5:52 AM Tuesday25 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

‘ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್’ ವಿಷಯದ ಕುರಿತು ಒಂದು ದಿನದ ಅಧ್ಯಯನ ಪ್ರವಾಸ 

11/03/2022, 18:59

ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದಿಂದ “ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ ” ವಿಷಯದ ಕುರಿತಾದ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟಿಯ ಹಾಳೆ ತಟ್ಟೆ ರಫ್ತ್ತು ಉದ್ಯಮ ವಿಟ್ಲ ಕೊಡಪದವು ಸಮೀಪದ ರಾಜರಾಮ್ ಒಡೆತನದ ಇಕೋ ಬ್ಳಿಸ್ ಉದ್ಯಮಕ್ಕೆ ಭೇಟಿ ನೀಡಿ ಹಾಳೆ  ತಟ್ಟೆ ಉದ್ಯಮ, ಮಾರುಕಟ್ಟೆ ಸಂವರ್ಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳೆ  ತಟ್ಟೆ ಬೇಡಿಕೆ,ಪೂರೈಕೆ  ಮತ್ತು ಬೆಲೆಗಳ  ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಸ್ವದ್ಯೋಗಿಳಿಗೆ  ತಾವೇ ನಿರ್ಮಿಸಿ ವಿನ್ಯಾಸ ಗೊಳಿಸಿದ  ಯಂತ್ರೋಪಕರಣ ಮಾಹಿತಿ ಹಾಗೂ ಸಂಸ್ಥೆಯಲ್ಲಿನ  ಉದ್ಯೋಗಿಗಳಿಗೆ ಕೊಡಮಾಡುವ ಸೌಕರ್ಯ ಗಳ  ಬಗ್ಗೆ ಮಾಹಿತಿ ನೀಡಿದರು. ರಫ್ತ್ತುವಿನ ವಿವಿಧ ಹಂತಗಳ  ಬಗ್ಗೆ ವಿಸ್ತಾರವಾದ  ಮಾಹಿತಿಯನ್ನು ನೀಡಿದರು.ಕಲ್ಲಡ್ಕ ಸಮೀಪದ ಧೀರಜ್  ಹಾಗೂ ಅಜಿತ್ ಒಡೆತನದ ಫಾರ್ಚುನ್ ಪೆಟ್ ಜಾರ್ ಇಂಡಸ್ಟ್ರಿಗೆ ತೆರಳಿ  ವಿವಿಧ  ವಿನ್ಯಾಸದ ಶೀಷೆ ತಯಾರಿಕಾ ಮಾಹಿತಿಯನ್ನು  ಪಡೆಯಲಾಯಿತು. ನಾರಾಯಣ  ಸೋಮಯಾಜಿ ಎರಕಲ ಒಡೆತನದ ಐತಿಹಾಸಿಕ ಬ್ರಹತ್  ಹಂಚು, ಇಟ್ಟಿಗೆ ಮತ್ತು ಟೈಲ್ಸ್ ತಯಾರಿಕ ಘಟಕ ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಪ್ರೈವೆಟ್. ಲಿ. ಇಲ್ಲಿಗೆ ಭೇಟಿನೀಡಿ  ಸಂಸ್ಥೆಯ  ಇತಿಹಾಸ , ಪ್ರೋಸೆಸ್ಸಿಂಗ್, ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳು  ಅದರ ಮಾರುಕಟ್ಟೆ ವಿಚಾರದ  ಬಗ್ಗೆ ಮಾಹಿತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದು  ಕೊಂಡರು

 ಪ್ರಥಮ  ಬಿ. ಕಾಮ್ ಹಾಗೂ ಬಿ. ಬಿ. ಎ ಯ  ಒಟ್ಟು 123 ವಿದ್ಯಾರ್ಥಿ ಅಧ್ಯಯನ ಪ್ರವಾಸದಲ್ಲಿ  ಪಾಲ್ಗೊಂಡಿದ್ದು, ಸಂಸ್ಥೆಯ  ವಾಣಿಜ್ಯ  ಹಾಗೂ ಉದ್ಯಮಾಡಳಿತ ವಿಭಾಗದ ಉಪನ್ಯಾಸಕರಾದ ಶ್ರೀ ರಮಾನಾಥ್. ಎ, ಶಿವಪ್ರಸಾದ್. ಎಸ್ ಮತ್ತು ಕೃತಿಕಾ ಪಿ.ಎಸ್ ಮಾರ್ಗದರ್ಶನ  ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು