹೊಡೆದು ಹಾಗೆ ಕಳಿಸುವರೇ  ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು