4:54 AM Thursday29 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಮೊಂತಿ ಹಬ್ಬ: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ನವದಿನಗಳ ನೊವೆನಾಗಳಿಗೆ ಚಾಲನೆ

31/08/2025, 14:54

ಮಂಗಳೂರು(reporterkarnataka.com): ಮೊಂತಿಹಬ್ಬ(ಕನ್ಯಾ ಮರಿಯಮ್ಮ ಹಬ್ಬ)ದ ಅಂಗವಾಗಿ ನವದಿನಗಳ ಪ್ರಾರ್ಥನಾ ವಿಧಿಗಳಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಎಲ್ಲ ಚರ್ಚ್ ಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು.


ನವ ದಿನಗಳ ಪ್ರಾರ್ಥನಾವಿಧಿ ಮುಗಿದ ಬಳಿಕ ಸೆ.8ರಂದು ಮೊಂತಿ ಹಬ್ಬ( ಕುರಲ್ ಪರ್ಬ)ವನ್ನು ಕ್ರೈಸ್ತ ಸಮುದಾಯದವರು ಆಚರಣೆ ಮಾಡಲಿದ್ದಾರೆ. ಈ ನವ ದಿನಗಳ ನೊವೆನಾ ಸಮಯದಲ್ಲಿ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮ ರಿಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಪ್ರಕೃತಿಯ ಆರಾಧನೆಗೆ ಸಾಕ್ಷಿಯಾದರು.
ನಗರದ ಉರ್ವ ಚರ್ಚಿನಲ್ಲಿ ಜಪಮಾಲೆಯ ಬಳಿಕ ನಡೆದ ಕೃತಜ್ಞತಾ ಪೂಜೆಯಲ್ಲಿ ಚರ್ಚಿನ ಧರ್ಮಗುರು ಫಾ. ಮೈಕಲ್ ಲೋಬೋ ಪ್ರವಚನ ನೀಡಿ, ದೇವರು ಭಕ್ತರಲ್ಲಿ ವಿಧೇಯತೆಯನ್ನು ಬಯಸುತ್ತಾನೆ. ಹೊರಗಿನ ಆಡಂಬರಕ್ಕಂತ ಹೆಚ್ಚಾಗಿ ಹೃದಯದಲ್ಲಿರುವ ಭಕ್ತಿಯನ್ನು ಬಯಸುತ್ತಾನೆ. ಮಹಾತ್ಮಗಾಂಧೀಜಿ, ಮದರ್ ತೆರೇಸಾ, ಸಂತ ಫ್ರಾನ್ಸಿಸ್ ಅಸೀಸಿಯಂತಹ ಮಹಾನ್ ಪುರುಷರು ಇಂದಿಗೂ ಸಮಾಜಕ್ಕೆ ಮಾದರಿಯಾಗಿರುವುದು ಅವರಲ್ಲಿ ತುಂಬಿರುವ ವಿಧೇಯತೆಯಿಂದ ಭಕ್ತರು ಕೂಡ ಇತರರನ್ನು ಗೌರವಿಸುವ ವಿಧೇಯತೆ ತೋರುವ ಕರ‍್ಯದಿಂದ ದೇವರು ಸಂತೃಪ್ತನಾಗುತ್ತಾನೆ ಎಂದರು. ಈ ಸಂದರ್ಭ ಫಾ. ಮೌರಿಸ್ ಕೃತಜ್ಞತಾ ಪೂಜೆಯಲ್ಲಿ ಉಪಸ್ಥಿತರಿದ್ದರು. ಈ ಬಳಿಕ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ನೊವೆನಾ ಪ್ರಾರ್ಥನಾವಿಧಿಯನ್ನು ನಡೆಸಿಕೊಟ್ಟರು. ಕನ್ಯಾ ಮರಿಯಮ್ಮಳಿಗೆ ಪುಷ್ಪ ಅರ್ಪಣೆ ಮಾಡಿದ ಮಕ್ಕಳಿಗೆ ಹಾಗೂ ಹಿರಿಯರಿಗೆ ಸಿಹಿತಿಂಡಿ ನೀಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು