10:43 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಕುಲಪತಿ ಹುದ್ದೆಗೆ ಲಂಚ: ಪ್ರಾಧ್ಯಾಪಕ ಮೇಲಿನ ಪ್ರಕರಣವನ್ನು ಮುಚ್ಚಿ ಹಾಕಿದ ಮಂಗಳೂರು ವಿವಿ!; ಪ್ರಭಾವಿಗಳ ಒತ್ತಡ ಕಾರಣ?

09/02/2023, 21:05

ಮಂಗಳೂರು(reporterkarnataka.com): ಕುಲಪತಿ ಹುದ್ದೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಲಂಚ ಕೊಟ್ಟ ಪ್ರಕರಣವನ್ನು ವಿವಿ ಆಡಳಿತ ಮುಚ್ಚಿ ಹಾಕಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಾಧ್ಯಾಪಕನ ವಿರುದ್ದ ಕ್ರಮ ಕೈಗೊಳ್ಳದೇ ಇತ್ಯರ್ಥ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು ವಿವಿ ಪ್ರಾಧ್ಯಾಪಕ ಜಯಶಂಕರ್ ಅವರು ರಾಯಚೂರು ವಿವಿ ಕುಲಪತಿ ಹುದ್ದೆ ಪಡೆಯಲು ಲಂಚ ಕೊಟ್ಟಿದ್ದರು. ಮಂಗಳೂರು ವಿವಿ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಅವರು 16 ಲಕ್ಷ ಲಂಚ ಕೊಟ್ಟರೂ ಕುಲಪತಿ ಹುದ್ದೆ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು, ಈ ಮಧ್ಯೆ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ್ದ ಜಯಶಂಕರ್ ಗೆ ಮಂಗಳೂರು ವಿವಿ ಸಿಂಡಿಕೇಟ್ ನೋಟೀಸ್ ನೀಡಿತ್ತು. 2021ರ ಏ.9 ರ ಸಿಂಡಿಕೇಟ್ ಸಭೆಯಲ್ಲಿ ಜಯಶಂಕರ್ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಿದ್ದರು.

ನಿವೃತ್ತ ಜಿಲ್ಲಾ ಜಡ್ಜ್ ಬೈಲೂರು ಶಂಕರ ರಾಮ ಸಮಿತಿ ಈ ಕುರಿತು ತನಿಖೆ ನಡೆಸಿ 2022ರ ಜೂನ್ 1ರಂದು ತನಿಖಾ ವರದಿ ಸಲ್ಲಿಸಿತ್ತು. ತನಿಖೆಯಲ್ಲಿ ಜಯಶಂಕರ್ ಅವರು ಕುಲಪತಿ ಹುದ್ದೆಗೆ ಲಂಚ ಕೊಟ್ಟಿರುವುದು ದೃಢಪಟ್ಟಿತ್ತು.
ಕುಲಪತಿ ಹುದ್ದೆ ಪಡೆಯಲು ನ್ಯಾಯೋಚಿತವಲ್ಲದ ದಾರಿಯಲ್ಲಿ ಹಣ ನೀಡಿದ್ದು ಸರಿಯಲ್ಲ. ಮಂಗಳೂರು ವಿವಿಯ ಹೆಸರು, ಘನತೆ, ಪ್ರತಿಷ್ಠೆ ಕೆಳಮಟ್ಟಕ್ಕೆ ಇಳಿದಂತಾಗಿದೆ. ಮಂಗಳೂರು ವಿವಿ ಉದ್ಯೋಗಿಗಳ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಮಿತಿ ವರದಿ ನೀಡಿತ್ತು. ಆದರೆ ಮಂಗಳೂರು ವಿಶ್ವ ವಿದ್ಯಾನಿಲಯ ಜಯಶಂಕರ್ ಹಣ ನೀಡಿರುವುದು ದೃಢಪಟ್ಟರೂ ಪ್ರಾಧ್ಯಾಪಕ ಜಯಶಂಕರ್ ಗೆ ತಿಳುವಳಿಗೆ ಪತ್ರ ನೀಡಿ ಪ್ರಕರಣ ಇತ್ಯರ್ಥಗೊಳಿಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು