3:03 AM Friday11 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕ ಪದಗ್ರಹ: ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷ

03/02/2022, 09:08

ಬಂಟ್ವಾಳ(reporterkarnataka.com): ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. 

ಜೇಸಿ ಮಂಗಳೂರು ಇಂಪ್ಯಾಕ್ಟ್‌ ಪ್ರವರ್ತಿತ ಜೆಸಿಐ ಬಿ.ಸಿ. ರೋಡ್ ಪವರ್ ಸ್ಟಾರ್ ಗೆ ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷರಾಗಿ, ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಮರೀಟಾ ಕ್ರಿಸ್ಟೀನ್ ಡಿ. ಜತೆ ಕಾರ್ಯದರ್ಶಿಯಾಗಿ,  ಸುಭಾಶ್  ರೈ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಅಶ್ರಫ್ ಎಂ.ಬಿ, ಸತೀಶ್ ಸಂಪಾಜೆ, ಸುನಿಲ್ ಮುಡ್ಡಾಜೆ ರಾಯಿ, ಸುರೇಶ್ ಮರೋಳಿ, ಪ್ರಥಮ ಮಹಿಳೆಯಾಗಿ ಪುನೀತಾ ಎಸ್., ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕನಿಷ್ಕ್ ಎಸ್. ರೈ, ನಿರ್ದೇಶಕರು ಮತ್ತು ಘಟಕದ ವಿವಿಧ ಜವಾಬ್ದಾರಿಗಳನ್ನು ಅರ್ಜುನ್ ಆಳ್ವ, ಅನುಪಮಾ ಎಸ್. ಕಡಬ, ರವಿರಾಜ್ ಶೆಟ್ಟಿ ಪಾಲ್ತಾಜೆ, ಸುಹಾಸ್ ಕೆ. ಕಲ್ಲಡ್ಕ, ದೀಪಕ್ ರೈ ದೇರಳಕಟ್ಟೆ, ರೋಹಿತ್ ರಾಯಿ, ನಾಗರಾಜ್ ಶೆಟ್ಟಿ ಮೊಡಂಕಾಪು, ಶರತ್ ಕಲ್ಲಡ್ಕ, ವಿದ್ಯಾ ಎಸ್. ರೈ, ಭವ್ಯಾ ಸುಧೀರ್ ಶೆಟ್ಟಿ, ಬೇಬಿ ಸತೀಶ್ ಅವರಿಗೆ ನಿಯೋಜಿಸಲಾಯಿತು.

ಬಿ.ಸಿ.ರೋಡ್‌ನ ವಕೀಲ ಕಾರ್ತಿಕ್ ಎಂ . ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಗೌರವ ಅತಿಥಿಗಳಾಗಿದ್ದರು. ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ಪ್ರಾಜೆಕ್ಟ್ ಡೈರೆಕ್ಟರ್ ಬಿ.ಡಿ.ದತ್ತಾತ್ತೇಯ, ಜೆಸಿಐ ಮಂಗಳೂರು ಇಂಪ್ಯಾಕ್ಟ್ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಎ.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಚೇತನಾ ದತ್ತಾತ್ರೇಯ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು