1:55 PM Wednesday19 - November 2025
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ…

ಇತ್ತೀಚಿನ ಸುದ್ದಿ

ಕುದ್ರೋಳಿ ಯುವಕ ಸಂಘದಿಂದ ಆಟಿಡೊಂಜಿ ಕೂಟ: ಮಕ್ಕಳಿಂದ ಆಟಿ ಕೊಡಂಗೆ ನೃತ್ಯ

01/08/2024, 01:03

ಮಂಗಳೂರು(reporterkarnataka.com): ಕುದ್ರೋಳಿ ಯುವಕ ಸಂಘ ಸಂಘದ ವತಿಯಿಂದ ನಮ್ಮ ತುಳುನಾಡಿನ ಆಟಿ ತಿಂಗಳಿನ (ಆಷಾಢ ಮಾಸದ) ವೈಶಿಷ್ಟ್ಯಮಯ ಸಂಸ್ಕೃತಿಯನ್ನು ನಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಸಲುವಾಗಿ ಆಟಿಡೊಂಜಿ ದಿನ ಕೂಟ ಸಂಘದ ಮಹಿಳಾ ಸಮಿತಿಯ ಸಹಯೋಗದೊಂದಿಗೆ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಸ್ವರೂಪ ಎನ್. ಶೆಟ್ಟಿ ಹಾಗೂ ಜ್ಯೋತಿ ಎಸ್ ಶೆಟ್ಟಿ ಅವರುಗಳು ಭಾಗವಹಿಸಿದ್ದರು. ನಮ್ಮ ತುಳುನಾಡಿನ ಆಚರಣೆಗಳು ಸಾಂಸ್ಕೃತಿಕ ಹಾಗೂ ನಂಬಿಕೆಗಳ ಆಧಾರವಾಗಿದ್ದು, ಆಟಿದ ಆ ಕಷ್ಟದ ದಿನಗಳ ಬಗ್ಗೆ ಹಾಗೂ ಆಟಿದ ಮಹತ್ವದ ಬಗ್ಗೆ ಅತಿಥಿಗಳು ಸಭೆಗೆ ಮಾಹಿತಿ ನೀಡಿದರು. ನಂತರ ಗ್ರಾಮದ ಮಕ್ಕಳಿಂದ ಆಟಿ ಕೊಡಂಗೆ ನೃತ್ಯ ಹಾಗೂ ಆಟಿಗೆ ಸಂಬಂಧಪಟ್ಟ ನೃತ್ಯ ಕಾರ್ಯಕ್ರಮಗಳು ಜರಗಿತು. ಪ್ರಾರಂಭದಲ್ಲಿ ಶಲ ವೀಣಾ ಕಿರಣ್ ಸ್ವಾಗತಿಸಿದರು, ವಿಜಯಶ್ರೀ ಅತಿಥಿಗಳ ಪರಿಚಯ ಮಾಡಿದರು. ಶಿಲ್ಪಾ ಆಟಿದ ಮದಿಪು ನೀಡಿದರು.
ಕವಿತಾ ಸಾಲಿಯಾನ್ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ಶಂಕರ್ ಬರ್ಕೆ, ಉಪಾಧ್ಯಕ್ಷ ರವೀಂದ್ರ ಆರ್.ಆರ್., ಕಾರ್ಯದರ್ಶಿ ರಾಜೇಶ್ ಕುದ್ರೋಳಿ, ಕೋಶಾಧಿಕಾರಿ ದಿನೇಶ್ ಅಂಚನ್ ಮತ್ತು ಮಹಿಳಾ ಸಮಿತಿಯ ಸಂಚಾಲಕಿ ಸುಮನ್ ಸುನೀಲ್, ಸಹ ಸಂಚಾಲಕಿ ಭಾನುಮತಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಸದಸ್ಯರು ಮಹಿಳಾ ಸಮಿತಿಯ ಸದಸ್ಯರು ಹಾಗೂ ಪರಿಸರದ ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಂಘದ ಮಹಿಳಾ ಸಮಿತಿಯ ಸದಸ್ಯರು ತಯಾರಿಸಿದ ಆಟಿಗೆ ಸಂಬಂಧಪಟ್ಟಂತಹ ವಿವಿಧ ತಿಂಡಿ ತಿನಸುಗಳನ್ನು ಉಣ ಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು