8:41 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಇತ್ತೀಚಿನ ಸುದ್ದಿ

Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ ಕಡಿಮೆ, ಬೆಲೆಯ ಮೇಲೂ ಬರೆ!

17/04/2025, 22:39

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ರಾಜ್ಯದ ಮಾವು ತೋಟಗಳ ಹೃದಯಭಾಗವಾಗಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಈ ವರ್ಷದ ಮಾವು ಸುಗ್ಗಿಗೆ ಇನ್ನೂ ಕೇವಲ ಒಂದು ತಿಂಗಳು ಬಾಕಿಯಿದ್ದು, ಈ ಬಾರಿ ಇಳುವರಿ ಹಾಗೂ ಮಾರಾಟದ ಬಗ್ಗೆ ರೈತರು ಮತ್ತು ವ್ಯಾಪಾರಸ್ಥರಲ್ಲಿ ಆತಂಕ ಮನೆಮಾಡಿದೆ.
ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 59 ಸಾವಿರ ಎಕರೆ ಪ್ರದೇಶದಲ್ಲಿ ಮಾವಿನ ತೋಟಗಳು ಹರಡಿದ್ದು, ಇದು ಈ ಭಾಗದ ಮುಖ್ಯ ಕೃಷಿ ಆಧಾರಿತ ಆರ್ಥಿಕತೆಯ ಭಾಗವಾಗಿದೆ. ಟೊಮ್ಯಾಟೋ, ಇತರ ತರಕಾರಿಗಳೊಂದಿಗೆ ಮಾವು ಕೂಡ ಪ್ರಮುಖ ಹಣಕಾಸು ಆದಾಯದ ಮೂಲವಾಗಿದೆ.
ಈ ವರ್ಷ ಪ್ರಾರಂಭದಲ್ಲಿ ಮಾವಿನ ಗಿಡಗಳಲ್ಲಿ ಉತ್ತಮ ಪ್ರಮಾಣದಲ್ಲಿ ಹೂವುಗಳು ಕಾಣಿಸಿಕೊಂಡಿದ್ದರೂ, ತೀವ್ರ ಗಾಳಿ ಮತ್ತು ಅಕಾಲಿಕ ಮಳೆಯಿಂದ ಹೂವು ಉದುರಿಕೊಂಡು, ಇಳುವರಿ ತೀವ್ರವಾಗಿ ಹಿಂಜರಿದಿದೆ. ಮೂಲಗಳ ಪ್ರಕಾರ, ಈ ವರ್ಷ ಕೇವಲ ಶೇಕಡಾ 30ರಷ್ಟೇ ಇಳುವರಿ ನಿರೀಕ್ಷೆ ಇದೆ.
ಸಾಮಾನ್ಯವಾಗಿ ಮೇ 15ರಿಂದ ಆರಂಭವಾಗುವ ಮಾವಿನ ಮಾರುಕಟ್ಟೆ ಚಟುವಟಿಕೆಗಳು ಈ ವರ್ಷವೂ ಆಗುವ ಸಾಧ್ಯತೆಯಿದೆ. ಆದರೆ ಕಡಿಮೆ ಇಳುವರಿಯ ಪರಿಣಾಮವಾಗಿ, ಮಾರುಕಟ್ಟೆ ಚಟುವಟಿಕೆಗಳು ಕೇವಲ ಎರಡು ತಿಂಗಳು ಮಾತ್ರ ಸೀಮಿತವಾಗಬಹುದೆಂದು ಅಂದಾಜಿಸಲಾಗಿದೆ.
ಇನ್ನೊಂದು ಕಡೆ, ಬೆಲೆಗೂ ನಿರೀಕ್ಷೆಯಿಲ್ಲ ಎಂಬ ಸ್ಥಿತಿಯಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಇತರ ರಾಜ್ಯಗಳಿಂದಲೂ ಈ ಅವಧಿಯಲ್ಲಿ ಮಾವು ಮಾರುಕಟ್ಟೆಗೆ ಬರಲಿರುವುದರಿಂದ ಸ್ಪರ್ಧೆ ಉಂಟಾಗಲಿದೆ. ಇದರ ಪರಿಣಾಮವಾಗಿ ಶ್ರೀನಿವಾಸಪುರದ ಮಾವಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಕಡಿಮೆಯಾಗಿರುವುದಾಗಿ ವ್ಯಾಪಾರ ವಲಯ ಅಭಿಪ್ರಾಯ ವ್ಯಕ್ತಪಡಿಸಿದೆ.


ರೋಗಗಳು ನಿಯಂತ್ರಣಕ್ಕೆ ಹಾಗೂ ಹೆಚ್ಚು ಇಳುವರಿ ಸಿಗಲೆಂದು ರೈತರು ಹಾಗೂ ವ್ಯಾಪಾರಸ್ಥರು ಔಷಧ ಸಿಂಪಡನೆ ಸೇರಿದಂತೆ ಹಲವು ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿದ್ದಾರೆ. ಇತ್ತ, ಮೌಲ್ಯಯುತ ಮಾವು ಪಡೆಯುವ ನಿರೀಕ್ಷೆಯಲ್ಲಿ ಹಲವರು ರೈತರಿಂದ ಮುಂಗಡವಾಗಿ ಮಾವಿನ ಕಾಯಿಗಳನ್ನು ಖರೀದಿಸಿದ್ದಾರೆ. ಆದರೆ ಇಳುವರಿ ನಿರೀಕ್ಷೆ ಮಿತವಾಗಿರುವುದರಿಂದ ಬಂಪರ್ ಲಾಭದ ಕನಸು ಈಗ ತೂಗುತಿದ್ದ ಗಾಜಿನಂತೆ ಕಾಣುತ್ತಿದೆ.
ಈ ಬಾರಿ ಮಾವಿನ ಇಳುವರಿ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತಿದ್ದು, ಇದು ರೈತರು ಮತ್ತು ವ್ಯಾಪಾರಸ್ಥರ ಆತ್ಮವಿಶ್ವಾಸಕ್ಕೆ ಆಘಾತವಾಗಿದೆ. ಸುಗ್ಗಿ ಆರಂಭವಾದ ಬಳಿಕವೇ ನಿಜವಾದ ಸ್ಥಿತಿ ತಿಳಿಯಲಿದ್ದು, ಈ ಬಾರಿ ಮಾರುಕಟ್ಟೆ ಲಾಭದಾಯಕವಾಗುತ್ತದೆಯೋ ಅಥವಾ ಮತ್ತಷ್ಟು ನಷ್ಟವನ್ನು ತರುವುದೋ ಎಂಬುದನ್ನು ಕಾಲವೇ ತೋರಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು