8:52 AM Sunday20 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಕುತುಬ್‌ ಮಿನಾರ್‌: ಪುರಾತತ್ವ ಇಲಾಖೆ ಮಾಜಿ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದೇನು..?

19/05/2022, 12:51

ಹೊಸದಿಲ್ಲಿ(reporterkarnataka.com): ಕುತುಬ್ ಮಿನಾರ್ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.ದೇಶದೆಲ್ಲೆಡೆ ಸ್ಮಾರಕಗಳ ಬಗ್ಗೆ ವಿವಾದಗಳು ಭುಗಿಲೇಳುತ್ತಿರುವ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕರು ಈ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಅದೇನೆಂದರೆ ಕುತುಬ್‌ ಮಿನಾರ್‌ ನಿರ್ಮಿಸಿದ್ದು ಕುತುಬ್‌ ಉದ್‌ ದೀನ್‌ ಐಬಕ್‌ ಅಲ್ಲ ಎಂದು ಹೇಳಿದ್ದಾರೆ.

5ನೇ ಶತಮಾನದಲ್ಲಿ ದೆಹಲಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ  ವಿಕ್ರಮಾದಿತ್ಯ ಎಂಬ ರಾಜನು ಸೂರ್ಯನ ಪರಿವೀಕ್ಷಣೆಗೆ ಅದನ್ನು ನಿರ್ಮಾಣ ಮಾಡಿದ್ದಾನೆ. ಇದು ಕುತುಬ್ ಮಿನಾರ್ ಅಲ್ಲ ಸೂರ್ಯ ಗೋಪುರ (ವೀಕ್ಷಣಾ ಗೋಪುರ) ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆ ಅನೇಕ ಪುರಾವೆಗಳಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದಾರೆ. ಎಎಸ್ ಐ ಪರವಾಗಿ ಹಲವು ಬಾರಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಕುತುಬ್‌ ಗೋಪುರವು 25 ಇಂಚು ಓರೆಯಾಗಿದೆ. ಸೂರ್ಯನನ್ನು ವೀಕ್ಷಿಸಲು ಅನುಕೂಲವಾಗಲೆಂದು ಈ ರಚನೆಯಿದೆ. ಜೂನ್‌ 21ರಂದು ಅಯನ ಸಂಕ್ರಾಂತಿಯ ನಡುವೆ ಆ ಪ್ರದೇಶದ ಮೇಲೆ ಕನಿಷ್ಟ ಅರ್ಧಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಮತ್ತು ಪುರಾತತ್ತ್ವ ಶಾಸ್ತ್ರದ ಸತ್ಯ. ಕುತುಬ್‌ ಮಿನಾರ್‌ ಗೂ ಅದರ ಪಕ್ಕದಲ್ಲಿರುವ ಮಸೀದಿಗೂ ಯಾವುದೇ ಸಂಬಂಧವಿಲ್ಲ. ಕುತುಬ್‌ ಮಿನಾರ್‌ ಎಂದು ಕರೆಯಲ್ಪಡುವ ಕಟ್ಟಡವು ಸ್ವತಂತ್ರ ರಚನೆಯಾಗಿದೆ. ಕುತುಬ್ ಮಿನಾರ್‌ನ ಬಾಗಿಲು ಕೂಡ ಉತ್ತರಕ್ಕೆ ಮುಖ ಮಾಡಿದೆ. ಇದು ರಾತ್ರಿ ಸಮಯದಲ್ಲಿ ಧ್ರುವ ನಕ್ಷತ್ರವನ್ನು ನೋಡುವುದನ್ನು ಸೂಚಿಸುತ್ತದೆ.


ಈ ಮಾತುಗಳನ್ನಾಡಿರುವ ಶರ್ಮಾ ಅವರು ಹಲವು ಬಾರಿ ಎಎಸ್ ಐ ಪರವಾಗಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು