6:32 PM Thursday25 - December 2025
ಬ್ರೇಕಿಂಗ್ ನ್ಯೂಸ್
ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:… ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60… ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ

ಇತ್ತೀಚಿನ ಸುದ್ದಿ

ಕುದ್ರೋಳಿ ಯುವಕ ಸಂಘದಿಂದ ಆಟಿಡೊಂಜಿ ಕೂಟ: ಮಕ್ಕಳಿಂದ ಆಟಿ ಕೊಡಂಗೆ ನೃತ್ಯ

01/08/2024, 01:03

ಮಂಗಳೂರು(reporterkarnataka.com): ಕುದ್ರೋಳಿ ಯುವಕ ಸಂಘ ಸಂಘದ ವತಿಯಿಂದ ನಮ್ಮ ತುಳುನಾಡಿನ ಆಟಿ ತಿಂಗಳಿನ (ಆಷಾಢ ಮಾಸದ) ವೈಶಿಷ್ಟ್ಯಮಯ ಸಂಸ್ಕೃತಿಯನ್ನು ನಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ಕೂಟ ಸಂಘದ ಮಹಿಳಾ ಸಮಿತಿಯ ಸಹಯೋಗದೊಂದಿಗೆ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಸ್ವರೂಪ ಎನ್. ಶೆಟ್ಟಿ ಹಾಗೂ ಜ್ಯೋತಿ ಎಸ್ ಶೆಟ್ಟಿ ಅವರುಗಳು ಭಾಗವಹಿಸಿದ್ದರು. ನಮ್ಮ ತುಳುನಾಡಿನ ಆಚರಣೆಗಳು ಸಾಂಸ್ಕೃತಿಕ ಹಾಗೂ ನಂಬಿಕೆಗಳ ಆಧಾರವಾಗಿದ್ದು, ಆಟಿದ ಆ ಕಷ್ಟದ ದಿನಗಳ ಬಗ್ಗೆ ಹಾಗೂ ಆಟಿದ ಮಹತ್ವದ ಬಗ್ಗೆ ಅತಿಥಿಗಳು ಸಭೆಗೆ ಮಾಹಿತಿ ನೀಡಿದರು. ನಂತರ ಗ್ರಾಮದ ಮಕ್ಕಳಿಂದ ಆಟಿ ಕೊಡಂಗೆ ನೃತ್ಯ ಹಾಗೂ ಆಟಿಗೆ ಸಂಬಂಧಪಟ್ಟ ನೃತ್ಯ ಕಾರ್ಯಕ್ರಮಗಳು ಜರಗಿತು. ಪ್ರಾರಂಭದಲ್ಲಿ ಶಲ ವೀಣಾ ಕಿರಣ್ ಸ್ವಾಗತಿಸಿದರು, ವಿಜಯಶ್ರೀ ಅತಿಥಿಗಳ ಪರಿಚಯ ಮಾಡಿದರು. ಶಿಲ್ಪಾ ಆಟಿದ ಮದಿಪು ನೀಡಿದರು.
ಕವಿತಾ ಸಾಲಿಯಾನ್ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶಂಕರ್ ಬರ್ಕೆ, ಉಪಾಧ್ಯಕ್ಷ ರವೀಂದ್ರ ಆರ್.ಆರ್., ಕಾರ್ಯದರ್ಶಿ ರಾಜೇಶ್ ಕುದ್ರೋಳಿ, ಕೋಶಾಧಿಕಾರಿ ದಿನೇಶ್ ಅಂಚನ್ ಮತ್ತು ಮಹಿಳಾ ಸಮಿತಿಯ ಸಂಚಾಲಕಿ ಸುಮನ್ ಸುನೀಲ್, ಸಹ ಸಂಚಾಲಕಿ ಭಾನುಮತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಸದಸ್ಯರು ಮಹಿಳಾ ಸಮಿತಿಯ ಸದಸ್ಯರು ಹಾಗೂ ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಂಘದ ಮಹಿಳಾ ಸಮಿತಿಯ ಸದಸ್ಯರು ತಯಾರಿಸಿದ ಆಟಿಗೆ ಸಂಬಂಧಪಟ್ಟಂತಹ ವಿವಿಧ ತಿಂಡಿ ತಿನಸುಗಳನ್ನು ಉಣ ಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು