6:25 PM Saturday4 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ಕಾರವಾರ ‘ಸಿದ್ಧಬಸವೇಶ್ವರ’ ಅನುಭವ ಮಂಟಪದಲ್ಲಿ ‘ಅನುಭಾವ ಸಂಗಮ’ ಸಂಪನ್ನ

26/08/2022, 20:49

ಕಾರವಾರ(reporterkarnataka.com):
ಶರಣ ಮಾಸದ ಕೊನೆಯ ಸೋಮವಾರದಂದು ಸುಕ್ಷೇತ್ರ ಕಾರವಾರದ ಬಂಗಾರಪ್ಪ ಕಾಲೋನಿಯ “ಸಿದ್ಧಬಸವೇಶ್ವರ” ಅನುಭವ ಮಂಟಪದಲ್ಲಿ “ಅನುಭಾವ ಸಂಗಮ” ಕಾರ್ಯಕ್ರಮ ಸಂತೋಷ ಸಡಗರದಿಂದ ಸಂಪನ್ನಗೊಂಡಿತು.


ಅಂದು ಶರಣ ಸಿದ್ದಯ್ಯಸ್ವಾಮಿ ಚೌಕಿಮಠ ಗೋನಾಳ ಅವರೊಂದಿಗೆ ಅವರ ಸಹೋದರರ ಕುಟುಂಬವು ಪ್ರತಿವರ್ಷದಂತೆ ಸ್ಥಳೀಯ ಆಯುಷ ಇಲಾಖೆಯ ಮುಖ್ಯಸ್ಥರಾದ ಶರಣ ಡಾ.ಮಲ್ಲಿಕಾರ್ಜುನ ಹಿರೇಮಠ ಮಸ್ಕಿ ಅವರ ನೇತೃತ್ವದಲ್ಲಿ ಒಂದಾಗಿ ಸಕಲ ಸಿದ್ದತೆಯನ್ನು ಮಾಡಿದ್ದಾರೆ. ಹಾಗೆಯೆ ಅಂದು ಸಮಾರಂಭದಲ್ಲಿ ಅಕ್ಕಪಕ್ಕದ ಎಲ್ಲಾ ಜನಸಮುದಾಯದ ಜನಾಸಕ್ತರು ಭಾಗವಹಿಸಿದ್ದು, ನಿಜಕ್ಕೂ “ಇವನಮ್ಮವ” ಎಂಬ ಅಪ್ಪ ಸಂಗನಬಸವಣ್ಣ ಅವರ ಪವಿತ್ರ ವಚನವು ನೆನಪಿಗೆ ತರುವಂತೆ ಆಯೋಜನೆಗೊಂಡಿದೆ. ಅಂದು ಅಲ್ಲಮಪ್ರಭೂ ಅನುಭಾವ ಪೀಠ, ಕಾಂತಾವರ, ಕಾರ್ಕಳ, ಉಡುಪಿಯ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ ಅವರು ಬಸವಾದಿ ಶರಣರ ಅನೇಕ ಪವಿತ್ರ ವಚನಗಳನ್ನು ಉಲ್ಲೇಖಿಸುತ್ತಾ, ಅಪ್ಪ ಸಂಗನಬಸವಣ್ಣ ಅವರು ಹಾಕಿಕೊಟ್ಟ ಪಥವನ್ನು ನಾವೆಲ್ಲರೂ ಅನುಸರಿಸಿದರೆ ಮಾತ್ರ ಈ ಜಗತ್ತಿನ ಭಾವಿ ಜನಾಂಗವು ಸುರಕ್ಷಿತವಾಗಿ ಬದುಕಲು ಸಾಧ್ಯವೆಂಬ ಮಾತನ್ನು ಹಲವಾರು ದೃಷ್ಟಾಂತಗಳೊಂದಿಗೆ ಹೇಳಿದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಳವಾಗಿ ಮುಕ್ತಾಯಗೊಂಡಿತ್ತು, 

ಇತ್ತೀಚಿನ ಸುದ್ದಿ

ಜಾಹೀರಾತು