1:46 AM Sunday11 - May 2025
ಬ್ರೇಕಿಂಗ್ ನ್ಯೂಸ್
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ…

ಇತ್ತೀಚಿನ ಸುದ್ದಿ

ಮುಖಂಡರೊಬ್ಬರ ದರ್ಬಾರ್: ನಿಯಮ ಮೀರಿ ಕಾರಿನ ವಿನ್ಯಾಸ ಮಾರ್ಪಾಡು !!: ಅಧಿಕಾರಿಗಳು ಕ್ರಮ ಕೈಗೊಳ್ಳುವರೇ? ಇಲ್ಲ ಸೆಲ್ಯೂಟ್ ಹೊಡೆಯುವರೇ?

03/06/2022, 09:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

ಬಿಜೆಪಿ ಮುಖಂಡರೊಬ್ಬರು ತನಗೆ ಮನಸ್ಸಿಗೆ ಬಂದಂತೆ ಕಾರಿನ ಮೂಲ ಬಣ್ಣ ಸೇರಿದಂತೆ ಇತರ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಓಡಾಡುವ ಮೂಲಕ ಅಂಧ ದರ್ಬಾರ್ ಪ್ರದರ್ಶಿಸುತ್ತಿರುವುದು ಬೆಳಕಿಗೆ ಬಂದಿದೆ .

ಇವತ ಹೆಸರು ಎಚ್ .ಸಿ .ತಿಮ್ಮೇಗೌಡ .ಊರು : ಬೆಂಗಳೂರಿನ ಬ್ಯಾಟರಾಯನಪುರ .

ಕರ್ನಾಟಕ ವಿದ್ಯುತ್ ಕಾರ್ಖಾನೆಯ ಅಧ್ಯಕ್ಷ . ಜತೆಗೆ ಕೇಸರಿ ಫೌಂಡೇಷನ್ ನ ಸಂಸ್ಥಾಪಕ !!

ಕಾರಿಗೆ ಕಣ್ಣಿಗೆ ರಾಚುವಂಥ ಕೇಸರಿ ಬಣ್ಣ. ಹಿಂಬದಿ ಗಾಜಿನಲ್ಲಿ ಇವರ ಭಾವಚಿತ್ರದ ಜತೆಗೆ ಹುದ್ದೆಗಳ ಹೆಸರು .!!

(ಗಾಜುಗಳು ಮುಕ್ತವಾಗಿರಬೇಕು ಎಂಬ ನಿಯಮ ಇದೆ )ಬದಿಯ ಗಾಜುಗಳಿಗೂ ಬಣ್ಣ ಲೇಪನ .

ಬದಿಯ  ಭಾಗದಲ್ಲಿಯೂ ಈತನ ಭಾವಚಿತ್ರ ಜತೆಗೆ ಸಂಪರ್ಕ ಸಂಖ್ಯೆ .
ಹೀಗೆ ಅವಾಂತರಗಳ ಮೇಲೆ ಅವಾಂತರ.ಸಣ್ಣಪುಟ್ಟವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವ ಪೋಲಿಸರು , ಸಾರಿಗೆ ಇಲಾಖೆ ಅಧಿಕಾರಿಗಳು  ಈ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಮುಂದೆ ವಿಧಾನಸಭೆಗೆ ಸ್ಪರ್ಧಿಸುವ ಆಕಾಂಕ್ಷಿ ಯಾಗಿದ್ದು  5 ಬಸ್ಸುಗಳಲ್ಲಿ ಜನರನ್ನು ಶೃಂಗೇರಿ – ಹೊರನಾಡು ಇನ್ನಿತರ ತೀರ್ಥಕ್ಷೇತ್ರಗಳಿಗೆ ಪ್ರವಾಸಕ್ಕೆ ಕರೆತಂದಿರುವುದು ವಿಶೇಷ .


ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಕ್ರಮ ಕೈಗೊಳ್ಳುವರೇ ಅಥವಾ ಸೆಲ್ಯೂಟ್ ಹೊಡೆದು ಹಾಗೆ ಕಳಿಸುವರೇ  ಕಾದು ನೋಡಬೇಕಿದೆ .

ಇತ್ತೀಚಿನ ಸುದ್ದಿ

ಜಾಹೀರಾತು