1:26 PM Tuesday20 - January 2026
ಬ್ರೇಕಿಂಗ್ ನ್ಯೂಸ್
ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಬಾಣದ ವಂಶಸ್ಥ ಕುಟುಂಬದವರಿಂದ ಶ್ರೀಊರಮ್ಮದೇವಿಗೆ ಶ್ರಾವಣ ಪರ್ವ ಪ್ರಸಾದ ಸೇವೆ

13/08/2024, 21:24

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಗೆ, ಶ್ರಾವಣ ಮಾಸದ ಮಂಗಳವಾರ ಪ್ರಯುಕ್ತ ಪ್ರಸಾದ ಪರ್ವ ಜರುಗಿತು.


ಪಟ್ಟಣದ 16ನೇ ವಾರ್ಡ್ ನಿವಾಸಿಗಳಾದ ವಾಲ್ಮೀಕಿ ಸಮುದಾಯದ” ಬಾಣದ ಮನೆತನದ” ಕುಟುಂಬಸ್ಥರಿಂದ, ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ ನಡೆಯಿತು. ಶ್ರೀಊರಮ್ಮ ದೇವಿಗೆ ಶ್ರ‍ಾವಣ ಪರ್ವ ವಿಶೇಷ ಪೂಜೆ, ಪರ್ವ ಪ್ರಸಾದ ಸೇವೆ ನೆರವೇರಿಸಲಾಯಿತು. ಬಾಣದ ವಂಶಸ್ಥ ಕುಟುಂಬದವರು, ಹಲವು ವರ್ಷಗಳಿಂದ ಪ್ರತಿ ವರ್ಷದ ಶ್ರಾವಣ ಮಾಸದಲ್ಲಿ ಸಾರ್ವಜನಿಕರಿಗೆ ಪರ್ವ ಪ್ರಸಾದ ಸೇವೆ ಜರುಗಿಸುತ್ತಾರೆ. ವಾಲ್ಮೀಕಿ ಸಮುದಾಯದ ಬಾಣದ ವಂಸ್ಥರ ಕುಟುಂಬದವರು ಸಾಮೂಹಿಕವಾಗಿ ಸಹಭಾಗಿತ್ವದೊಂದಿಗೆ, ಪ್ರತಿ ವರ್ಷದ ಶ್ರಾವಣ ಮಾಸದ ಮಂಗಳವಾರದಂದು. ಶ್ರೀಊರಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಿ, ನಂತರ ಪರ್ವ ಪ್ರಸಾದ ಸೇವೆ ನೆರವೇರಿಸುತ್ತಿದ್ದಾರೆ, ಅಂತೆಯೇ ಇಂದು ಶ್ರ‍ವಣ ಮಾಸದ ಮಂಗಳವಾರದಂದು ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ. ವಿಶೇಷ ಪರ್ವ ಪ್ರಸಾದ ಸೇವೆ ಏರ್ಪಡಿಸಲಾಗಿತ್ತು, ಪ್ರಸಾದ ಸಂದರ್ಭದಲ್ಲಿ ಪಟ್ಟಣದ ನೂರಾರು ಭಕ್ತರು ಸೇರಿದಂತೆ. ಸುತ್ತ ಮತ್ತಲಿನ ಕೆಲವು ಗ್ರಾಮಗಳಲ್ಲಿನ ನೂರಾರು ಭಕ್ತರು, ನಾಗರೀಕರು ಹಿರಿಯರು ಮಹಿಳೆಯರು ಮಕ್ಕಳು. ಶ್ರೀಊರಮ್ಮ ದೇವಿಯ ದರ್ಶನ ಪಡೆದು ನಂತರ, ದೇವಸ್ಥಾನದ ಆವರಣದಲ್ಲಿನ ಪರ್ವದಲ್ಲಿ ಭಾಗವಿಹಿಸಿ ಪ್ರಸಾದ ಸ್ವೀಕರಿಸಿದರು. ಬಾಣದ ಮನೆತನದ ಕುಟುಂಬಸ್ಥರು ಎಲ್ಲಾ ಹಿರಿಯರು, ಅವರ ನೆಂಟರು ಬಂಧು ಬಳಗ ಸ್ನೇಹಿತರು ಹಿತೈಷಿಗಳು. ಶ್ರೀಊರಮ್ಮ ದೇವಿಯ ಭಕ್ತ ಮಂಡಳಿಯ ಸಹಯೋಗದೊಂದಿಗೆ, ಪ್ರಸಾದ ಪರ್ವದಲ್ಲಿ ಸಕ್ತೀಯವಾಗಿ ಪಾಲ್ಗೊಂಡು, ಪರ್ವ ಪ್ರಸಾದ ಸೇವೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು