12:58 PM Saturday4 - July 2026
ಬ್ರೇಕಿಂಗ್ ನ್ಯೂಸ್
Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ

ಇತ್ತೀಚಿನ ಸುದ್ದಿ

ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕ ಪದಗ್ರಹ: ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷ

03/02/2022, 09:08

ಬಂಟ್ವಾಳ(reporterkarnataka.com): ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. 

ಜೇಸಿ ಮಂಗಳೂರು ಇಂಪ್ಯಾಕ್ಟ್‌ ಪ್ರವರ್ತಿತ ಜೆಸಿಐ ಬಿ.ಸಿ. ರೋಡ್ ಪವರ್ ಸ್ಟಾರ್ ಗೆ ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷರಾಗಿ, ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಮರೀಟಾ ಕ್ರಿಸ್ಟೀನ್ ಡಿ. ಜತೆ ಕಾರ್ಯದರ್ಶಿಯಾಗಿ,  ಸುಭಾಶ್  ರೈ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಅಶ್ರಫ್ ಎಂ.ಬಿ, ಸತೀಶ್ ಸಂಪಾಜೆ, ಸುನಿಲ್ ಮುಡ್ಡಾಜೆ ರಾಯಿ, ಸುರೇಶ್ ಮರೋಳಿ, ಪ್ರಥಮ ಮಹಿಳೆಯಾಗಿ ಪುನೀತಾ ಎಸ್., ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕನಿಷ್ಕ್ ಎಸ್. ರೈ, ನಿರ್ದೇಶಕರು ಮತ್ತು ಘಟಕದ ವಿವಿಧ ಜವಾಬ್ದಾರಿಗಳನ್ನು ಅರ್ಜುನ್ ಆಳ್ವ, ಅನುಪಮಾ ಎಸ್. ಕಡಬ, ರವಿರಾಜ್ ಶೆಟ್ಟಿ ಪಾಲ್ತಾಜೆ, ಸುಹಾಸ್ ಕೆ. ಕಲ್ಲಡ್ಕ, ದೀಪಕ್ ರೈ ದೇರಳಕಟ್ಟೆ, ರೋಹಿತ್ ರಾಯಿ, ನಾಗರಾಜ್ ಶೆಟ್ಟಿ ಮೊಡಂಕಾಪು, ಶರತ್ ಕಲ್ಲಡ್ಕ, ವಿದ್ಯಾ ಎಸ್. ರೈ, ಭವ್ಯಾ ಸುಧೀರ್ ಶೆಟ್ಟಿ, ಬೇಬಿ ಸತೀಶ್ ಅವರಿಗೆ ನಿಯೋಜಿಸಲಾಯಿತು.

ಬಿ.ಸಿ.ರೋಡ್‌ನ ವಕೀಲ ಕಾರ್ತಿಕ್ ಎಂ . ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಗೌರವ ಅತಿಥಿಗಳಾಗಿದ್ದರು. ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ಪ್ರಾಜೆಕ್ಟ್ ಡೈರೆಕ್ಟರ್ ಬಿ.ಡಿ.ದತ್ತಾತ್ತೇಯ, ಜೆಸಿಐ ಮಂಗಳೂರು ಇಂಪ್ಯಾಕ್ಟ್ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಎ.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಚೇತನಾ ದತ್ತಾತ್ರೇಯ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು