7:56 PM Sunday28 - June 2026
ಬ್ರೇಕಿಂಗ್ ನ್ಯೂಸ್
ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು…

ಇತ್ತೀಚಿನ ಸುದ್ದಿ

ಮೂಡಿಗೆರೆ: ಬಿನ್ನಡಿ ದೇವಸ್ಥಾನದ ಜಾಗ ಒತ್ತುವರಿ ತೆರವುಗೊಳಿಸಲು ತಾಲೂಕು ದಂಡಾಧಿಕಾರಿಗೆ ಗ್ರಾಮಸ್ಥರ ಮನವಿ

18/09/2025, 22:13

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnata@gmail.com

ಮೂಡಿಗೆರೆ ತಾಲ್ಲೂಕು ಬಿನ್ನಡಿ ಗ್ರಾಮದಲ್ಲಿ 12ನೇ ಶತಮಾನದಲ್ಲಿ ಕಟ್ಟಿದ ಐತಿಹಾಸಿಕ ಕನ್ನೆರಮ್ಮ ದೇವಸ್ಥಾನವಿದ್ದು ಆ ದೇವಸ್ಥಾನದ ಜೊತೆಗೆ ಬ್ರಹ್ಮಲಿಂಗೇಶ್ವರ, ಬಾಸಮ್ಮ ಹಾಗೂ ದೇವಿರಮ್ಮ ದೇವಸ್ಥಾನಗಳಿಗೆ ಊರಿನ ಹಿರಿಯರು ಮೀಸಲಿಟ್ಟಿದ್ದ ಸುಮಾರು 11 ಎಕರೆ ಜಾಗದಲ್ಲಿ ಮುಕ್ಕಾಲು ಪಾಲು ಒತ್ತುವರಿ ಆಗಿದ್ದು ದೇವಸ್ಥಾನದ ಆಚಾರ ವಿಚಾರಗಳಿಗೆ ಜಾಗವಿಲ್ಲದಂತ ಸ್ಥಿತಿ ನಿರ್ಮಾಣವಾಗಿರುವುದರಿಂದ ಗ್ರಾಮಸ್ಥರು ಹಿಂದೆ ಜಿಲ್ಲಾಧಿಕಾರಿಗಳನ್ನು ಮನವಿ ಮಾಡಿದ್ದರು. ಈಗ ತಾಲ್ಲೂಕು ದಂಡಾಧಿಕಾರಿಗಳಿಗೆ ಭೇಟಿ ಮಾಡಿ ಸರ್ವೇ ಮಾಡಿ ಒತ್ತುವರಿ ತೆರವು ಮಾಡಿಸಿ ದೇವಸ್ಥಾನದ ಜಾಗವನ್ನು ಅಧಿಕೃತ ಮಾಡಿ ಕೊಡುವಂತೆ ಕೋರಲಾಯಿತು.
ಗ್ರಾಮಸ್ಥರೊಂದಿಗೆ ಬಿಜೆಪಿ ನಾಯಕರಾದ ದೀಪಕ್ ದೊಡ್ಡಯ್ಯ, ಗ್ರಾಮಸ್ಥರಾದ ವಿಜೇಂದ್ರ,ರಮೇಶ್,ಬಿ.ಟಿ. ದೇವರಾಜ್, ರವಿ ಕುಮಾರ್, ವೀರೇಂದ್ರ, ಧರ್ಮರಾಜ್, ಸುನೀಲ್, ವೆಂಕಟೇಶ್, ಉಪೇಂದ್ರ,ಲಕ್ಷ್ಮಣ,ವಿನುತ್,ಮೋಹನ್,ಅಭಿಜಿತ್,ಪೂರ್ಣೇಶ್,ಸಂಪತ್,ಅರುಣ್ ಬಿನ್ನಡಿ. ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು