8:54 AM Monday4 - May 2026
ಬ್ರೇಕಿಂಗ್ ನ್ಯೂಸ್
ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಹೋಂ ಸ್ಟೇ ಮಾಲೀಕನಿಗೆ… ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ…

ಇತ್ತೀಚಿನ ಸುದ್ದಿ

ಕಿನ್ನರಿ ಕಿಂಡರ್‌ಗಾರ್ಟನ್ ಮಕ್ಕಳ ಜತೆ ವಾಯ್ಸ್ ಆಫ್ ಆರಾಧನಾ ನಿರ್ದೇಶಕಿ ಪದ್ಮಶ್ರೀ ಹುಟ್ಟುಹಬ್ಬ

30/09/2022, 11:46

ಮಂಗಳೂರು(reporterkarnataka.com): ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಹಾಗೂ ಆರದಿರಲಿ ಬದುಕು ಆರಾಧನಾ ತಂಡದ ಪ್ರವರ್ತಕಿ ಪದ್ಮಶ್ರೀ ನಿಡ್ಡೋಡಿ ಅವರ ಹುಟ್ಟುಹಬ್ಬ ನಗರದ ದೇರೆಬೈಲ್ ಕೊಂಚಾಡಿಯ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಕಿನ್ನರಿ ಕಿಂಡರ್‌ಗಾರ್ಟನ್ ನ ಮಕ್ಕಳ ಜತೆ ಆಚರಿಸಲಾಯಿತು. ಕಿಂಡರ್‌ಗಾರ್ಟನ್ ನ ಸಹಾಯಕ ಶಿಕ್ಷಕಿ ಸುಜಾತಾ ಅವರಿಗೆ ಈ ಸಂದರ್ಭದಲ್ಲಿ ಜಿನಸಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.


ಹುಟ್ಟುಹಬ್ಬದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದ ಪ್ರತಿಭೆಗಳಿಂದ ಸಂಗೀತ ರಸಮಂಜರಿ ನಡೆಯಿತು. ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. p
ಕಿನ್ನರಿ ಕಿಂಡರ್‌ಗಾರ್ಟನ್ ಪರವಾಗಿ ಮೊದಲು ಪದ್ಮಶ್ರೀ ಅವರ ಹುಟ್ಟುಹಬ್ಬದ ಕೇಕ್ ಕಟ್ ಮಾಡಲಾಯಿತು. ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ವಾಯ್ಸ್ ಆಫ್ ಆರಾಧನಾ00l ತಂಡದಿಂದ ಕೇಕ್ ಕಟ್ ಮಾಡಲಾಯಿತು.

ಬಾಲ ಪ್ರತಿಭೆಗಳಾದ ಅಶ್ಮಿತ್ ಎ.ಜೆ., ಅನನ್ಯ ನಾರಾಯಣ. ಯಶಸ್ ಭಟ್ ಮೊದಲಾದವರಿಂದ ಸಂಗೀತ ಸುಧೆ ಹರಿಯಿತು. ವಾಯ್ಸ್ ಆಫ್ ಆರಾಧನಾ ತಂಡದ ಅಭಿಷೇಕ್ ಶೆಟ್ಟಿ ಐಕಳ, ದೀನ್ ರಾಜ್,  ಕೆ. ದೇವಿಪ್ರಸಾದ್, ಬಸವರಾಜ್ ಮಂತ್ರಿ, ಜಯರಾಮ್,  ಜ್ಯೋತ್ಸ್ನಾ, ಆಶಾ, ಪ್ರಸಾದ್, ಕಿನ್ನರಿ ಕಿಂಡರ್‌ಗಾರ್ಟನ್ ನಿರ್ದೇಶಕಿ ಲತಾ ಎ. ಕಲ್ಲಡ್ಕ ಮುಂತಾದವರು ಉಪಸ್ಥಿತರಿದ್ದರು. ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿದರು.

ಇತ್ತೀಚಿನ ಸುದ್ದಿ

ಜಾಹೀರಾತು