12:37 AM Tuesday27 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕ ಪದಗ್ರಹ: ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷ

03/02/2022, 09:08

ಬಂಟ್ವಾಳ(reporterkarnataka.com): ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಬಿ.ಸಿ.ರೋಡ್ ಪವರ್ ಸ್ಟಾರ್ ಘಟಕದ ಪದಗ್ರಹಣ ಸಮಾರಂಭ ನಡೆಯಿತು. 

ಜೇಸಿ ಮಂಗಳೂರು ಇಂಪ್ಯಾಕ್ಟ್‌ ಪ್ರವರ್ತಿತ ಜೆಸಿಐ ಬಿ.ಸಿ. ರೋಡ್ ಪವರ್ ಸ್ಟಾರ್ ಗೆ ಸುಬ್ರಹ್ಮಣ್ಯ ಕೆ. ನೂತನ ಅಧ್ಯಕ್ಷರಾಗಿ, ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಮರೀಟಾ ಕ್ರಿಸ್ಟೀನ್ ಡಿ. ಜತೆ ಕಾರ್ಯದರ್ಶಿಯಾಗಿ,  ಸುಭಾಶ್  ರೈ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಉಪಾಧ್ಯಕ್ಷರಾಗಿ ಮಹೇಶ್ ಶೆಟ್ಟಿ, ಅಶ್ರಫ್ ಎಂ.ಬಿ, ಸತೀಶ್ ಸಂಪಾಜೆ, ಸುನಿಲ್ ಮುಡ್ಡಾಜೆ ರಾಯಿ, ಸುರೇಶ್ ಮರೋಳಿ, ಪ್ರಥಮ ಮಹಿಳೆಯಾಗಿ ಪುನೀತಾ ಎಸ್., ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕನಿಷ್ಕ್ ಎಸ್. ರೈ, ನಿರ್ದೇಶಕರು ಮತ್ತು ಘಟಕದ ವಿವಿಧ ಜವಾಬ್ದಾರಿಗಳನ್ನು ಅರ್ಜುನ್ ಆಳ್ವ, ಅನುಪಮಾ ಎಸ್. ಕಡಬ, ರವಿರಾಜ್ ಶೆಟ್ಟಿ ಪಾಲ್ತಾಜೆ, ಸುಹಾಸ್ ಕೆ. ಕಲ್ಲಡ್ಕ, ದೀಪಕ್ ರೈ ದೇರಳಕಟ್ಟೆ, ರೋಹಿತ್ ರಾಯಿ, ನಾಗರಾಜ್ ಶೆಟ್ಟಿ ಮೊಡಂಕಾಪು, ಶರತ್ ಕಲ್ಲಡ್ಕ, ವಿದ್ಯಾ ಎಸ್. ರೈ, ಭವ್ಯಾ ಸುಧೀರ್ ಶೆಟ್ಟಿ, ಬೇಬಿ ಸತೀಶ್ ಅವರಿಗೆ ನಿಯೋಜಿಸಲಾಯಿತು.

ಬಿ.ಸಿ.ರೋಡ್‌ನ ವಕೀಲ ಕಾರ್ತಿಕ್ ಎಂ . ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯರಾದ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಪೂರ್ವ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷ ದೀಪಕ್ ಗಂಗೂಲಿ ಗೌರವ ಅತಿಥಿಗಳಾಗಿದ್ದರು. ಜೆಸಿಐ ಮಂಗಳೂರು ಇಂಪ್ಯಾಕ್ಟ್ ಅಧ್ಯಕ್ಷರಾದ ಅನೀಶಾ ಗಂಗೂಲಿ, ಪ್ರಾಜೆಕ್ಟ್ ಡೈರೆಕ್ಟರ್ ಬಿ.ಡಿ.ದತ್ತಾತ್ತೇಯ, ಜೆಸಿಐ ಮಂಗಳೂರು ಇಂಪ್ಯಾಕ್ಟ್ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಎ.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಚೇತನಾ ದತ್ತಾತ್ರೇಯ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು