2:22 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಕಾರ್ಕಳ: ಬೆಂಕಿ ಅನಾಹುತ; ಕಂಬಳ ಕೋಣ ಥೊನ್ಸೆ ಮತ್ತು ಅಪ್ಪು ಬಲಿ

31/05/2025, 19:15

ಕಾರ್ಕಳ(reporterkarnataka.com): ಕಾರ್ಕಳ ತಾಲೂಕಿನ ಬೇಲಾಡಿ ಬಾವ ಕೃಷಿಕ ಅಶೋಕ್ ಶೆಟ್ಟಿಯವರ ಕನಹಲಗೆಯ ಎರಡು ಹೆಸರಾಂತ ಕಂಬಳ ಕೋಣಗಳು – ಥೊನ್ಸೆ ಮತ್ತು ಅಪ್ಪು – ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿಗೆ ಬಲಿಯಾಗಿವೆ.


ಈ ಕೋಣಗಳು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಭಾರಿ ಬಹುಮಾನಗಳನ್ನು ಗೆದ್ದಿದ್ದವು.
ಘಟನೆ ರಾತ್ರಿ ಸಂಭವಿಸಿದ್ದು, ಹತ್ತಿರವಿದ್ದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಅದರ ಬಿಳವಣಿಗೆ ತಡೆಗಟ್ಟಲಾಗಲಿಲ್ಲ. ಹಟ್ಟಿಗೆ ಸೇರ್ಪಡೆಯಾಗಿ ಇದ್ದ ಭತ್ತದ ಬಣವೆಗೆ ಬೆಂಕಿ ಬಿದ್ದ ಕಾರಣ, ಉರಿಯುವ ವ್ಯಾಪ್ತಿ ಹೆಚ್ಚಾಗಿ ಕಟ್ಟಿಹಾಕಿದ್ದ ಕೋಣಗಳ ಸಹಿತವು ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯರ ಪ್ರಕಾರ, ಬೆಂಕಿಯ ತೀವ್ರತೆಯಿಂದಾಗಿ ಥೊನ್ಸೆ ಮತ್ತು ಅಪ್ಪು ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಕಂಬಳ ಕೋಣಗಳನ್ನು ಸಾಕಲು ಮಾಲೀಕರಾದ ಅಶೋಕ್ ಶೆಟ್ಟಿ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದರು. ಈ ಕಣ್ಮಣಿಗಳ ಸಾವಿಗೆ ಹಳ್ಳಿ ಜನತೆಯಲ್ಲಿ ಆಘಾತ ಮತ್ತು ದುಃಖದ ಛಾಯೆ ಹರಡಿದೆ.
“ಥೊನ್ಸೆ ಮತ್ತು ಅಪ್ಪು ಮಾತ್ರ ಕೋಣಗಳು ಅಲ್ಲ. ಅವು ನಮ್ಮ ಕುಟುಂಬದ ಸದಸ್ಯರಂತಾಗಿದ್ದವು. ಇಂತಹದು ಆಗಲಿದೆ ಅಂತ ಕನಸೂ ಕಂಡಿರಲಿಲ್ಲ,” ಎಂದು ದುಃಖಭರಿತ ಕಂಠದಲ್ಲಿ ಮಾಲಿಕ ಅಶೋಕ್ ಶೆಟ್ಟಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು