ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ತಪಸ್ಸು ಕಾಲದ ರಿಟ್ರೀಟ್
19/03/2026, 20:03
ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ತಪಸ್ಸು ಕಾಲದ ಮೂರು ದಿನಗಳ ರಿಟ್ರೀಟ್ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾ. ಪ್ರವೀಣ್ ಲಿಯೋ ಲಸ್ರಾದೊ ಅವರು ರಿಟ್ರೀಟ್ ನಡೆಸಿಕೊಟ್ಟರು.
ಅವರು ತಮ್ಮ ಪ್ರವಚನದಲ್ಲಿ ನಾವು ನಮ್ಮ ತಪ್ಪನ್ನು ಅಡಗಿಸಿಟ್ಟು ಇತರರ ತಪ್ಪನ್ನು ಎತ್ತಿ ತೋರಿಸಿದಲ್ಲಿ ದೇವರು ನಮ್ಮ ತಪ್ಪನ್ನು ಕ್ಷಮಿಸಲಾರ. ಮನುಷ್ಯನು ಇತರರಿಗೆ ಕ್ಷಮಿಸಿದಲ್ಲಿ ದೇವರು ನಮಗೆ ಕೂಡಾ ಕ್ಷಮೆ ನೀಡುತ್ತಾರೆ. ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬರುವುದು ಸಹಜ. ಆದರೆ ಕಷ್ಟಗಳು ಜೀವನದಲ್ಲಿ ಎದುರಾದಾಗ ನಾವು ದೇವರನ್ನು ದೂರುವುದು ಸರಿಯಲ್ಲ. ದೇವರು ನಮ್ಮೊಂದಿಗೆ ಖಂಡಿತ ಇದ್ದಾರೆ ಎಂಬುದಾಗಿ ಭರವಸೆ ಇರಿಸ ಬೇಕೆಂದರು.
ಈ ಸಂದರ್ಭದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪ್ರತಿ ದಿನದ ಬಲಿ ಪೂಜೆಯಲ್ಲಿ ಸಹ ಭಾಗಿತ್ವ ವಹಿಸಿದ್ದರು.
ಚರ್ಚ್ ನ ಡಿಯಾಕೋನ್ ರೋವಿನ್ ಲೋಪೆಜ್, ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ರೋಷನ್ ಮೊಂತೇರೊ, ಸರ್ವ ಆಯೋಗಗಳ ಸಂಯೋಜಕ ವಿಲಿಯಂ ಲೋಬೊ, ಆಧ್ಯಾತ್ಮಿಕ ಸಮಿತಿಯ ಸಂಚಾಲಕ ಆಸ್ಟಿನ್ ಮೊಂತೇರೊ ಉಪಸ್ಥಿತರಿದ್ದರು.












