8:12 PM Saturday21 - September 2024
ಬ್ರೇಕಿಂಗ್ ನ್ಯೂಸ್
ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ

ಇತ್ತೀಚಿನ ಸುದ್ದಿ

ಮೊರಬ ಶ್ರೀವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಹೆಜ್ಜೇನು ಗೂಡು: ಶುಭ ಅಶುಭದ ಲೆಕ್ಕಾಚಾರ; ಹೂ ಫಲ ಕೇಳಿದ ಗ್ರಾಮದ ದೈವಸ್ಥರು!!

08/09/2021, 09:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದಲ್ಲಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಟರಾಸಿನ್ನಲ್ಲಿ ಹೆಜ್ಜೇನು ಹುಳುಗಳು ಗೂಡು ಕಟ್ಟಿವೆ. ಬೃಹದಾಕಾರದಲ್ಲಿ ನಿರ್ಮಿಸಲಾಗಿರುವ ಹೆಜ್ಜೇನು ಗೂಡು ದೇವರ ದರ್ಶನಕ್ಕೆ ಬರುವ ಭಕ್ತರನ್ನ ಸ್ವಾಗತಿಸುತ್ತಿವೆ. ಅಸಂಖ್ಯಾತ ಹೆಜ್ಜೇನು ಹುಳುಗಳು ಬೃಹತ್ ಗೂಡು(ಹುಟ್ಟು)ಕಟ್ಟಿದ್ದು ಶುಭವೋ ಅಶುಭವೋ ಭಕ್ತರಿಗೆ ತೊಂದರೆ ಕೊಡುತ್ತವೆಯೋ..!?ಎಂಬ ಆತಂಕ ಗ್ರಾಮದ ದೈವಸ್ಥರಲ್ಲಿ ಮನೆ ಮಾಡಿತ್ತು.ಅದಕ್ಕಾಗಿ ಪ್ರಾರಂಭದಲ್ಲಿಯೇ ಈ ಬಗ್ಗೆ ಗ್ರಾಮದ ದೈವಸ್ಥರು, ಶ್ರೀ ವೀರಭದ್ರ ದೇವರಲ್ಲಿ ಶುಭ ಅಶುಭ ಕುರಿತು ಮತ್ತು ಜೇನು ಹುಟ್ಟು ತೆರವು ಗೊಳಿಸಲು ಅನುಮತಿ ಕೋರಿ ಹೂ ಫಲ ಕೇಳಿದ್ದಾರೆ. ಶ್ರೀವೀರಭದ್ರೇಶ್ವರ ಸ್ವಾಮಿ ಎಡಭಾಗದ ಹೂ ಕೊಡೋ ಮೂಲಕ, ಭಕ್ತರಿಗೆ ಅಭಯ ನೀಡಿದ್ದು ಹಾಗೂ ಜೇನು ಹುಳುಗಳಿಗೂ ಆಶ್ರಯ ಹಸ್ತ ನೀಡಿದ್ದಾರೆ.

ಈ ಹೆಜ್ಜೇನು ಕಳೆದ ಆರು ತಿಂಗಳಿಂದ ದೇವಸ್ಥಾನದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಬೃಹತ್ ಗಾತ್ರದ ಹೆಜ್ಜೇನು ಹುಳುಗಳು ಹಾರಾಡುತ್ತಿರುತ್ತವೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನ ನಯವಾಗಿ ಸ್ಪರ್ಶಿಸುವ ನಿರುಪದ್ರವಿಗಳಾಗಿದ್ದು, ಹೆಜ್ಜೇನು ಹುಳುಗಳು ಭಕ್ತರನ್ನು ಸ್ವಾಗತಿಸಿ ಕೊಳ್ಳುತ್ತಿವೆ ಎಂಬಂತೆ  ಸನ್ನಿವೇಶ ಸೃಷ್ಠಿಯಾಗಿದೆ. ಕಳೆದ ಆರು ತಿಂಗಳಿಂದ ನಿರ್ಮಾಣವಾಗಿರುವ ಹೆಜ್ಜೇನಿನ ಬೃಹತ್ ಗೂಡು ಬಲು ಆಕರ್ಷಕವಾಗಿದ್ದು, ಹುಳುಗಳಿಂದ ಯಾರಿಗೂ ಯಾವೂದೇ ಕಾರಣಕ್ಕೂ ತೊಂದರೆ ಆಗಿಲ್ಲ. ಹೆಜ್ಜೆನು ಗೂಡು ನಿರ್ಮಾಣದಿಂದ ಶ್ರೀವೀರಭದ್ರೇಶ್ವರ ಭಕ್ತರ ಪಾಲಿಗೂ ಶುಭ ಶಕುನವಾಗಿ ಪರಿಣಮಿಸಿದೆ ಯಂತೆ, ದೇವಸ್ಥಾನದಲ್ಲಿ ಹೆಜ್ಜೇನು ವಾಸ ಮಾಡಿರುವುದರಿಂದಾಗಿ ಸಕಲರಿಗೂ ಹಿತವಾಗಲಿದೆ ಎಂದು ಆಸ್ತಿಕರು ಆಶಾಮನೋಭಾವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು