9:40 PM Friday20 - March 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್ ಹಬ್ಬದ ಸ್ಪೆಷಲ್: ಕಾರವಾರ- ಉಡುಪಿ- ಮಂಗಳೂರು- ಬೆಂಗಳೂರಿಗೆ ವಿಶೇಷ ರೈಲು; ವೇಳಾಪಟ್ಟಿ ರೆಡಿ Kodagu | ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ದುರ್ಮರಣ ಲಂಚದೊಂದಿಗೆ ಕಾರಿನಲ್ಲಿ ಪರಾರಿ: 15 ಕಿಮೀ ಬೆನ್ನತ್ತಿ ಸಹಾಯಕ ಔಷಧ ನಿಯಂತ್ರಕಿಯ ಬಂಧಿಸಿದ… ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ

ಇತ್ತೀಚಿನ ಸುದ್ದಿ

*ಮನೆ ಯಜಮಾನನ ಆಕಸ್ಮಿಕ ಸಾವಿನಿಂದ ಆಧಾರಸ್ತಂಭ ಕಳೆದುಕೊಂಡ ಈ ಬಡ ಕುಟುಂಬಕ್ಕೆ ಸಹಾಯ ಮಾಡುವಿರಾ?*

17/09/2022, 18:24

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ದೇರೆಬೈಲ್ ಕೊಂಚಾಡಿಯ ಬೋರುಗುಡ್ಡೆ ನಿವಾಸಿಯಾದ ತುಕರಾಮ(44) ಅವರು ಬ್ರೈನ್ ಎಮರೇಜ್ ನಿಂದ ಆಗಸ್ಟ್ 20ರಂದು ಮೃತಪಟ್ಟಿದ್ದಾರೆ.

ಬಿಪಿ ಕಾಯಿಲೆ ಬಿಟ್ಟರೆ ಬೇರೆ ಯಾವುದೇ ಕಾಯಿಲೆ ಅವರಿಗೆ ಇರಲಿಲ್ಲ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಅವರು ಆಗಸ್ಟ್ 18ರಂದು ರಾತ್ರಿ ಮಲಗುವ ವರೆಗೂ ಆರೋಗ್ಯವಾಗಿಯೇ ಇದ್ದರು. ಆದರೆ ಆಗಸ್ಟ್ 19ರಂದು ಬೆಳಗ್ಗೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗಿದ್ದರು. ತಕ್ಷಣ ಅವರನ್ನು ಕುಂಟಿಕಾನದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅಧಿಕ ರಕ್ತದೊತ್ತಡದಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗಿದೆಯೆಂದು ಹೇಳಿ ಐಸಿಯುಗೆ ಸೇರಿಸಿದರು. ಆದರೆ ಆಗಸ್ಟ್ 20ರಂದು ಬೆಳಗ್ಗೆ ತುಕರಾಮ ಅವರು ಮೃತಪಟ್ಟರು. ಎ.ಜೆ. ಆಸ್ಪತ್ರೆಯಲ್ಲಿ 72 ಸಾವಿರ ಬಿಲ್ ಆಗಿತ್ತು. ಇದಲ್ಲದೆ ಆರಂಭದಲ್ಲಿ ಅಡ್ಮಿಶನ್ ಫೀಸ್ 15 ಸಾವಿರ ಪಾವತಿಸಲಾಗಿತ್ತು. ತುಕರಾಮ ಅವರ ಬಡ ಕುಟುಂಬ ಸಾಲ ಮಾಡಿ ಆಸ್ಪತ್ರೆಗೆ ಬಿಲ್ ಪಾವತಿಸಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

ಮೃತ ತುಕರಾಮ ಅವರಿಗೆ ಪತ್ನಿ ಸುಜಾತಾ ಹಾಗೂ ಎಸ್ಸೆಸ್ಸೆಲ್ಸಿ ಮಗ ದಿಶಾನ್ ಇದ್ದಾರೆ. ಬಡ ಕುಟುಂಬಕ್ಕೆ ಸ್ವಂತ ಮನೆಯೂ ಇಲ್ಲ. ಕೂಡು ಕುಟುಂಬದ ವ್ಯವಸ್ಥೆಯಲ್ಲಿರುವ ಅವರಿಗೆ ಸ್ವಂತ ರೇಶನ್ ಕಾರ್ಡ್ ಕೂಡ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕ್ ನಲ್ಲಿ 90 ಸಾವಿರಕ್ಕೆ ಅಡವಿಟ್ಟ ಕರಿಮಣಿ, ಒಂದ ಸರ ಹಾಗೂ ಉಂಗುರ ಇದೆ. ಹಾಗೆ ಎಚ್ ಡಿಎಫ್ ಸಿಯಿಂದ ತೆಗೆದ 25 ಸಾವಿರ ರೂ. ಗುಂಪು ಸಾಲ ಇದೆ. ಕೆಲವು ಸಣ್ಣ ಪುಟ್ಟ ಕೈಸಾಲ ಕೂಡ ಇದೆ. ಕುಟುಂಬದಲ್ಲಿ ಯಾವುದೇ ಉಳಿತಾಯ, ವಿಮೆ ಇಲ್ಲ.

ಸುಜಾತಾ ಅವರಿಗೆ ಅಪ್ಪ, ಅಣ್ಣ-ತಮ್ಮಂದಿರು ಇಲ್ಲ. ಅನಾರೋಗ್ಯದ ತಾಯಿ ಇದ್ದಾರೆ. ಜೀವನ ಸಾಗಿಸುವುದು ಅವರಿಗೆ ಕಷ್ಟಸಾಧ್ಯವಾಗಿದೆ. ಅವರ ಮಗನ ಮಗನ ಮುಂದಿನ ಶಿಕ್ಷಣ ಹಾಗೂ ಬದುಕಿಗೆ ಸಹಾಯಬೇಕಾಗಿದೆ. ಉದಾರಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬೇಕಾಗಿ ವಿನಂತಿ

SUJATHA
SB A/c No: 5062500100959801
IFSC code: KARB0000506
MICR CODE: 575052018
KARNATAKA BANK
KADRI BRANCH, MANGALURU

ಇತ್ತೀಚಿನ ಸುದ್ದಿ

ಜಾಹೀರಾತು