10:35 PM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕುವೆಂಪು ಆಶಯಕ್ಕೆ ಕೊಳ್ಳಿ: ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ; ಸಿನಿಮಾ ತಾರೆಯರಿಗಾಗಿ ರಂಗು ರಂಗು

25/01/2025, 14:24

*ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ*

*ಸಿನಿಮಾ ತಾರೆಯರಿಗಾಗಿ ರಂಗು ರಂಗು ಎಲ್ಲಿಗೆ ಬಂತು ಕುವೆಂಪು ಆಶಯ ; ಬಡವರ ಮದುವೆಗೆ ಡೇಟ್ ಲಭ್ಯ ಇರಲ್ಲ*

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಅದ್ದೂರಿ ಮಂತ್ರ ಮಾಂಗಲ್ಯವೊಂದು ಜರುಗಿದೆ. ಕುವೆಂಪು ಸದಾಶಯದ ಮಂತ್ರ ಮಾಂಗಲ್ಯ ಎಲ್ಲಾ ರೀತಿಯ ಸರಳ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭವೊಂದು ಹೈಫೈ ರೂಪದಲ್ಲಿ ನಡೆದಿದೆ.
ಹೇಮಾಂಗಣದ ಮುಂಭಾಗದಲ್ಲಿ ತಳಿರುತೋರಣಗಳಿಂದ ಸಿಂಗರಿಸಿ, ಫಲ, ಪುಷ್ಪಗಳನ್ನು ಬಳಸಿಕೊಂಡು ವಿಭಿನ್ನವಾಗಿ ಮಂತ್ರ ಮಾಂಗಲ್ಯ ವಿವಾಹ ಮಾಡಲಾಗಿದೆ. ಕುವೆಂಪು ಸರಳ ನಿಯಮಗಳಿಂದ ತಮ್ಮ ಪುತ್ರ ತೇಜಸ್ವಿ ವಿವಾಹವನ್ನು ಮಾಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಬಿಡುವಿದ್ದ ಸಂದರ್ಭ ವಧುವರರ ಸತ್ಕಾರ ಸ್ವೀಕರಿಸಿ ಎನ್ನುವ ಒಳಾರ್ಥದಲ್ಲಿ ವಿವಾಹವನ್ನು ಸರಳೀಕರಣಗೊಳಿಸಿದ್ದರು. ಆದರೆ ಅದೀಗ ಮುಂದುವರೆದು ಶ್ರೀಮಂತ ಕುಟುಂಬಗಳ ಸ್ವತ್ತಾಗಿದ್ದು ಸರಳತೆಯ ವಿವಾಹವನ್ನು ವೈಭವೀಕರಿಸಿ ಜಗತ್ತಿಗೆ ಕುವೆಂಪು ಸಂದೇಶ ಸಾರುವ ಹಂತಕ್ಕೆ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಳ್ಳುತ್ತಿದೆ‌.


ಹೇಮಾಂಗಣದ ಮುಂಭಾಗದಲ್ಲಿ ಬಾಳೆಯ ಗಿಡಗಳನ್ನು ಬಳಸಿಕೊಂಡು ಸಿಗರಿಸಿದರೆ. ವೇದಿಕೆಯಾಗಿ ಕಮಲದ ಹೂವುಗಳನ್ನು ಬಳಕೆ ಮಾಡಿಕೊಂಡು ವಧು-ವರರ ಕೈಯಿಂದ ಸರಳತೆಯ ಪಠ್ಯವನ್ನು ಚಾಚು ತಪ್ಪದೆ ಹೇಳಿಸಿದರೆ. ಮುಂಭಾಗದ ಮರಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ಕುಪ್ಪಳಿಯ ಶಾಂತ ನಿಸರ್ಗದ ಪರಿಚಯ ಮಾಡಿಸಿಕೊಟ್ಟರು. ಊಟಕ್ಕೆ ರೌಂಡ್ ಟೇಬಲ್ ಅಳವಡಿಸಿ ಅದಕ್ಕೆ ಶ್ವೇತ ವಸ್ತ್ರಗಳನ್ನು ಅಲಂಕರಿಸಿ ಯಾರು ಊಟವನ್ನು ಕಿಂಚಿತ್ತೂ ಹಾಳು ಮಾಡದಂತೆ ಜಾಗ್ರತೆವಹಿಸಿದರು. ಊಟಕ್ಕೂ ಮುನ್ನ ಆಯಕಟ್ಟಿನ ಜಾಗದಲ್ಲಿ ಬೆಂಗಳೂರಿನಿಂದ ಬಂದ ಅತಿಥಿಗಳಿಗೆ ಸುರಪಾನದ ಹಿತ ನೀಡಿದರು. ಮೂರ್ನಾಲ್ಕು ರೆಸಾರ್ಟ್ ಗಳಿಗೆ ಈ ಮದುವೆ ದೊಡ್ಡ ಲಾಭ ತಂದುಕೊಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು